ಡೆಲ್ಲಿ ಅಬ್ಬರಕ್ಕೆ ಬಾಗಿದ ಲಯನ್‌; ಸ್ಫೋಟಿಸಿದ ಸಂಜು, ರಿಷಭ್‌ ಪಂತ್‌


Team Udayavani, May 5, 2017, 12:43 PM IST

Sanju-DD-win.jpg

ನವದೆಹಲಿ: ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ ಗುಜರಾತ್‌ ಲಯನ್ಸ್‌ ವಿರುದ್ಧ 7 ವಿಕೆಟ್‌ ಜಯಸಾಧಿಸಿದೆ. ಇದು ಈ ಐಪಿಎಲ್‌ನಲ್ಲಿ ಅತಿ ದೊಡ್ಡ ಮೊತ್ತದ ಯಶಸ್ವಿ ಚೇಸಿಂಗ್‌ ಆಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗೆ 7 ವಿಕೆಟ್‌ ಕಳೆದುಕೊಂಡು 208 ರನ್‌ ಬಾರಿಸಿತ್ತು. ದೊಡ್ಡ ಮೊತ್ತ ಗುರಿ ಬೆನ್ನು ಹತ್ತಿದ ಗುಜರಾತ್‌17.3 ಓವರ್‌ಗೆ 3 ವಿಕೆಟ್‌ ಕಳೆದುಕೊಂಡು 214 ರನ್‌ ಬಾರಿಸಿ ಗುರಿ ಸಾಧಿಸಿತು. 

ಆರಂಭಿಕರಾಗಿ ಬಂದ ನಾಯಕ ಕರುಣ್‌ ನಾಯರ್‌(12) ತಂಡದ ಮೊತ್ತ 24 ರನ್‌ ಆಗುತ್ತಿದಂತೆ ವಿಕೆಟ್‌ ಕಳೆದುಕೊಂಡರು. ಆದರೆ ನಂತರ ಜತೆಯಾದ ಸಂಜು ಸ್ಯಾಮ್ಸನ್‌ ಮತ್ತು ರಿಷಭ್‌ ಪಂತ್‌ ಬೌಂಡರಿ, ಸಿಕ್ಸರ್‌ ಮೂಲಕ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತೆಗೆದುಕೊಂಡು ಹೋದರು. ಈ ಜೋಡಿ 2ನೇ ವಿಕೆಟ್‌ಗೆ 143 ರನ್‌ ಜತೆಯಾಟ ನೀಡಿದರು. ತಂಡದ ಮೊತ್ತ 167 ಆಗಿರುವಾಗ ಸ್ಯಾಮ್ಸನ್‌ ಜಡೇಜಗೆ ವಿಕೆಟ್‌ ಒಪ್ಪಿಸಿದರು. ಸ್ಯಾಮ್ಸನ್‌ 31 ಎಸೆತದಲ್ಲಿ 7 ಸಿಕ್ಸ್‌ ಸೇರಿದಂತೆ 61 ರನ್‌ ಬಾರಿಸಿದರು. ಬಳಿಕ ರಿಷಭ್‌ ಪಂತ್‌ ಬಸಿಲ್‌ ಥಾಂಪಿ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. 43 ಎಸೆತ ಎದುರಿಸಿದ ಪಂತ್‌ 6 ಬೌಂಡರಿ, 9 ಸಿಕ್ಸರ್‌ ಸೇರಿದಂತೆ 97 ರನ್‌ ಬಾರಿಸಿ ಶತಕದಿಂದ ವಂಚಿತರಾದರು. ಕೊನೆಯಲ್ಲಿ ಶ್ರೇಯಸ್‌ ಐಯ್ಯರ್‌ (ಅಜೇಯ 14) ಮತ್ತು ಆ್ಯಂಡರ್ಸನ್‌ (ಅಜೇಯ 18) ಗೆಲುವಿನ ದಡ ಸೇರಿಸಿದರು.

ರೈನಾ, ಕಾರ್ತಿಕ್‌ ಅರ್ಧಶತಕ: ನಾಯಕ ಸುರೇಶ್‌ ರೈನಾ ಮತ್ತು ದಿನೇಶ್‌ ಕಾರ್ತಿಕ್‌ ಅವರ ಅಮೋಘ ಅರ್ಧಶತಕದಿಂದಾಗಿ ಗುಜರಾತ್‌ ಲಯನ್ಸ್‌ ತಂಡವು ಗುರುವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದೆದುರು 7 ವಿಕೆಟಿಗೆ  208 ರನ್ನುಗಳ ಬೃಹತ್‌ ಮೊತ್ತ ಪೇರಿಸಿದೆ. 10 ರನ್‌ ಗಳಿಸುವಷ್ಟರಲ್ಲಿ ಡ್ವೇನ್‌ ಸ್ಮಿತ್‌ ಮತ್ತು ಬ್ರೆಂಡನ್‌ ಮೆಕಲಮ್‌ ಅವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ ರೈನಾ ಮತ್ತು ದಿನೇಶ್‌ ಕಾರ್ತಿಕ್‌ ಭರ್ಜರಿ ಆಟವಾಡಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು. ಕೇವಲ 43 ಎಸೆತ ಎದುರಿಸಿದ ರೈನಾ 5 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 77 ರನ್‌ ಗಳಿಸಿದರು. ರೈನಾ ಔಟಾದ ಸ್ವಲ್ಪ ಹೊತ್ತಿನಲ್ಲಿ ಕಾರ್ತಿಕ್‌ ಕೂಡ ಔಟಾದರು. 34 ಎಸೆತ ಎದುರಿಸಿದ್ದ ಅವರು 5 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 65 ರನ್‌ ಹೊಡೆದಿದ್ದರು.

ಪಂದ್ಯದ ತಿರುವು
ಡೆಲ್ಲಿ ತಂಡದ ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌ 2ನೇ ವಿಕೆಟ್‌ಗೆ ಕೇವಲ 63 ಎಸೆತದಲ್ಲಿ 143 ರನ್‌ ಜತೆಯಾಟ ಆಡಿ ಪಂದ್ಯಕ್ಕೆ ತಿರುವು ನೀಡಿದರು.

ಸ್ಕೋರ್‌ ಪಟ್ಟಿ
ಗುಜರಾತ್‌ ಲಯನ್ಸ್‌

ಡ್ವೇನ್‌ ಸ್ಮಿತ್‌    ರನೌಟ್‌    9
ಬಿ. ಮೆಕಲಮ್‌    ಸಿ ಪಂತ್‌ ಬಿ ರಬಾಡ    1
ಸುರೇಶ್‌ ರೈನಾ    ರನೌಟ್‌    77
ದಿನೇಶ್‌ ಕಾರ್ತಿಕ್‌    ಸಿ ಆ್ಯಂಡರ್ಸನ್‌ ಬಿ ಕಮಿನ್ಸ್‌    65
ಆರನ್‌ ಫಿಂಚ್‌    ಸಿ ಪಂತ್‌ ಬಿ ರಬಾಡ    27
ಇಶಾನ್‌ ಕಿಶನ್‌    ಸಿ ಅಯ್ಯರ್‌ ಬಿ ಕಮಿನ್ಸ್‌    4
ರವೀಂದ್ರ ಜಡೇಜ    ಔಟಾಗದೆ    10
ಜೇಮ್ಸ್‌ ಫಾಕ್ನರ್‌    ಸಿ ಬದಲಿಗ ಬಿ ಆ್ಯಂಡರ್ಸನ್‌    1
ಪ್ರದೀಪ್‌ ಸಂಗ್ವಾನ್‌    ಔಟಾಗದೆ    1
ಇತರ:        5
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    208
ವಿಕೆಟ್‌ ಪತನ: 1-10, 2-10, 3-143, 4-158, 5-178, 6-189, 7-192
ಬೌಲಿಂಗ್‌:ಶಾದಾಬ್‌ ನದೀಮ್‌    2-0-28-0
ಕಾಗಿಸೊ ರಬಾಡ        4-0-28-2
ಪ್ಯಾಟ್‌ ಕಮಿನ್ಸ್‌        4-0-30-2
ಮೊಹಮ್ಮದ್‌ ಶಮಿ        3-0-40-0
ಅಮಿತ್‌ ಮಿಶ್ರಾ        2-0-23-0
ಮಾರ್ಲಾನ್‌ ಸಾಮ್ಯುಯೆಲ್ಸ್‌    2-0-22-0
ಕೋರಿ ಆ್ಯಂಡರ್ಸನ್‌        3-0-36-1

ಡೆಲ್ಲಿ ಡೇರ್‌ಡೆವಿಲ್ಸ್‌
ಸಂಜು ಸ್ಯಾಮ್ಸನ್‌    ಸಿ ಫಾಕ್ನರ್‌ ಬಿ ಜಡೇಜ    61
ಕರುಣ್‌ ನಾಯರ್‌    ಸಿ ಕಾರ್ತಿಕ್‌ ಬಿ ಸಂಗ್ವಾನ್‌    12
ರಿಷಬ್‌ ಪಂತ್‌    ಸಿ ಕಾರ್ತಿಕ್‌ ಬಿ ಥಂಪಿ    97
ಶ್ರೇಯಸ್‌ ಅಯ್ಯರ್‌    ಔಟಾಗದೆ    14
ಕೋರಿ ಆ್ಯಂಡರ್ಸನ್‌    ಔಟಾಗದೆ    18
ಇತರ:        12
ಒಟ್ಟು (17.3 ಓವರ್‌ಗಳಲ್ಲಿ 3 ವಿಕೆಟಿಗೆ)    214
ವಿಕೆಟ್‌ ಪತನ: 1-24, 2-167, 3-179
ಬೌಲಿಂಗ್‌:ಪ್ರದೀಪ್‌ ಸಂಗ್ವಾನ್‌    4-0-43-1
ಬಾಸಿಲ್‌ ಥಂಪಿ        4-0-40-1
ಜೇಮ್ಸ್‌ ಫಾಕ್ನರ್‌        2.3-0-35-0
ಸುರೇಶ್‌ ರೈನಾ        2-0-24-0
ಅಂಕಿತ್‌ ಸೋನಿ        2-0-26-0
ರವೀಂದ್ರ ಜಡೇಜ        2-0-18-1
ಡ್ವೇನ್‌ ಸ್ಮಿತ್‌        1-0-11-0

ಪಂದ್ಯಶ್ರೇಷ್ಠ: ರಿಷಬ್‌ ಪಂತ್‌

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.