ಪುನೇರಿ ಹುಲಿಗೆ ಹರ್ಯಾಣದ ಹುಲ್ಲೆ ಬಲಿ


Team Udayavani, Sep 20, 2017, 12:12 PM IST

22-PT-40.jpg

ರಾಂಚಿ: ಹುಲ್ಲೆಯ ಮೇಲೆ ಹುಲಿ ಎರಗಿದಂತೆ ಎಂಬ ಗಾದೆಯನ್ನು ನೆನಪಿಸುವಂತಿತ್ತು ಪುನೇರಿ ಪಲ್ಟಾನ್‌ ಮತ್ತು ಹರ್ಯಾಣ ಸ್ಟೀಲರ್ ನಡುವಿನ ಪ್ರೊ ಕಬಡ್ಡಿ ಪಂದ್ಯ. ಹೊಸ ತಂಡ ಮತ್ತು ಹೊಸ ಹುಡುಗರನ್ನೇ ಹೊಂದಿರುವ ಹರ್ಯಾಣ ಮೇಲೆ ಹುಲಿಗಳಂತೆ ಎರಗಿದ ಪುನೇರಿ ದಂಡು 37-25ರ ಭಾರೀ ಅಂತರದಿಂದ ಜಯಿಸಿತು. 

ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ಪಾಟ್ನಾ ಪೈರೇಟ್ಸ್‌ 36-32 ಅಂಕಗಳ ಜಯ ಕಂಡಿತು. ನಾಯಕ ವಜೀರ್‌ ವಿಫ‌ಲ ಮಂಗಳವಾರದ ಪ್ರೊ ಕಬಡ್ಡಿ ರಾಂಚಿ ಚರಣದ ಪಂದ್ಯದಲ್ಲಿ ಪುನೇರಿ ಪಲ್ಟಾನ್‌ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. 

ಹರ್ಯಾಣ ನಾಯಕ ವಜೀರ್‌ ಸಿಂಗ್‌ ತನ್ನ ನಾಯಕ ಸ್ಥಾನದ ಘನತೆಗೆ ತಕ್ಕಂತೆ ಆಡಲಿಲ್ಲ. ಅವರು ಪೂರ್ಣ ವಿಫ‌ಲರಾದರು. ಅವರ ಆಟ ತಂಡದ ಇತರ ಆಟಗಾರರಿಗೆ ಸ್ಫೂರ್ತಿ ನೀಡುವ ಮಟ್ಟದಲ್ಲಿ ಇರಲೇ ಇಲ್ಲ. ಇದರ ಜತೆಗೆ ಕರ್ನಾಟಕದ ಪ್ರಶಾಂತ್‌ ರೈಗೆ ಪೂರ್ಣ ಪ್ರಮಾಣದ ಅವಕಾಶ ಸಿಗಲೇ ಇಲ್ಲ. ಭರ್ತಿ ಅವಕಾಶ ಕೊಟ್ಟರೆ ಲಾಭ ತಂದುಕೊಡುವ ಎಲ್ಲ ಸಾಮರ್ಥ್ಯವಿದ್ದರೂ ಪ್ರಶಾಂತ್‌ ರೈ ಅವರನ್ನು ಇಡೀ ಪಂದ್ಯದ ಅಲ್ಲಲ್ಲಿ ಮಾತ್ರ ಬಳಸಿಕೊಂಡಿದ್ದು ಪ್ರಶ್ನಾರ್ಥಕವಾಗಿತ್ತು.

2 ಬಾರಿ ಆಲೌಟ್‌
ಪಂದ್ಯದಲ್ಲಿ ಹರ್ಯಾಣ 2 ಬಾರಿ ಆಲೌ ಟಾಯಿತು. ಮೊದಲ ಅವಧಿಯ 19ನೇ ನಿಮಿಷದಲ್ಲಿ ಹರ್ಯಾಣ ಸುಲಭವಾಗಿ ಆಲೌಟಾಯಿತು. ಆಗ ಹರ್ಯಾಣದ ಅಂಕ 10, ಪುನೇರಿ 15 ಆಗಿತ್ತು. 20ನೇ ನಿಮಿಷ ಮುಗಿದಾಗ ಹರ್ಯಾಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಎದುರಾಳಿಗೆ ಇನ್ನೊಂದು ಅಂಕ ಬಿಟ್ಟುಕೊಟ್ಟಿತು.

2ನೇ ಅವಧಿಯಲ್ಲಿ, ಅಂದರೆ 36ನೇ ನಿಮಿಷದಲ್ಲಿ ಹರ್ಯಾಣ ಮತ್ತೂಮ್ಮೆ ಆಲೌಟಾಯಿತು. ಹರ್ಯಾಣದ ಆಟ ನೋಡಿದಾಗ ಇದು ನಿರೀಕ್ಷಿತವೇ ಆಗಿತ್ತು. ಆಗ ಹರ್ಯಾಣದ ಅಂಕ 20, ಪುನೇರಿ 33. ಹರ್ಯಾಣದ ಬಲವಿಲ್ಲದ ಆಟವನ್ನು ನೋಡಿದಾಗ ಅದು 2 ಬಾರಿ ಮಾತ್ರ ಆಲೌಟಾಗಿದ್ದೇ ಕಡಿಮೆಯೆನಿಸುವಂತಿತ್ತು.

ಹರ್ಯಾಣ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಅನನುಭವಿ ಆಟಗಾರರು. ಪ್ರೊ ಕಬಡ್ಡಿಯ ಪ್ರತಿಭಾ ವನ್ವೇಷಣೆಯಲ್ಲಿ ಸ್ಥಾನ ಪಡೆದ ಬಹುತೇಕರು ಇದ್ದ ಪರಿಣಾಮ ಅಲ್ಲಿ ಸಾಮರ್ಥ್ಯ, ಕೌಶಲದ ಜತೆಗೆ ದೇಹಬಲವೂ ಕಡಿಮೆಯಿತ್ತು. ವಿಫ‌ಲರಾದರು. 

ಕೆ. ಪೃಥ್ವಿಜಿತ್‌

ಟಾಪ್ ನ್ಯೂಸ್

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-sadadas

NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.