ಅಜಯ್‌ ಠಾಕೂರ್‌ ಆಟಕ್ಕೆ ಒಲಿದ ಜಯ


Team Udayavani, Sep 14, 2017, 7:20 AM IST

Ban14091713Medn.jpg

ಸೋನೆಪತ್‌ (ಹರ್ಯಾಣ): ಅಜಯ್‌ ಠಾಕೂರ್‌ (8 ಅಂಕ) ಸೂಪರ್‌ ರೈಡಿಂಗ್‌ನಿಂದಾಗಿ ತಮಿಳ್‌ ತಲೈವಾಸ್‌ 34-33 ಅಂತರದಿಂದ ಯುಪಿ ಯೋಧಾ ವಿರುದ್ಧ ರೋಚಕ ಗೆಲುವು ಸಾಧಿಸಿತು. ಸತತ ಮೂರು ಸೋಲುಗಳ ನಂತರ ತಮಿಳ್‌ ತಲೈವಾಸ್‌ ಗೆಲುವು ಸಾಧಿಸಿದೆ. ಅಲ್ಲದೆ ಕೂಟದಲ್ಲಿ ತಲೈವಾಸ್‌ಗೆ ಇದು ಒಟ್ಟಾರೆ 2ನೇ ಗೆಲುವಾಗಿದೆ.

ಇದಕ್ಕೂ ಮೊದಲು ಮೋತಿಲಾಲ್‌ ಸ್ಕೂಲ್‌ ನೆಹರೂ ಸ್ಕೂಲ್‌ ಆಫ್ ನ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಮೊದಲ ಅವಧಿ ಆಟದಲ್ಲಿ ಯುಪಿ ಪಾರಮ್ಯ ಮೆರೆಯಿತು. ಪಂದ್ಯ ಆರಂಭವಾದ 4 ನಿಮಿಷಕ್ಕೆ ತಲೈವಾಸ್‌ ತಂಡವನ್ನು ಆಲೌಟ್‌ ಮಾಡಿತು. ನಿತಿನ್‌ ತೋಮರ್‌ (14 ಅಂಕ) ಯುಪಿ ಪರ ಮಿಂಚಿನ ದಾಳಿ ನಡೆಸಿದರು. ಆದರೆ ಇದಕ್ಕೆಲ್ಲದ್ದಕ್ಕೂ 2ನೇ ಅವಧಿಯಲ್ಲಿ ತಲೈವಾಸ್‌ ಉತ್ತರ ನೀಡಿ ಬೀಗಿತು.

ಅಜಯ್‌ ನೀಡಿದ ತಿರುವು:
ಕೊನೆಯಲ್ಲಿ ಗೆಲ್ಲಲು ತಲೈವಾಸ್‌ಗೆ 2 ಅಂಕದ ಅವಶ್ಯಕತೆ ಇತ್ತು. ಡ್ರಾ ಸಾಧಿಸಲು 1 ಅಂಕ ಬೇಕಾಗಿತ್ತು. ಹೀಗೆ 33-32ರಿಂದ ಮುನ್ನಡೆಯಲ್ಲಿದ್ದ ಯುಪಿಗೆ ಆಘಾತ ನೀಡಿದ್ದು ಅಜಯ್‌ ಠಾಕೂರ್‌ ಅಂತಿಮ ರೈಡ್‌. ಅವರು ಪಂದ್ಯ ಮುಗಿಯಲು ಇನ್ನೇನು 1 ನಿಮಿಷ ಇದ್ದಾಗ ಯುಪಿ ತಂಡದ ಮೂವರನ್ನು ಸೂಪರ್‌ ರೈಡಿಂಗ್‌ ಮೂಲಕ ಔಟ್‌ ಮಾಡಿದರು. ಇದರೊಂದಿಗೆ ತಂಡದ ಗೆಲುವನ್ನು ನಾಯಕ ಖಾತ್ರಿಪಡಿಸಿದರು. ಕೊನೆಗೆ ಯೋಧಾ ಗೆಲುವಿಗೆ ರಿಷಾಂಕ್‌ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.

1ನೇ ಅವಧಿಯಲ್ಲಿ ತಲೈವಾಸ್‌ ಪುಡಿಗಟ್ಟಿದ್ದ ಯುಪಿ:
ಪಂದ್ಯದ ಮೊದಲ ಅವಧಿ ಆರಂಭವಾಗಿ 4 ನಿಮಿಷದಲ್ಲೇ ತಮಿಳ್‌ ತಲೈವಾ ಮೊದಲ ಬಾರಿಗೆ ಆಲೌಟಾಯಿತು. ಈ ಹಂತದಲ್ಲಿ ಅಜಯ್‌ ಠಾಕೂರ್‌ ಎದುರಾಳಿ ರಕ್ಷಣಾವ್ಯೂಹವನ್ನು ಭೇದಿಸುವ ಪ್ರಯತ್ನ ನಡೆಸಿದರು. ಆದರೆ ಇದು ಸಾಧ್ಯವಾಗಲಿಲ್ಲ. ಆದರೆ ಪರಪಂಚನ್‌ ಸೂಪರ್‌ ರೈಡಿಂಗ್‌ ಮೂಲಕ 3 ಅಂಕವನ್ನು ತಂದು ಅಂತರವನ್ನು 8-13ಕ್ಕೆ ತಗ್ಗಿಸಿದರು. ಆದರೆ ಯೋಧಾ ಪರವಾಗಿ ನಿತಿನ್‌ ತೋಮರ್‌ ಮಿಂಚಿನ ರೈಡಿಂಗ್‌ ನಡೆಸಿ ತಮಿಳ್‌ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಬಳಿಕ ಎಚ್ಚೆತ್ತ ತಲೈವಾ ಮೊದಲ ಅವಧಿ ಮುಕ್ತಾಯಕ್ಕೆ ಅಂಕಗಳಿಕೆಯನ್ನು 12-18 ಅಂತರಕ್ಕೆ ಕಡಿಮೆ ಮಾಡಿಕೊಂಡಿತು. ಈ ಅವಧಿಯಲ್ಲಿ ತಮಿಳ್‌ ಪರ ಮಿಂಚಿದ್ದು ಪರಪಂಚನ್‌. ಇವರ ದಾಳಿಯಿಂದ ಯೋಧಾ ಮೊದಲ ಅವಧಿ ಮುಕ್ತಾಯಕ್ಕೆ ಆಲೌಟ್‌ ಭೀತಿಗೆ ಸಿಲುಕಿಕೊಂಡಿತು.

2ನೇ ಅವಧಿಯಲ್ಲಿ ತಲೈವಾಸ್‌ ಚುರುಕಿನ ಆಟ:
2ನೇ ಅವಧಿಯ ಆರಂಭದಲ್ಲಿ ಯುಪಿಯನ್ನು ತಲೈವಾಸ್‌ ಆಲೌಟ್‌ ಮಾಡಿತು. ಅಂಕಗಳಿಕೆಯಲ್ಲಿ ಯುಪಿ 20-16 ರಿಂದ ಮುಂದಿತ್ತು. ಹೀಗಿದ್ದರೂ ತಲೈವಾಸ್‌ 4 ಅಂಕಗಳ ಹಿನ್ನಡೆ ಅನುಭವಿಸಿತು. ಇನ್ನೇನು ಆಟ ಮುಗಿಯಲು 9 ನಿಮಿಷ ಬಾಕಿ ಇರುವಾಗ ತಲೈವಾಸ್‌ ಅಂಕಗಳ ಅಂತರವನ್ನು 20-23ಕ್ಕೆ ಇಳಿಸಿಕೊಂಡಿತು.  3 ಅಂಕದ ಅಂತರ ಕೊನೆಯ 5 ನಿಮಿಷದವರೆಗೆ ಸಾಗಿತ್ತು. ಪಂದ್ಯ ಮುಗಿಯಲು 3 ನಿಮಿಷ ಇದ್ದಾಗ ಯುಪಿ 2ನೇ ಸಲ ಆಲೌಟಾಯಿತು. ಈ ವೇಳೆ ತಲೈವಾಸ್‌ 29-28 ಅಂಕಗಳ ಅಂತರದ ಮುನ್ನಡೆ ಕಾಯ್ದುಕೊಂಡು ಗೆಲುವಿನ ಮುನ್ಸೂಚನೆ ನೀಡಿತು. 

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಕಾರಿಗೆ ಪೆಟ್ರೋಲ್‌ ಬದಲು ಡೀಸೆಲ್‌ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.