ಪ್ರೊ ಕಬಡ್ಡಿ: ಪುನೇರಿ ಮೇಲೆ ತಮಿಳ್‌ ತಲೈವಾಸ್‌ ಸವಾರಿ


Team Udayavani, Dec 31, 2021, 10:28 PM IST

ಪ್ರೊ ಕಬಡ್ಡಿ: ಪುನೇರಿ ಮೇಲೆ ತಮಿಳ್‌ ತಲೈವಾಸ್‌ ಸವಾರಿ

ಬೆಂಗಳೂರು: ಎಂಟನೇ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ತಮಿಳ್‌ ತಲೈವಾಸ್‌ ಮೊದಲ ಗೆಲುವು ಸಾಧಿಸಿದೆ. ದಿನದ ಮೊದಲ ಪಂದ್ಯದಲ್ಲಿ ಅದು ಪುನೇರಿ ಪಲ್ಟಾನ್‌ ವಿರುದ್ಧ 36-26 ಅಂಕಗಳಿಂದ ಗೆದ್ದು ಬಂದಿತು. ಪಾಟ್ನಾ ಪೈರೇಟ್ಸ್‌ ಮತ್ತು ಬೆಂಗಾಲ್‌ ವಾರಿಯರ್ ನಡುವಿನ ಇನ್ನೊಂದು ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಇದನ್ನು ಪಾಟ್ನಾ 44-30 ಅಂತರದಿಂದ ಜಯಿಸಿತು.

ಮನ್‌ಜೀತ್ ಸಾಹಸ
ಇದು ಈ ಕೂಟದಲ್ಲಿ ತಮಿಳ್‌ ತಲೈವಾಸ್‌ಗೆ ಒಲಿದ ಮೊದಲ ಜಯ. 4 ಪಂದ್ಯಗಳನ್ನಾಡಿರುವ ತಲೈವಾಸ್‌ ಎರಡನ್ನು ಟೈ ಮಾಡಿಕೊಂಡು, ಒಂದರಲ್ಲಿ ಸೋಲನುಭವಿಸಿತ್ತು. ಇನ್ನೊಂದೆಡೆ ಪುನೇರಿ 4 ಪಂದ್ಯಗಳಲ್ಲಿ 3 ಸೋಲನುಭವಿಸಿ ಕೊನೆಯ ಸ್ಥಾನಕ್ಕೆ ಅಂಟಿಕೊಂಡಿತು.

ತಲೈವಾಸ್‌ ಮೇಲುಗೈಯಲ್ಲಿ ರೈಡರ್‌ ಮನ್‌ಜೀತ್ ಸಾಹಸ ಮಹತ್ವದ್ದಾಗಿತ್ತು. ಅವರು 17 ರೈಡ್‌ ನಡೆಸಿ ಸರ್ವಾಧಿಕ 8 ಅಂಕ ತಂದಿತ್ತರು. 5 ಟಚ್‌ ಪಾಯಿಂಟ್‌ ಮತ್ತು 3 ಬೋನಸ್‌ ಪಾಯಿಂಟ್‌ ಇದರಲ್ಲಿ ಸೇರಿತ್ತು. 17ರಲ್ಲಿ 5 ರೈಡ್‌ ಯಶಸ್ವಿಯಾಗಿತ್ತು. ಮನ್‌ಜೀತ್ ಹೊರತುಪಡಿಸಿದರೆ ನಾಯಕನೂ ಆಗಿರುವ ಡಿಫೆಂಡರ್‌ ಸುರ್ಜೀತ್‌ ಸಿಂಗ್‌ 3 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಾಗರ್‌ ಮತ್ತು ಸಾಹಿಲ್‌ ತಲಾ 2 ಅಂಕ ಕೊಡಿಸಿದರು. ವಿರಾಮದ ವೇಳೆ 18-11 ಮುನ್ನಡೆಯಲ್ಲಿದ್ದ ತಮಿಳ್‌ ತಲೈವಾಸ್‌ ಆಗಲೇ ಗೆಲುವಿನ ಸೂಚನೆ ನೀಡಿತ್ತು.

ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ : ರಾಹುಲ್ ಟೀಮ್ ಇಂಡಿಯಾ ನಾಯಕ

ಪುನೇರಿ ಹಿನ್ನಡೆಯಲ್ಲಿ ರಾಹುಲ್‌ ಚೌಧರಿ ಅವರ ವೈಫ‌ಲ್ಯ ಎದ್ದು ಕಂಡಿತು. ಅವರು ಕಳೆದ ವರ್ಷದ ಕಳಫೆ ಫಾರ್ಮನ್ನೇ ಮುಂದುವರಿಸಿದ್ದು ತಂಡದ ಪಾಲಿಗೆ ದೊಡ್ಡ ಆಘಾತವಾಗಿದೆ. ಈ ಪಂದ್ಯದಲ್ಲಿ ರಾಹುಲ್‌ ತಂದಿತ್ತದ್ದು ಕೇವಲ ಎರಡಂಕ. ಮತ್ತೋರ್ವ ರೈಡರ್‌ ಪಂಕಜ್‌ ಮೋಹಿತೆ ಸಾಹಸ ಗಮನಾರ್ಹ ಮಟ್ಟದಲ್ಲಿತ್ತು. ಅವರಿಂದ ತಂಡಕ್ಕೆ ಎಂಟಂಕಗಳ ಲಾಭವಾಯಿತು. ರೈಡರ್‌ ಅಸ್ಲಾಮ್‌ ಮತ್ತು ಡಿಫೆಂಡರ್‌ ವಿಶಾಲ್‌ ಭಾರದ್ವಾಜ್‌ ತಲಾ 4 ಅಂಕ ತಂದು ಕೊಟ್ಟರು.

 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.