ಪೃಥ್ವಿ ಶಾಗೆ ಭುಜ ನೋವು; ನ್ಯೂಜಿಲೆಂಡ್ ಪ್ರವಾಸಕ್ಕೆ ಅನುಮಾನ
Team Udayavani, Jan 5, 2020, 4:28 PM IST
ಮುಂಬೈ: ಮತ್ತೆ ಭಾರತ ರಾಷ್ಟ್ರೀಯ ತಂಡಕ್ಕೆ ಮರಳುವ ಉತ್ಸಾಹದಲ್ಲಿದ್ದ ಪೃಥ್ವಿ ಶಾಗೆ ಭಾರೀ ಆಘಾತವಾಗಿದೆ.
ಕರ್ನಾಟಕ ವಿರುದ್ಧ ರಣಜಿ ಪಂದ್ಯದ ವೇಳೆ ಮುಂಬೈ ಪರ ಆಡಿದ್ದ ಅವರು, ಶುಕ್ರವಾರ ಗಾಯಗೊಂಡಿದ್ದಾರೆ. ಕ್ಷೇತ್ರರಕ್ಷಣೆ ವೇಳೆ ಚೆಂಡನ್ನುಎಸೆಯಲು ಹೋಗಿ ಭುಜದ ನೋವಿಗೆ ತುತ್ತಾಗಿದ್ದಾರೆ. ಕೈಯನ್ನು ಮೇಲೆತ್ತಲೂ ಆಗದ ಕಾರಣ, 2ನೇ ದಿನ ಅವರು ಆಡಲು ಇಳಿಯದೇ, ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಬಂದಿದ್ದಾರೆ.
ಇದರಿಂದ ಭಾರತ ಎ ತಂಡದೊಂದಿಗೆ ಜ.10ರಂದು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳುವುದು ಅನುಮಾನವಾಗಿದೆ. ಅವರ ಭುಜಕ್ಕೆ ಬಹಳ ಏಟು ಬಿದ್ದಿದೆಯಾ? ಗಾಯದ ತೀವ್ರತೆಯೇನು ಎನ್ನುವುದು ಪತ್ತೆಯಾಗಿಲ್ಲ.
ಉದ್ದೀಪನ ಸೇವಿಸಿದ ಹಿನ್ನೆಲೆಯಲ್ಲಿ ಅವರು 8 ತಿಂಗಳು ಕ್ರಿಕೆಟ್ನಿಂದ ನಿಷೇಧಕ್ಕೊಳಗಾಗಿದ್ದರು. ಮತ್ತೆ ಕ್ರಿಕೆಟ್ ಮೈದಾನಕ್ಕೆ ಇಳಿದು ಇನ್ನೂ ಒಂದು ತಿಂಗಳೂ ಆಗಿಲ್ಲ. ಅಷ್ಟರಲ್ಲಿ ಮತ್ತೆ ಗಾಯಗೊಂಡಿದ್ದಾರೆ. ಮೈದಾನಕ್ಕೆ ಮರಳಿದ ಬಳಿಕ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಅದು ರಾಷ್ಟ್ರೀಯ ತಂಡಕ್ಕೆ ಕರೆ ಪಡೆಯುವ ಭರವಸೆ ಹುಟ್ಟು ಹಾಕಿತ್ತು. ಅದರ ಅಂಗವಾಗಿಯೇ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಗಾಡ್ ಪ್ರಾಮಿಸ್ಗೆ ಸ್ಕ್ರಿಪ್ಟ್ ಪೂಜೆ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್ ನಿರೀಕ್ಷೆ
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ