ಭದ್ರತಾ ಖಾತ್ರಿ ಒದಗಿಸಿ: ರೆಫ್ರಿ ಆಗ್ರಹ


Team Udayavani, Aug 29, 2017, 12:44 PM IST

29-SPORTS-4.jpg

ಪಲ್ಲೆಕಿಲೆ: ಭಾರತ-ಶ್ರೀಲಂಕಾ ನಡುವಿನ ತೃತೀಯ ಏಕದಿನ ಪಂದ್ಯದ ವೇಳೆ ಒಂದು ವರ್ಗದ ಪ್ರೇಕ್ಷಕರು ಅಂಗಳಕ್ಕೆ ಬಾಟ್ಲಿ ಹಾಗೂ ಇನ್ನಿತರ ವಸ್ತುಗಳನ್ನೆಸೆದ ಘಟನೆಯನ್ನು ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್ ಗಂಭೀರವಾಗಿ ಪರಿಗಣಿಸಿ ದ್ದಾರೆ. ಮುಂದಿನ ಪಂದ್ಯ ಗಳ ವೇಳೆ ಆಟಗಾರರಿಗೆ ಭದ್ರತಾ ಖಾತ್ರಿ ಒದ ಗಿಸುವಂತೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಆಗ್ರ ಹಿಸಿದ್ದಾರೆ.

ಭಾರತದ ಗೆಲುವಿಗೆ ಇನ್ನೇನು 8 ರನ್‌ ಅಗತ್ಯವಿದೆ ಎನ್ನುವಾಗ ಪಲ್ಲೆಕಿಲೆ ಸ್ಟೇಡಿಯಂನ ಹುಲ್ಲುಹಾಸಿನ ವಿಭಾಗದಲ್ಲಿದ್ದ ವೀಕ್ಷ ಕರು ರೊಚ್ಚಿಗೆದ್ದು ಲಂಕಾ ಕ್ಷೇತ್ರರಕ್ಷಕರತ್ತ ಪ್ಲಾಸ್ಟಿಕ್‌ ಬಾಟಲಿ ಹಾಗೂ ಇನ್ನಿತರ ವಸ್ತುಗಳನ್ನು ಎಸೆದಿದ್ದರು. ತವರಿನ ತಂಡ ಏಕದಿನದಲ್ಲೂ ಸರಣಿ ಸೋಲುವುದನ್ನು ಇವರಿಂದ ಸಹಿಸಲಾಗಿರಲಿಲ್ಲ. ಇದರಿಂದ ಸುಮಾರು 35 ನಿಮಿಷ ಆಟ ಸ್ಥಗಿತಗೊಂಡಿತು.

“ಈ ಘಟನೆಯ ಬಳಿಕ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬೆನ್ನು ಬೆನ್ನಿಗೆ ತುರ್ತು ಸಭೆಗಳನ್ನು ನಡೆಸಿ ಪರಿಸ್ಥಿತಿಯನ್ನು ಅವಲೋಕಿಸುವ ಪ್ರಯತ್ನ ಮಾಡಿದೆ. ಭದ್ರತಾ ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಭದ್ರತಾ ಯೋಜನೆಗಳನ್ನೂ ರೂಪಿಸ ಲಾಗಿದೆ. ಕೊಲಂಬೋದಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತೆ ನೋಡಿಕೊಳ್ಳಲಾಗುವುದು’ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ ಅಧಿಕಾರಿ
ಯೊಬ್ಬರು ತಿಳಿಸಿದ್ದಾರೆ.

ನಾಟಕೀಯ ಬೆಳವಣಿಗೆಗಳು
ರವಿವಾರದ ಘಟನೆಯ ವೇಳೆ ಕೆಲವು ನಾಟ ಕೀಯ ಬೆಳವಣಿಗೆಗಳೂ ಸಂಭವಿಸಿದವು. ಅಂಪಾ ಯರ್‌ಗಳು ಪಂದ್ಯವನ್ನು ನಿಲ್ಲಿಸುವ ಸೂಚನೆ ನೀಡಿದರು. ಆಟಗಾರರು ಪರಸ್ಪರ ಹಸ್ತಲಾಘವ ಮಾಡಿಕೊಂಡು ಪೆವಿಲಿಯನ್‌ ಸೇರಿಕೊಂಡರು. ಸ್ವಲ್ಪ ಹೊತ್ತಿನಲ್ಲಿ ಎಲ್ಲರೂ ಮತ್ತೆ ಮೈದಾನಕ್ಕಿಳಿದರು. ದುಂಡಾವರ್ತಿ ನಡೆಸಿದ ವಿಭಾಗದ ವೀಕ್ಷಕರನ್ನು ಹೊರಗಟ್ಟಿ ಆಟವನ್ನು ಮುಂದುವರಿಸಲಾಯಿತು. ಆಗ 1996ರ ವಿಶ್ವಕಪ್‌ ಕೂಟದ ಭಾರತ-ಶ್ರೀಲಂಕಾ ನಡುವಿನ ಕೋಲ್ಕತಾದ ಸೆಮಿಫೈನಲ್‌ ಪಂದ್ಯದ ದೃಶ್ಯಾವಳಿ ಕಣ್ಮುಂದೆ ಸುಳಿದು ಹೋಯಿತು. ಅಂದು ಲಂಕೆ ಎದುರು ಭಾರತ ಸೋಲುತ್ತಿದ್ದಾಗ ವೀಕ್ಷಕರು ಭಾರೀ ದುಂಡಾವರ್ತಿ ನಡೆಸಿ ಸ್ಟೇಡಿಯಂಗೆ ಅಗ್ನಿಸ್ಪರ್ಶ ಮಾಡಿದ್ದರು. ರವಿವಾರದ ಅಹಿತಕರ ಘಟನೆಯಿಂದ ದ್ವೀಪ ರಾಷ್ಟ್ರದ ಕ್ರಿಕೆಟ್‌ ಮತ್ತೆ ಕೆಟ್ಟ ಕಾರಣಕ್ಕಾಗಿ ಸುದ್ದಿ ಯಾಗಿದೆ. ಡಂಬುಲದ ಮೊದಲ ಪಂದ್ಯದಲ್ಲಿ ಲಂಕಾ ಸೋತಾಗ ಅಭಿಮಾನಿಗಳು ತಂಡದ ಬಸ್ಸನ್ನು ಅರ್ಧ ಗಂಟೆ ಕಾಲ ತಡೆದು ನಿಲ್ಲಿಸಿ ತಮ್ಮ ಆಕ್ರೋಶವನ್ನು ಹೊರಗೆಡಹಿದ್ದರು.

ಗಾವಸ್ಕರ್‌ ಖಂಡನೆ
ಈ ವಿದ್ಯಮಾನವನ್ನು ಸುನೀಲ್‌ ಗಾವಸ್ಕರ್‌ ಖಂಡಿಸಿದ್ದು, “ಕ್ರಿಕೆಟಿಗರು ಶ್ರೇಷ್ಠ ಪ್ರದರ್ಶನ ನೀಡುವಾಗ ವೀಕ್ಷಕರಿಗೆ ಹೇಗೆ ಮೈದಾನಕ್ಕೆ ಬೆಲೆ ಬಾಳುವ ವಸ್ತುಗಳನ್ನು ಎಸೆಯುವ ಅಧಿಕಾರವಿಲ್ಲವೋ ಹಾಗೆಯೇ ತಂಡದ ಸೋಲಿನ ಸಮಯದಲ್ಲೂ ಬಾಟ್ಲಿ ಮೊದಲಾದ ಯಾವುದೇ ವಸ್ತುವನ್ನು ಎಸೆಯುವ ಅಧಿಕಾರವಿಲ್ಲ’ ಎಂದು ನುಡಿದಿದ್ದಾರೆ.

ಫೀಲ್ಡ್‌ನಲ್ಲೇ ಮಲಗಿದ ಧೋನಿ
ಈ ಘಟನೆಯ ವೇಳೆ ಎಲ್ಲರೂ ತೀವ್ರ ಒತ್ತಡಲ್ಲಿದ್ದರೆ ಮಹೇಂದ್ರ ಸಿಂಗ್‌ ಧೋನಿ ಮಾತ್ರ ಕೂಲ್‌ ಆಗಿ ಕ್ರೀಡಾಂಗಣದಲ್ಲೇ ಉದ್ದಕ್ಕೆ ಮಲಗಿಕೊಂಡಿದ್ದಾರೆ. ಈ ಫೋಟೋ ಟ್ವಿಟರ್‌ನಲ್ಲಿ ಈಗ ವೈರಲ್‌ ಆಗಿದೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಲೈಕ್ಸ್‌, ಕಾಮೆಂಟ್ಸ್‌ ಮಾಡಿದ್ದಾರೆ.

ಎಕ್ಸ್‌ಟ್ರಾ ಇನ್ನಿಂಗ್ಸ್‌
    ಶ್ರೀಲಂಕಾ ವಿರುದ್ಧ ಭಾರತ ಸತತ 8 ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿತು. ಇದು ನಿರ್ದಿಷ್ಟ ತಂಡವೊಂದರ ವಿರುದ್ಧ ಭಾರತ ಸಾಧಿಸಿದ ಅತ್ಯಧಿಕ ಸಂಖ್ಯೆಯ ಸತತ ಸರಣಿ ಗೆಲುವು. ಈ ದಾಖಲೆ ಯಾದಿಯಲ್ಲಿ ಭಾರತಕ್ಕೆ ಜಂಟಿ ದ್ವಿತೀಯ ಸ್ಥಾನ. ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಕೂಡ ಸತತ 8 ಸರಣಿಗಳನ್ನು ಗೆದ್ದಿತ್ತು. ವಿಶ್ವದಾಖಲೆ ಕೂಡ ಪಾಕಿಸ್ಥಾನ ಹೆಸರಲ್ಲೇ ಇದೆ. ಅದು ವೆಸ್ಟ್‌ ಇಂಡೀಸ್‌ ವಿರುದ್ಧ ಸತತ 9 ಏಕದಿನ ಸರಣಿಗಳನ್ನು ಜಯಿಸಿತ್ತು.

     ಜಸ್‌ಪ್ರೀತ್‌ ಬುಮ್ರಾ ಏಕದಿನ ಪಂದ್ಯವೊಂದರಲ್ಲಿ ಮೊದಲ ಸಲ 5 ವಿಕೆಟ್‌ ಉರುಳಿಸಿದರು (27ಕ್ಕೆ 5). ಕಳೆದ ವರ್ಷ ಜಿಂಬಾಬ್ವೆ ವಿರುದ್ಧ 22ಕ್ಕೆ 4 ವಿಕೆಟ್‌ ಪಡೆದದ್ದು ಬುಮ್ರಾ ಅವರ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. 

     ಬುಮ್ರಾ “ಲಿಸ್ಟ್‌ ಎ’ ಕ್ರಿಕೆಟ್‌ನಲ್ಲೂ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು (27ಕ್ಕೆ 5). 2015-16ರ ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ದಿಲ್ಲಿ ವಿರುದ್ಧ 28ಕ್ಕೆ 5 ವಿಕೆಟ್‌ ಉರುಳಿಸಿದ್ದು ಹಿಂದಿನ ಉತ್ತಮ ಬೌಲಿಂಗ್‌.

     ಬುಮ್ರಾ ಅತೀ ಕಡಿಮೆ 19 ಪಂದ್ಯಗಳಲ್ಲಿ 4 ಸಲ 4 ಪ್ಲಸ್‌ ವಿಕೆಟ್‌ ಹಾರಿಸಿ ಭಾರತೀಯ ದಾಖಲೆ ಬರೆದರು. ಹಿಂದಿನ ಸಾಧಕ ಮೊಹಮ್ಮದ್‌ ಶಮಿ. ಅವರು 4 ಸಲ “4 ಪ್ಲಸ್‌’ ವಿಕೆಟ್‌ ಕೀಳಲು 35 ಪಂದ್ಯಗಳನ್ನಾಡಿದ್ದರು.

     ರೋಹಿತ್‌ ಶರ್ಮ 12ನೇ ಶತಕ ಹೊಡೆದರು. ವಿದೇಶದಲ್ಲಿ ದಾಖಲಾದ 8ನೇ ಶತಕ. ಶ್ರೀಲಂಕಾದಲ್ಲಿ ಮೊದಲನೆಯದು. 

    ಧೋನಿ ಯಶಸ್ವಿ ಚೇಸಿಂಗ್‌ ವೇಳೆ ನೂರರ ಸರಾಸರಿ (101.84) ದಾಖಲಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿದರು (ಕನಿಷ್ಠ ಸಾವಿರ ರನ್‌ ಮಾನದಂಡ). 

     ಲಹಿರು ತಿರಿಮನ್ನೆ ಭಾರತದ ವಿರುದ್ಧ ಸತತ 3 ಪಂದ್ಯಗಳಲ್ಲಿ 50 ಪ್ಲಸ್‌ ರನ್‌ ಬಾರಿಸಿದ ಶ್ರೀಲಂಕಾದ 6ನೇ ಬ್ಯಾಟ್ಸ್‌ಮನ್‌ ಎನಿಸಿದರು. ಭಾರತದೆದುರಿನ ಹಿಂದಿನೆರಡು ಪಂದ್ಯಗಳಲ್ಲಿ ಅವರು 59 ಹಾಗೂ 52 ರನ್‌ ಹೊಡೆದಿದ್ದರು.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.