ಇಂದು ಪಾಕ್ ಭವಿಷ್ಯ ನಿರ್ಧಾರ
Team Udayavani, Jun 7, 2017, 1:33 PM IST
ಬರ್ಮಿಂಗಂ: ಪಾಕಿಸ್ಥಾನದ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ. ಸಫìರಾಜ್ ಖಾನ್ ಪಡೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಇಲ್ಲಿ ಗೆದ್ದರಷ್ಟೇ ಸೆಮಿಫೈನಲ್ ರೇಸ್ನಲ್ಲಿ ಉಳಿಯಲಿದೆ. ಮತ್ತೆ ಸೋತರೆ ಕೂಟದಿಂದ ನಿರ್ಗಮಿಸಲಿದೆ. ಸೋಲು-ಗೆಲುವಿನ ನಡುವೆ ಮಳೆ ಹಾಜರಾತಿಯನ್ನೂ ಗಮನಿಸಬೇಕಾ ಗುತ್ತದೆ!
ಪಾಕಿಸ್ಥಾನ ತನ್ನ ಮೊದಲ ಮುಖಾ ಮುಖೀಯಲ್ಲಿ ಭಾರತದ ವಿರುದ್ಧ 124 ರನ್ ಅಂತರದ ಭಾರೀ ಸೋಲುಂಡು ಒತ್ತಡದಲ್ಲಿದ್ದರೆ, ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ವಿರುದ್ಧ 96 ರನ್ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿದೆ. .
ಪಾಕ್ ಸಾಮರ್ಥ್ಯ ಸಾಲದು
ಭಾರತದ ವಿರುದ್ಧ ಪಾಕಿಸ್ಥಾನ ತೀರಾ ಕಳಪೆ ಪ್ರದರ್ಶನ ನೀಡಿತ್ತು. ಎಂದಿನ ಭಾರತ-ಪಾಕಿಸ್ಥಾನ ಪಂದ್ಯದ ಜೋಶ್ ಕಂಡುಬರಲಿಲ್ಲ. ಮಳೆಯ ನಡುವೆ ಏಕಪಕ್ಷೀಯವಾಗಿಯೇ ನಡೆದ ಈ ಪಂದ್ಯದಲ್ಲಿ ಭಾರತ ಸುಲಭದಲ್ಲಿ ಗೆದ್ದು ಬಂದಿತ್ತು. ಹರಿಣಗಳೆದುರು ಹೋರಾಡುವಾಗ ಪಾಕ್ ಸಾಮ ರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅನಿವಾರ್ಯ.
ಭಾರತದೆದುರು ಪಾಕಿಸ್ಥಾನದ ಬೌಲಿಂಗ್ ಕ್ಲಬ್ ಮಟ್ಟಕ್ಕೆ ಇಳಿದಿತ್ತು. 10 ಸಿಕ್ಸರ್, 27 ಬೌಂಡರಿ ಬಿಟ್ಟುಕೊಟ್ಟಿದ್ದರು.
ಎಡಗೈ ಸ್ಪಿನ್ನರ್ ವಹಾಬ್ ರಿಯಾಜ್ ಗಾಯಾಳಾಗಿ ಹೊರಗುಳಿದದ್ದು ಪಾಕಿಗೆ ಎದುರಾಗಿರುವ ದೊಡ್ಡ ಹೊಡೆತವೇನೂ ಅಲ್ಲ. ಏಕೆಂದರೆ ಅವರು ಭಾರತದೆದುರು ಎಸೆದ 8.4 ಓವರ್ಗಳಲ್ಲಿ 87 ರನ್ ಬಿಟ್ಟುಕೊಟ್ಟಿದ್ದರು. ಮೊಹಮ್ಮದ್ ಆಮೀರ್, ಇಮಾದ್ ವಾಸಿಮ್, ಹಸನ್ ಅಲಿ, ಶಾದಾಬ್ ಖಾನ್ ನಿಯಂತ್ರಿತ ದಾಳಿ ಸಂಘಟಿಸಿದರೆ ಪಾಕ್ ಮೇಲುಗೈ ಸಾಧಿಸಬಹುದು.
ಬಲಶಾಲಿ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ಬ್ಯಾಟಿಂಗ್, ಬೌಲಿಂಗ್, ಆಲ್ರೌಂಡರ್… ಹೀಗೆ ಎಲ್ಲ ವಿಭಾಗಗಳಲ್ಲೂ ಸಶಕ್ತವಾಗಿದೆ. ವಿಶ್ವ ದರ್ಜೆಯ ಆಟಗಾರರನ್ನೂ ಹೊಂದಿದೆ. ಆಮ್ಲ, ಡು ಪ್ಲೆಸಿಸ್, ಡ್ಯುಮಿನಿ ಶ್ರೀಲಂಕಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಫಾರ್ಮ್ ಸಾಬೀತುಪಡಿಸಿದ್ದಾರೆ. ಡಿ ಕಾಕ್, ಮಿಲ್ಲರ್ ಕೂಡ ಅಗತ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಬಲ್ಲರು. ಬೌಲಿಂಗ್ ವಿಭಾಗದಲ್ಲಿ ಮಾರಿಸ್, ರಬಾಡ, ತಾಹಿರ್, ಮಾರ್ಕೆಲ್, ಮಹಾರಾಜ್ ಅವರನ್ನು ಒಳಗೊಂಡಿದ್ದು, ಸಾಕಷ್ಟು ವೈವಿಧ್ಯವನ್ನು ಹೊಂದಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾ ವಳಿಯ ಇತಿಹಾಸವೂ ದಕ್ಷಿಣ ಆಫ್ರಿಕಾ ಪರವಾಗಿದೆ. ಪಾಕಿಸ್ಥಾನ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಅದು ಜಯ ಸಾಧಿಸಿದೆ.