ಪಂತ್ ವೈಫಲ್ಯ: “ಧೋನಿ ಧೋನಿ…’ ಎಂದು ಅಣಕಿಸಿದ ಅಭಿಮಾನಿಗಳು!
Team Udayavani, Nov 12, 2019, 5:11 AM IST
ನಾಗ್ಪುರ: ಧೋನಿ ಉತ್ತರಾಧಿಕಾರಿಯೆಂದೇ ಗುರುತಿಸಲ್ಪಟ್ಟಿರುವ ರಿಷಭ್ ಪಂತ್, ಇತ್ತೀಚೆಗೆ ಎಲ್ಲ ವಿಭಾಗದಲ್ಲೂ ವಿಫಲರಾಗುತ್ತಿದ್ದಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಡಿಆರ್ಎಸ್ ನಿರ್ಧಾರ ತೆಗೆದುಕೊಳ್ಳುವಾಗ ಅವರು ಪ್ರತೀ ಬಾರಿ ನಾಯಕನಿಗೆ ನೀಡಿದ ಸಲಹೆ ತಪ್ಪಾಗಿದೆ. ರವಿವಾರವೂ ಅಂಥದೇ ಒಂದು ಘಟನೆ ನಡೆಯಿತು. ಆಗ ಅಭಿಮಾನಿಗಳು ಧೋನಿ, ಧೋನಿ ಎಂದು ಕೂಗಿ ಪಂತ್ ಅವರನ್ನು ಅಣಕಿಸಿದರು. ವಿಕೆಟ್ ಕೀಪಿಂಗ್ ಕೌಶಲದ ಜತೆಗೆ, ಡಿಆರ್ಎಸ್ ನಿರ್ಧಾರ ತೆಗೆದುಕೊಳ್ಳುವಲ್ಲಿ ಧೋನಿ ಯಾವಾಗಲೂ ನಿಖರವಾಗಿದ್ದರು. ಅದೇ ಕಾರಣಕ್ಕೆ ಅಭಿಮಾನಿಗಳು ಧೋನಿ ಹೆಸರನ್ನು ಕೂಗಿದ್ದಾರೆ.
ಆಗಿದ್ದೇನು?: ಭಾರತ ನೀಡಿದ 175 ರನ್ ಗುರಿಯನ್ನು ಬಾಂಗ್ಲಾದೇಶ ಬೆನ್ನತ್ತುತ್ತಿತ್ತು. ಆಗ ವೇಗಿ ಖಲೀಲ್ ಅಹ್ಮದ್ ಎಸೆತವೊಂದು ಬ್ಯಾಟ್ಸ್ಮನ್ ಮೊಹಮ್ಮದ್ ನೈಮ್ ಪ್ಯಾಡ್ಗೆ ಬಡಿದತ್ತು. ಆಗ ರಿಷಭ್ ಅವರ ಖಚಿತ ಸಲಹೆ ಕಾರಣ, ರೋಹಿತ್ ಡಿಆರ್ಎಸ್ಗೆ ಮನವಿ ಸಲ್ಲಿಸಿದರು. ಅಲ್ಲಿ ಎಲ್ಬಿ ಆಗಲೂ ಸಾಧ್ಯವೇ ಇಲ್ಲ ಎಂದು ಗೊತ್ತಾಯಿತು. ಇದರಿಂದ ಪ್ರೇಕ್ಷಕರು ಸಿಟ್ಟಾಗಿ ರಿಷಭ್ ಅವರನ್ನು ಅಣಕಿಸಲು ಶುರುಮಾಡಿದರು. ಪಂದ್ಯ ಮುಗಿದ ಅನಂತರ ಪಂತ್ ಅವರನ್ನು ಅಣಕಿಸದಂತೆ ನಾಯಕ ರೋಹಿತ್ ಶರ್ಮ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ