ಪ್ರದೀಪ್ ಪರಾಕ್ರಮ; ಪಾಟ್ನಾ ಗೆಲುವಿನಾಟ
Team Udayavani, Oct 15, 2018, 8:42 AM IST
ಹರ್ಯಾಣ: ಮೂರು ಬಾರಿಯ ಪ್ರೊ ಕಬಡ್ಡಿ ಚಾಂಪಿಯನ್ ಪ್ರಬಲ ಪಾಟ್ನಾ ಪೈರೇಟ್ಸ್ ತಂಡ ಲಯಕ್ಕೆ ಮರಳುತ್ತಿದ್ದು, ರವಿವಾರದ ಮೊದಲ ಮುಖಾಮುಖಿಯಲ್ಲಿ ಯುಪಿ ಯೋಧಾಸ್ ತಂಡವನ್ನು 43-37 ಅಂಕಗಳಿಂದ ಮಣಿಸಿದೆ. ಇದು 6ನೇ ಆವೃತ್ತಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಪಾಟ್ನಾಗೆ ಒಲಿದ 2ನೇ ಜಯ.
ಇನ್ನೊಂದೆಡೆ ಯುಪಿ ಯೋಧಾಸ್ ಇದುವರೆಗೆ 4 ಪಂದ್ಯಗಳನ್ನಾಡಿದ್ದು ಮೂರರಲ್ಲಿ ಸೋತು ಆಘಾತ ಅನುಭವಿಸಿದೆ. ಸತತ 2ನೇ ದಿನವೂ ಅದು ಸೋಲಿಗೆ ತುತ್ತಾಯಿತು. ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಹರ್ಯಾಣ 27-45 ಅಂಕಗಳ ಅಂತರದಿಂದ ಪುನೇರಿ ಪಲ್ಟಾನ್ ವಿರುದ್ಧ ಪಲ್ಟಿ ಹೊಡೆಯಿತು.
ಪ್ರದೀಪ್ ನರ್ವಾಲ್ ಪ್ರಬಲ ದಾಳಿ
ಯುಪಿ ಯೋಧಾಸ್ ಜಯ ಸಾಧಿಸುವ ಉಮೇದಿನಿಂದ ಕಣಕ್ಕಿಳಿದಿತ್ತು. ಅದರ ಯೋಜನೆಯನ್ನು ಪಾಟ್ನಾ ಪೈರೇಟ್ಸ್ ವಿಫಲಗೊಳಿಸಿತು. ಪಾಟ್ನಾ ಪರ ಎಂದಿನಂತೆ ಪ್ರದೀಪ್ ನರ್ವಾಲ್ ಪ್ರಬಲ ದಾಳಿ ನಡೆಸಿ 17 ಅಂಕಗಳನ್ನು ಗಳಿಸಿದರು. ಪ್ರದೀಪ್ಗೆ ದೀಪಕ್ ನರ್ವಾಲ್ ದಾಳಿಯಲ್ಲಿ ಸಾಥ್ ನೀಡಿದರು. ಅವರು 10 ಅಂಕ ಗಳಿಸಿದರು. ರಕ್ಷಣೆಯಲ್ಲಿ ಪಾಟ್ನಾ ಸಂಘಟಿತ ಯಶಸ್ಸು ಗಳಿಸಿದರೂ ವೈಯಕ್ತಿಕ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಇದೇ ಮಾತು ಯುಪಿ ಯೋಧಾಸ್ ತಂಡಕ್ಕೂ ಅನ್ವಯಿಸುತ್ತದೆ. ಯುಪಿ ಕೂಡ ದಾಳಿಯಲ್ಲಿ ಮಿಂಚಿದರೂ ರಕ್ಷಣಾ ವಿಭಾಗದಲ್ಲಿ ಘೋರ ವೈಫಲ್ಯ ಎದುರಿಸಿತು.
ಯುಪಿ ಪರ ಶ್ರೀಕಾಂತ್ ಜಾಧವ್ ದಾಳಿಯಲ್ಲಿ ಮಿಂಚಿದರು. ಅವರು 17 ಅಂಕ ಗಳಿಸಿ ಎದುರಾಳಿ ಪಾಟ್ನಾ ಆಟಗಾರ ಪ್ರದೀಪ್ಗೆ ಸರಿಸಮನಾಗಿ ನಿಂತರು. ಆದರೆ ರಕ್ಷಣಾ ವಿಭಾಗದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಬರದಿದ್ದುದು ಯುಪಿ ಸೋಲಿಗೆ ಕಾರಣವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ