ಪ್ರೊ ಕಬಡ್ಡಿ: ಜೈಪುರ-ಗುಜರಾತ್‌ ಪಂದ್ಯ ಟೈ

ಯುಪಿ ಯೋಧಾ ವಿರುದ್ಧ ತಲೈವಾಸ್‌ಗೆ ಭಾರೀ ಸೋಲು

Team Udayavani, Sep 21, 2019, 10:45 PM IST

jaipur

ಜೈಪುರ: ಜೈಪುರ ಚರಣದ ಮೊದಲ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ 28-28 ಅಂಕಗಳ ರೋಚಕ ಟೈ ಸಾಧಿಸಿತು. ದಿನದ ದ್ವಿತೀಯ ಮುಖಾಮುಖೀಯಲ್ಲಿ ಯುಪಿ ಯೋಧಾ 42-22 ಅಂತರದಿಂದ ತಮಿಳ್‌ ತಲೈವಾಸ್‌ಗೆ ಸೋಲುಣಿಸಿತು.
ರೈಡರ್‌ ನಿತಿನ್‌ ರಾವಲ್‌ ಅವರನ್ನು ಗುಜರಾತ್‌ನ ಪರ್ವೇಶ್‌ ಬೈನ್‌ಸ್ವಾಲ್‌ ಅದ್ಭುತವಾಗಿ ಟ್ಯಾಕಲ್‌ ಮಾಡಿದ್ದರಿಂದಾಗಿ ಜೈಪುರಕ್ಕೆ ಜಯ ತಪ್ಪಿತು. ಹೀಗಾಗಿ ಪ್ಲೇ-ಆಫ್ ಲೆಕ್ಕಾಚಾರದಲ್ಲಿ ಜೈಪುರಕ್ಕೆ ಸ್ವಲ್ಪ ಹಿನ್ನಡೆಯಾದಂತಾಗಿದೆ. ಇನ್ನೊಂದೆಡೆ ಗುಜರಾತ್‌ಗೆ ಈ ಸಾಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಅದು ಕೂಟದಿಂದ ಹೊರಬೀಳುವ ಸ್ಥಿತಿಯಲ್ಲಿದೆ.
* ಗಮನ ಸೆಳೆದ ವಿಶಾಲ್‌
ಜೈಪುರ ಪರ ವಿಶಾಲ್‌ 9 ಟ್ಯಾಕಲ್‌ ನಡೆಸಿದರು. ಗುಜರಾತ್‌ ರೈಡರ್‌ಗಳಿಗೆ ಅಪಾಯಕಾರಿಯಾಗಿ ಗೋಚರಿಸಿದರು.ಆದರೆ ರೈಡಿಂಗ್‌ನಲ್ಲಿ ಜೈಪುರ ವಿಫ‌ಲವಾಯಿತು. ಪ್ರಮುಖ ರೈಡರ್‌ ದೀಪಕ್‌ ಹೂಡಾ ಕೇವಲ 4 ಅಂಕ ತಂದರು. 18 ರೈಡಿಂಗ್‌ ಮಾಡಿದ್ದ ದೀಪಕ್‌ ಹೂಡಾ 10 ಸಲ ಎದುರಾಳಿ ಕೋಟೆಯಿಂದ ಬರಿಗೈಯಿಂದ ವಾಪಸ್‌ ಆದರು.
ಗುಜರಾತ್‌ ಪರ ರೈಡಿಂಗ್‌ನಲ್ಲಿ ಸಚಿನ್‌ 5 ಅಂಕ ಮಾತ್ರ ಗಳಿಸಿದರು. ಉಳಿದಂತೆ ಪರ್ವೇಶ್‌ 5 ಟ್ಯಾಕಲ್‌ ಅಂಕ, ಜಿ.ಬಿ. ಮೋರೆ 3 ಟ್ಯಾಕಲ್‌ ಅಂಕ ಸೇರಿದಂತೆ 4 ಅಂಕ, ಸುನೀಲ್‌ ಕುಮಾರ್‌, ರೋಹಿತ್‌ ಗುಲಿಯಾ, ಪಂಕಜ್‌ 3 ಟ್ಯಾಕಲ್‌ ಅಂಕ ಪಡೆದರು. ರೈಡಿಂಗ್‌ಗಿಂತ ಟ್ಯಾಕಲ್‌ನಲ್ಲೇ ಗುಜರಾತ್‌ ಹೆಚ್ಚು ಯಶಸ್ಸು ಪಡೆಯಿತು.

**
ಮತ್ತೆ ಸೋತ ತಲೈವಾಸ್‌
ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಯುಪಿ ಯೋಧಾ ನಿಧಾನವಾಗಿ ಚಿಗುರುತ್ತಿದೆ. ಅದು ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶನಿವಾರದ ಎರಡನೇ ಪಂದ್ಯದಲ್ಲಿ ದುರ್ಬಲ ತಮಿಳ್‌ ತಲೈವಾಸ್‌ ತಂಡವನ್ನು 42-22 ಅಂಕಗಳ ಭಾರೀ ಅಂತರದಿಂದ ಸೋಲಿಸಿತು. ಇದರೊಂದಿಗೆ ಯುಪಿ ಯೋಧಾ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಯುಪಿ ಗೆಲುವಿನಲ್ಲಿ ರೈಡರ್‌ ಶ್ರೀಕಾಂತ್‌ ಜಾಧವ್‌ (8 ಅಂಕ), ಸುರಿಂದರ್‌ ಗಿಲ್‌ (7 ರೈಡಿಂಗ್‌ ಅಂಕ) ಹಾಗೂ ಸುಮಿತ್‌ ನಗಾಲ್‌ (5 ಟ್ಯಾಕಲ್‌ ಅಂಕ) ಮಿಂಚಿದರು. ತಲೈವಾಸ್‌ ತಾರಾ ರೈಡರ್‌ ರಾಹುಲ್‌ ಚೌಧರಿ (5 ಅಂಕ) ವೈಫ‌ಲ್ಯ ಅನುಭವಿಸಿದರು. ಅಜಿತ್‌ ಕುಮಾರ್‌ (4 ರೈಡಿಂಗ್‌ ಅಂಕ)ನಿಂದ ತಂಡಕ್ಕೆ ಸ್ವಲ್ಪ ನೆರವಾದರು. ತಮಿಳ್‌ ತಲೈವಾಸ್‌ ಮತ್ತೂಮ್ಮೆ ಮುಖಭಂಗ ಅನುಭವಿಸಿತು. ಒಟ್ಟಾರೆ ಕೂಟದಲ್ಲಿ ಸರಣಿ ಸೋಲಿನ ಕಳಪೆ ಪ್ರದರ್ಶನ ಮುಂದುವರಿಸಿದೆ.

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.