ಗುಜರಾತ್ಗೆ ಶರಣಾದ ಜೈಪುರ
Team Udayavani, Oct 7, 2017, 11:20 AM IST
ಜೈಪುರ: ಪ್ರೊ ಕಬಡ್ಡಿ ಲೀಗ್ ಐದರ ಜೈಪುರ ಚರಣದ ಮೊದಲ ಪಂದ್ಯದಲ್ಲಿ ಎ ವಲಯದ ಅಗ್ರಸ್ಥಾನಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವು ತೀವ್ರ ಪೈಪೋಟಿ ನೀಡಿದ ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ ತಂಡವನ್ನು 29-23 ಅಂಕಗಳಿಂದ ಸೋಲಿಸಿತು.
ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ನೀರಸವಾಗಿ ಆಡಿದ್ದವು.ಆದರೆ ದ್ವಿತೀಯ ಅವಧಿಯಲ್ಲಿ ಜೈಪುರ ಮತ್ತು ಗುಜರಾತ್ ಭರ್ಜರಿಯಾಗಿ ಆಡಿದ್ದವು. ಇದರಿಂದ ಅಂಕ ಬಹುತೇಕ ಸಮಬಲದಿಂದಲೇ ಸಾಗಿದ್ದವು. ಆದರೆ ಪಂದ್ಯ ಮುಗಿಯಲು ಒಂದು ನಿಮಿಷ ವಿರುವಾಗ ಚಂದ್ರನ್ ರಂಜಿತ್ ಎರಡು ಅಂಕ ಪಡೆದು ಜೈಪುರವನ್ನು ಆಲೌಟ್ ಮಾಡಿಸಿದ್ದರಿಂದ ಗುಜರಾತ್ ಗೆಲ್ಲುವಂತಾಯಿತು.
ಭರ್ಜರಿ ರೈಡ್ ಮಾಡಿದ ಚಂದ್ರನ್ ರಂಜಿತ್ 7 ಅಂಕ ಪಡೆದರೆ ಸಚಿನ್ 6 ಅಂಕ ಮತ್ತು ಪರ್ವೇಶ್ 4 ಅಂಕ ಗಳಿಸಿದರು. ಸೋತ ಜೈಪುರ ತಂಡದ ಪರ ನಾಯಕ ಜಸ್ವೀರ್ ಸಿಂಗ್ 5 ಅಂಕ ಗಳಿಸಿದರೆ ಪವನ್ 4 ಮತ್ತು ತುಷಾರ್ ಪಾಟೀಲ್ 3 ಅಂಕ ಪಡೆದರು. ಪವನ್ ಮತ್ತು ತುಷಾರ್ ಪಾಟೀಲ್ ಅವರಿಂದ ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು.
ಈ ಗೆಲುವಿನಿಂದ ಗುಜರಾತ್ ತಾನಾಡಿದ 19 ಪಂದ್ಯಗಳಿಂದ 12ನೇ ಗೆಲುವು ದಾಖಲಿಸಿ ಒಟ್ಟು 72 ಅಂಕಗಳೊಂದಿಗೆ ಎ ವಲಯದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತಲ್ಲದೇ ಸೂಪರ್ ಪ್ಲೇ ಆಫ್ಗೆ ತೇರ್ಗಡೆ ಖಚಿತಗೊಳಿಸಿತು. ಇದೇ ವೇಳೆ ಸೋತ ಜೈಪುರಕ್ಕೆ ಮುನ್ನಡೆಯುವ ಹಾದಿ ಕಠಿನಗೊಂಡಿದೆ. ಜೈಪುರ ತವರಿನಲ್ಲಿ ಗರಿಷ್ಠ ಪಂದ್ಯಗಳಲ್ಲಿ ಗೆದ್ದರಷ್ಟೇ ಮುನ್ನಡೆಯುವ ಅವಕಾಶವಿದೆ. ಜೈಪುರ ಶನಿವಾರದ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಎದುರಿಸಲಿದೆ.
ಅಂಕ ಖಾತೆ ತೆರೆದ ಗುಜರಾತ್
ಅಂಕ ಖಾತೆ ತೆರೆದ ಗುಜರಾತ್ ಮೊದಲ ಎರಡು ನಿಮಿಷಗಳಲ್ಲಿ ಮೂರಂಕ ಗಳಿಸಿ ಮುನ್ನಡೆ ಸಾಧಿಸಿತು. ಆಬಳಿಕ ಉಭಯ ತಂಡಗಳು ನಿಧಾನಗತಿಯಲ್ಲಿ ಆಡಿದ್ದರಿಂದ ಮೊದಲ 10 ನಿಮಿಷ ಮುಗಿದಾಗ 5-5 ಸಮಬಲದಲ್ಲಿದ್ದವು. ಮೊದಲ ಅವಧಿಯ ಆಟ ಮುಗಿದಾಗ ಉಭಯ ತಂಡಗಳು ಮತ್ತೆ 11-11 ಸಮಬಲ ಸ್ಥಾಪಿಸಿದ್ದವು.
ದ್ವಿತೀಯ ಅವಧಿಯಲ್ಲಿಯೂ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಅಂಕ ಕೂಡ ಒಂದೇ ರೀತಿ ಸಾಗಿದ್ದವು. ಆದರೆ ಪಂದ್ಯ ಮುಗಿಯಲು ಒಂದು ನಿಮಿಷವಿರುವಾಗ ಚಂದ್ರನ್ ರಂಜಿತ್ ಸೂಪರ್ ರೈಡ್ ಮೂಲಕ ಜೈಪುರವನ್ನು ಆಲೌಟ್ ಮಾಡಿಸಿದ್ದರಿಂದ ಗುಜರಾತ್ ಗೆಲುವಿನ ನಗೆ ಚೆಲ್ಲಿತು. ಈ ನಾಲ್ಕು ಅಂಕದಿಂದ ಗುಜರಾತ್ 28-22ರಿಂದ ಮುನ್ನಡೆ ಸಾಧಿಸಿತಲ್ಲದೇ ಅಂತಿಮವಾಗಿ 29-23ರಿಂದ ಜಯಭೇರಿ ಬಾರಿಸಿತು.
ಬೆಂಗಾಲ್ಗೆ 25-19 ಅಂತರದ ಗೆಲುವು
ದಿನದ ಎರಡನೇ ಪಂದ್ಯದಲ್ಲಿ ಎ ವಲಯದ ಮೂರನೇ ಸ್ಥಾನಿ ಪುನೇರಿ ಪಲ್ಟಾನ್ಸ್ ತಂಡವನ್ನು ಬಿ ವಲಯದ ಬೆಂಗಾಲ್ ವಾರಿಯರ್ ತಂಡವು 25-19 ಅಂಕಗಳಿಂದ ಉರುಳಿಸಿದೆ. ಈ ಸೋಲಿನಿಂದ ಪುನೇರಿ ತಂಡದ ಸತತ ಐದು ಗೆಲುವಿನ ಸರಮಾಲೆ ಅಂತ್ಯಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್