ಪ್ರೊ ಕಬಡ್ಡಿ: ಮುಂಬಾ-ಯುಪಿ ನಡುವೆ ಇಂದು ಎಲಿಮಿನೇಟರ್‌


Team Udayavani, Dec 30, 2018, 12:35 AM IST

pro-kab.jpg

ಕೊಚ್ಚಿ: ಭಾನುವಾರದಿಂದ ಪ್ರೊ ಕಬಡ್ಡಿ ಪ್ಲೇಆಫ್ ಹಂತ ಶುರು. ಕೊಚ್ಚಿಯಲ್ಲಿ ಮೊದಲನೇ ಎಲಿಮಿನೇಟರ್‌ ಪಂದ್ಯ ಯು ಮುಂಬಾ ಮತ್ತು ಯುಪಿ ಯೋಧಾಸ್‌ ನಡುವೆ ನಡೆಯುವ ಮೂಲಕ ಪ್ರೊ ಕಬಡ್ಡಿ ಅಂತಿಮ ಹಂತಕ್ಕೆ ಚಾಲನೆ ಸಿಗಲಿದೆ. 

ಎಲಿಮಿನೇಟರ್‌ ಸುತ್ತಿನಲ್ಲಿ ತಂಡಗಳಿಗೆ ಗೆಲ್ಲುವುದೊಂದೇ ದಾರಿ. ಸೋತ ತಂಡ ನೇರವಾಗಿ ಹೊರಹೋಗುತ್ತದೆ. ಬಲಿಷ್ಠ ಯು ಮುಂಬಾ ತಂಡಕ್ಕೆ ಸಾಮಾನ್ಯ ತಂಡ ಯುಪಿ ಯೋಧಾಸ್‌ ಎದುರಾಳಿಯಾಗಿದೆ. ಇದುವರೆಗಿನ ಲೆಕ್ಕಾಚಾರಗಳನ್ನು ಪರಿಗಣಿಸಿದರೆ, ಮುಂಬಾ ಗೆಲ್ಲುವುದು ಖಚಿತವಾಗಿದೆ. ಯುಪಿ ಪ್ಲೇಆಫ್ ಸುತ್ತಿಗೇರಿದ್ದನ್ನು ಪರಿಗಣಿಸಿದರೆ, ಉಳಿದ ತಂಡಗಳು ತಮ್ಮ ಗುಣಮಟ್ಟವನ್ನು ಕಳೆದುಕೊಂಡಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.

ಎ ವಲಯದಲ್ಲಿ ಆಡಿದ ಯು ಮುಂಬಾ ಒಟ್ಟು 22 ಪಂದ್ಯಗಳಲ್ಲಿ 15 ಗೆದ್ದು, 5 ಪಂದ್ಯವನ್ನು ಮಾತ್ರ ಸೋತು, 2 ಪಂದ್ಯವನ್ನು ಟೈ ಮಾಡಿಕೊಂಡಿದೆ. ಇದಕ್ಕೆ ಹೋಲಿಸಿದರೆ ಯುಪಿ 22 ಪಂದ್ಯಗಳಲ್ಲಿ 8 ಪಂದ್ಯ ಮಾತ್ರ ಗೆದ್ದು, 10 ಪಂದ್ಯ ಸೋತು, 4 ಪಂದ್ಯ ಟೈ ಮಾಡಿಕೊಂಡಿದೆ.  ಈ ಎಲಿಮಿನೇಟರ್‌ ಪಂದ್ಯವನ್ನು ಗೆಲ್ಲುವ ತಂಡ, ಇನ್ನೂ ಎರಡು ಪಂದ್ಯ ಗೆದ್ದರೆ ಮಾತ್ರ ಫೈನಲ್‌ಗೇರಲಿದೆ. ಈ ಹಂತದಲ್ಲಿ ಎಲ್ಲಿ ಎಡವಿದರೂ ನಿರಾಸೆ ಕಟ್ಟಿಟ್ಟದ್ದು.

ಅಚ್ಚರಿಯೆಂದರೆ ಸತತ 3 ಬಾರಿ ಪ್ರೊ ಕಬಡ್ಡಿ ಗೆದ್ದು ದಾಖಲೆ ನಿರ್ಮಿಸಿದ್ದ ಪಾಟ್ನಾ ಪೈರೇಟ್ಸ್‌ ತಂಡ ಈ ಬಾರಿ ಪೂರ್ಣ ವೈಫ‌ಲ್ಯ ಅನುಭವಿಸಿ, ಲೀಗ್‌ ಹಂತದಲ್ಲಿಯೇ ಕೂಟದಿಂದ ಹೊರಬಿದ್ದಿದೆ. ಹಿಂದೆ ನಡೆದ ಹರಾಜಿನಲ್ಲಿ ಪಾಟ್ನಾದ ಖ್ಯಾತ ಆಟಗಾರ ಮೋನು ಗೋಯತ್‌ ಬೇರೆ ತಂಡದ ಪಾಲಾಗಿದ್ದು ಈ ಫ‌ಲಿತಾಂಶಕ್ಕೆ ಕಾರಣ. ಅಲ್ಲದೇ ಪ್ರಮುಖ ಆಟಗಾರ ಪ್ರದೀಪ್‌ ನರ್ವಾಲ್‌ ವೈಫ‌ಲ್ಯವನ್ನೂ ಪಾಟ್ನಾ ಸ್ಥಿತಿಗೆ ಕಾರಣವೆಂದು ಹೇಳಬಹುದು.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.