ಹರಿಯಾಣಕ್ಕೆ ಶರಣಾದ ಮುಂಬಾ


Team Udayavani, Oct 5, 2017, 6:10 AM IST

PTI10_4_2017_000163a.jpg

ಚೆನ್ನೈ: ಪ್ರೊ ಕಬಡ್ಡಿ ಲೀಗ್‌ ಐದರ ಚೆನ್ನೈ ಚರಣದ ಎ ವಲಯದ ಬುಧವಾರದ ಮೊದಲ ಪಂದ್ಯದಲ್ಲಿ ಎರಡು ಬಾರಿ ಆಲೌಟ್‌ ಸಂಕಟಕ್ಕೆ ಸಿಲುಕಿದ ಮುಂಬಾ ತಂಡ 30-41 ಅಂಕಗಳಿಂದ ಹರಿಯಾಣ ಸ್ಟೀಲರ್ಗೆ ಶರಣಾಯಿತು.

ಇಲ್ಲಿನ ಜವಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಹೋರಾಟದ ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಕಾದಾಟ ನಡೆಸಿದವು. ಆದರೆ ವಿಕಾಸ್‌ ಖಂಡೋಲ, ವಜೀರ್‌ ಸಿಂಗ್‌ ಮತ್ತು ದೀಪಕ್‌ ಕುಮಾರ್‌ ದಹಿಯ ಅವರ ಭರ್ಜರಿ ಆಟದಿಂದಾಗಿ ಹರಿಯಾಣ ಮೇಲುಗೈ ಸಾಧಿಸಿತು. 2 ಬಾರಿ ಮುಂಬಾ ಆಲೌಟ್‌ಗೆ ಗುರಿಯಾದ ಕಾರಣ ಸೋಲು ಕಾಣುಂತಾಯಿತು. ಈ ಗೆಲುವಿನಿಂದ ಹರಿಯಾಣ ತಾನಾಡಿದ ಒಟ್ಟು 19 ಪಂದ್ಯಗಳಿಂದ 10ನೇ ಗೆಲುವು ದಾಖಲಿಸಿ 64 ಅಂಕ ಪಡೆದು ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು. ಸೋತ ಮುಂಬಾಗೂ ಮುನ್ನಡೆಯುವ ಅವಕಾಶವಿದೆ. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಅದು ಗೆಲ್ಲಬೇಕಾದ ಅನಿವಾರ್ಯತೆಯಿದೆ.

ದ್ವಿತೀಯ ಅವಧಿ ಆರಂಭವಾಗಿ 8 ನಿಮಿಷ ಮುಗಿದಾಗ ವಿಕಾಸ್‌ ಸ್ನಾಯು ಸೆಳತಕ್ಕೆ ಒಳಗಾದರು. ಆಬಳಿಕ ಅವರು ಅಂಗಣಕ್ಕೆ ಬರಲಿಲ್ಲ. ಆದರೂ ಹರಿಯಾಣ ದೀಪಕ್‌ ಮತ್ತು ವಜೀರ್‌ ಅವರ ಮಿಂಚಿನಾಟದಿಂದ ಮೇಲುಗೈ ಸಾಧಿಸಲು ಯಶಸ್ವಿಯಾಯಿತು. ವಿಕಾಸ್‌ 8 ಅಂಕ ಪಡೆದರೆ ದೀಪಕ್‌ ಕುಮಾರ್‌ ದಹಿಯ 8 ಅಂಕ ಮತ್ತು ವಜೀರ್‌ ಸಿಂಗ್‌ 7 ಅಂಕ ಗಳಿಸಿದರು.
ಮುಂಬಾ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಿದ ನಾಯಕ ಅನೂಪ್‌ ಕುಮಾರ್‌ 10 ಅಂಕ ಪಡೆದರೆ, ಶ್ರೀಕಾಂತ್‌ ಜಾಧವ್‌ 5 ಅಂಕ, ಅಡಕೆ ಮತ್ತು ಶಬ್ಬೀರ್‌ 3 ಮೂರು ಅಂಕ ಗಳಿಸಿದರು.

ಹರಿಯಾಣ ಮುನ್ನಡೆ
ಮೊದಲ ನಿಮಿಷದಲ್ಲಿಯೇ ಅನೂಪ್‌ ಅವರನ್ನು ಹಿಡಿದು ಹರಿಯಾಣ ಮುನ್ನಡೆ ಸಾಧಿಸಿದರೂ 4ನೇ ನಿಮಿಷದಲ್ಲಿ ಮುಂಬಾ 3-3ರಿಂದ ಸಮಬಲ ಸಾಧಿಸಲು ಯಶಸ್ವಿಯಾಯಿತು. ಆಬಳಿಕ ಎರಡೂ ತಂಡಗಳು ಸಮಬಲದ ಹೋರಾಟ ನೀಡಿದ್ದರಿಂದ ಮೊದಲ 10 ನಿಮಿಷದ ಆಟ ಮುಗಿದಾಗ 8-6ರಿಂದ ಹರಿಯಾಣ ಮುನ್ನಡೆಯಲ್ಲಿತ್ತು.

12ನೇ ನಿಮಿಷದಲ್ಲಿ ಅನೂಪ್‌ ಸೂಪರ್‌ ರೈಡ್‌ ಮೂಲಕ ಮೂರಂಕ ಪಡೆದು ಮುಂಬಾಗೆ ಮುನ್ನಡೆ ಒದಗಿಸಿದರು. ಆದರೆ ಆಬಳಿಕ ವಿಕಾಸ್‌ ಖಂಡೋಲ ಭರ್ಜರಿ ಆಟ ಆಡಿದ್ದರಿಂದ ಹರಿಯಾಣದ ಮೊತ್ತ ಏರತೊಡಗಿತು. ರೈಡ್‌ ಮತ್ತು ಟ್ಯಾಕಲ್‌ನಲ್ಲಿ ಮಿಂಚಿದ ಹರಿಯಾಣ 17ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಆಲೌಟ್‌ ಮಾಡಿಸಿ ಮುನ್ನಡೆಯನ್ನು 19-14ಕ್ಕೇರಿಸಿತು. ಮೊದಲ ಅವಧಿಯ ಆಟ ಮುಗಿದಾಗ ಹರಿಯಾಣ 22-16ರಿಂದ ಮುನ್ನಡೆ ಸಾಧಿಸಿತ್ತು.

ದ್ವಿತೀಯ ಅವಧಿ ಆರಂಭವಾಗಿ 8ನೇ ನಿಮಿಷದಲ್ಲಿ ವಿಕಾಸ್‌ ಸ್ನಾಯು ಸೆಳೆತಕ್ಕೆ ಒಳಗಾಗಿ ಅಂಗಣದಿಂದ ಹೊರನಡೆದರು. ಅವರು ಮತ್ತೆ ಅಂಗಣಕ್ಕೆ ಇಳಿಯಲಿಲ್ಲ. ಆಬಳಿಕ ದೀಪಕ್‌ ಮತ್ತು ವಝೀರ್‌ ಭರ್ಜರಿ ಆಟವಾಡಿದ್ದರಿಂದ ಹರಿಯಾಣದ ಮುನ್ನಡೆ ಏರತೊಡಗಿತು. ಪಂದ್ಯ ಮುಗಿಯಲು 5 ನಿಮಿಷವಿರುವಾಗ ಮುಂಬಾ ಎರಡನೇ ಬಾರಿ ಆಲೌಟಾಯಿತು. ಅಂತಿಮವಾಗಿ 30-41ರಿಂದ ಹರಿಯಾಣಕ್ಕೆ ಶರಣಾಯಿತು.

– ಶಂಕರನಾರಾಯಣ.ಪಿ

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.