ಪ್ರೊ ಕಬಡ್ಡಿ: ಗುಜರಾತ್‌-ಬೆಂಗಾಲ್‌ ಪಂದ್ಯ ಟೈ


Team Udayavani, Aug 18, 2017, 11:33 AM IST

18-SPORTS-4.jpg

ಅಹ್ಮದಾಬಾದ್‌: ರೋಮಾಂಚಕವಾಗಿ ಸಾಗಿದ ಪ್ರೊ ಕಬಡ್ಡಿ ಲೀಗ್‌ನ ಅಹ್ಮದಾಬಾದ್‌ ಚರಣದ ಅಂತಿಮ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾದ ಗುಜರಾತ್‌ ಫಾರ್ಚೂನ್‌ ತಂಡವು ಬೆಂಗಾಲ್‌ ವಾರಿಯರ್ ವಿರುದ್ಧ 26-26 ಅಂಕಗಳಿಂದ ಟೈಗೊಳಿಸಲು ಯಶಸ್ವಿಯಾಯಿತು. ಹೀಗಾಗಿ ಗುಜರಾತ್‌ ತಂಡ ತನ್ನ ತವರಿನ ಪಂದ್ಯಗಳಲ್ಲಿ ಸೋಲು ಕಾಣುವುದನ್ನು ತಪ್ಪಿಸಿದೆ. ಸತತ ಐದು ಪಂದ್ಯಗಳಲ್ಲಿ ಜಯಭೇರಿ ಸಾಧಿಸಿದ ಸಾಧನೆ ಮಾಡಿದೆ.  

ಈ ಮೊದಲು ನಡೆದ ಪಂದ್ಯದ ಕೊನೆಯಲ್ಲಿ ನಾಯಕ ಮೆರಾಜ್‌ ಶೇಖ್‌ ತಂದ 3 ರೈಡಿಂಗ್‌ ಅಂಕಗಳ ನೆರವಿನಿಂದ ದಬಾಂಗ್‌ ಡೆಲ್ಲಿ ತಂಡ  ತಮಿಳ್‌ ತಲೈವಾಸ್‌ ವಿರುದ್ಧ 30-29ರಿಂದ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ಕೂಟ ದಲ್ಲಿ ಸತತ 4 ಪಂದ್ಯಗಳ ಸೋಲಿನ ಅನಂತರ ಗೆಲುವಿನ ಹಳಿಗೆ ಮರಳಿದೆ. ಅಂತಿಮ ಹಂತದಲ್ಲಿ ತಲೈವಾಸ್‌ ಪಂದ್ಯ ಕೈಚೆಲ್ಲಿ ನಿರಾಶೆಗೊಂಡಿತು. 

ಶುಕ್ರವಾರದಿಂದ ಲಕ್ನೋ ಚರಣದ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಯುಪಿ ತಂಡವು ಯು ಮುಂಬಾವನ್ನು ಎದುರಿಸಲಿದ್ದರೆ ಎರಡನೇ ಪಂದ್ಯ ಬೆಂಗಳೂರು ಮತ್ತು ಜೈಪುರ ನಡುವೆ ನಡೆಯಲಿದೆ. 

ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಡೆಲ್ಲಿ ಭರ್ಜರಿ ಆರಂಭ ಪಡೆಯಿತು. ಎದುರಾಳಿ ತಲೈವಾಸ್‌ನ ಒಬ್ಬೊಬ್ಬರೇ ಆಟಗಾರರನ್ನು ಔಟ್‌ ಮಾಡಿ ಹೊರಕಳುಹಿಸುತ್ತಿತ್ತು. ಹೀಗಾಗಿ ಡೆಲ್ಲಿ 5-1ರಿಂದ ಮುನ್ನಡೆ ಪಡೆದಿತ್ತು. ಆದರೆ 7ನೇ ನಿಮಿಷದಲ್ಲಿ ತಲೈವಾಸ್‌ ಸೂಪರ್‌ ಟ್ಯಾಕಲ್‌ ಮಾಡಿ ತನ್ನ ಅಂಕವನ್ನು 4-5ಕ್ಕೆ ಹೆಚ್ಚಿಸಿಕೊಂಡಿತು. ಅನಂತರ ಉಭಯ ತಂಡಗಳು 6-6ರಲ್ಲಿ ಸಮಬಲದಲ್ಲಿದ್ದವು.
ಅನಂತರದ ಹಂತದಲ್ಲಿ ಡೆಲ್ಲಿ ಮೇಲುಗೈ ಸಾಧಿಸುತ್ತಾ ಸಾಗಿತು. ಆದರೆ ಮೊದಲನೇ ಅವಧಿಯ ಅಂತ್ಯದಲ್ಲಿ ತಲೈವಾಸ್‌ ಮತ್ತೂಂದು ಸೂಪರ್‌ ಟ್ಯಾಕಲ್‌ ಮಾಡಿತು. ಇದರಿಂದ ಮೊದಲ ಅವಧಿಯ ಅಂತ್ಯದಲ್ಲಿ ಉಭಯ ತಂಡಗಳು 12-12ರಿಂದ ಸಮಬಲದಲ್ಲಿದ್ದವು.

ಪಂದ್ಯಕ್ಕೆ ತಿರುವು ನೀಡಿದ ಮೆರಾಜ್‌: 2ನೇ ಅವಧಿ ಆರಂಭವಾಗಿ ಕೆಲವೇ ನಿಮಿಷದಲ್ಲಿ ತಲೈವಾಸ್‌ ಮತ್ತೂಂದು ಸೂಪರ್‌ ಟ್ಯಾಕಲ್‌ ಮಾಡಿತು. ಇದರಿಂದ ತಲೈವಾಸ್‌ 15-12ರಿಂದ ಮುನ್ನಡೆ ಪಡೆಯಿತು. ರೈಡಿಂಗ್‌ ಮತ್ತು ಡಿಫೆಂಡ್‌ನ‌ಲ್ಲಿ ತಲೈವಾಸ್‌ ಬಲಿಷ್ಠವಾಯಿತು. ಇದರಿಂದ ಅಂಕಗಳಿಕೆಯಲ್ಲಿಯೂ ಏರಿಕೆಯಾಗತೊಡಗಿತು. ಇತ್ತ ಡೆಲ್ಲಿ ಕೋಟೆಯೂ ಖಾಲಿಯಾಗುತ್ತಾ ಸಾಗಿತು. ಇದರಿಂದ 34ನೇ ನಿಮಿಷದಲ್ಲಿ ಡೆಲ್ಲಿ ಆಲೌಟ್‌ ಆಯಿತು. ಈ ಹಂತದಲ್ಲಿ ತಲೈವಾಸ್‌ 25-22ರಿಂದ ಮುನ್ನಡೆ ಪಡೆಯಿತು.

ಅನಂತರದ ಹಂತದಲ್ಲಿಯೂ ಪಂದ್ಯ ಕುತೂಹಲದಲ್ಲಿಯೇ ಇತ್ತು. ಅಂಕಗಳಿಕೆಯಲ್ಲಿ ತಲೈವಾಸ್‌ ಹಿಂದೆಯೇ ಡೆಲ್ಲಿ ಸಾಗುತ್ತಿತ್ತು. 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.