ಸಿಂಧು ಯಶಸ್ಸಿಗೆ ಕಾರಣ ದ. ಕೊರಿಯಾದ ವನಿತಾ ಕೋಚ್‌!

ಕಿಮ್‌ ಜಿ ಹ್ಯುನ್‌ 1994ರ ಹಿರೋಶಿಮಾ ಏಶ್ಯಾಡ್‌ನ‌ಲ್ಲಿ ಚಿನ್ನದ ಪದಕ ಗೆದ್ದ ಸಾಧಕಿ

Team Udayavani, Aug 27, 2019, 5:55 AM IST

coach-Kim-Kim

ಮಣಿಪಾಲ: ಪಿ.ವಿ. ಸಿಂಧು ಮತ್ತು ಭಾರತೀಯ ಕ್ರೀಡೆಗೆ ದೊಡ್ಡದೊಂದು ಬ್ರೇಕ್‌ ಸಿಕ್ಕಿದೆ. ಇದಕ್ಕೆ ಮೂಲವಾದದ್ದು ಬಸೆಲ್‌ನಲ್ಲಿ ಮುಗಿದ ವಿಶ್ವ ಚಾಂಪಿಯನ್‌ಶಿಪ್‌. ಇದರಲ್ಲಿ ಸಿಂಧು ಸ್ವರ್ಣ ಸಾಧನೆಗೈಯುವ ಮೂಲಕ ನೂತನ ಇತಿಹಾಸ ನಿರ್ಮಿಸಿದರು. ಇದಕ್ಕೆ ಮುಖ್ಯ ಕಾರಣರಾದವರು ಕಿಮ್‌ ಜಿ ಹ್ಯುನ್‌. ಇವರು ಸಿಂಧು ಮಾರ್ಗದರ್ಶನಕ್ಕೆ ಲಭಿಸಿದ ದಕ್ಷಿಣ ಕೊರಿಯಾದ ವನಿತಾ ಕೋಚ್‌!

ಸಿಂಧುಗೆ ಫೈನಲ್‌ ಹೊಸತಲ್ಲ. ಆದರೆ ಫೈನಲ್‌ ಗೆಲುವು ಮರೀಚಿಕೆಯಾಗುತ್ತಲೇ ಇತ್ತು. ಚಿನ್ನ ಗೆಲ್ಲುವಲ್ಲೆಲ್ಲ ಬೆಳ್ಳಿಗೆ ಕೊರಳೊಡ್ಡುತ್ತಿದ್ದರು. ಹೀಗಾಗಿ ಸಿಂಧು ಮೇಲೆ ಅನೇಕ ಮಂದಿಗೆ ನಂಬಿಕೆ ಹೊರಟು ಹೋಗಿತ್ತು. ಟೀಕೆಗಳಿಗೂ ಕೊರತೆ ಇರಲಿಲ್ಲ. ಆದರೀಗ ವಿಶ್ವ ಬ್ಯಾಡ್ಮಿಂಟನ್‌ ಫ‌ಲಿತಾಂಶದ ಬಳಿಕ ಇವರು “ಸ್ವರ್ಣ ಸಿಂಧು’ ಆಗಿದ್ದಾರೆ.

ವನಿತಾ ಕೋಚ್‌ ಮಾರ್ಗದರ್ಶನ
ಸಿಂಧು ಮೇಲೆ ನಿರೀಕ್ಷೆಯ ಭಾರ ಹೆಚ್ಚಿದ್ದು 2016ರ ರಿಯೋ ಒಲಿಂಪಿಕ್ಸ್‌ ಬಳಿಕ. ಅಲ್ಲಿ ಅವರು ಬೆಳ್ಳಿ ಪದಕ ಜಯಿಸಿ ಹೊಸ ಭರವಸೆ ಮೂಡಿಸಿದ್ದರು. ಒಂದೆಡೆ ಸೈನಾ ನೆಹ್ವಾಲ್‌ ಹಿನ್ನಡೆ ಕಾಣುತ್ತಿರುವಾಗ ಸಿಂಧು ಒಂದೊಂದೇ ಎತ್ತರ ತಲುಪುತ್ತ ಹೋಗುತ್ತಿದ್ದರು. ಆದರೆ “ಪಫೆìಕ್ಟ್ ಫಿನಿಶರ್‌’ ಆಗಲು ಎಡವುತ್ತಿದ್ದರು. ಇದಕ್ಕೆ ಪರಿ ಹಾರ ಕಂಡುಹಿಡಿದವರೇ ಕಿಮ್‌ ಜಿ ಹ್ಯುನ್‌.

ಜಿ ಹ್ಯುನ್‌ ಭಾರತೀಯಳ ಆಟವನ್ನು ಸೂಕ್ಷ್ಮ ವಾಗಿ ಅವಲೋಕಿಸುತ್ತ ಹೋದರು. ಸಿಂಧು “ಟಾಪ್‌ ಲೆವೆಲ್‌’ ಮುಟ್ಟಿದ್ದಾರೇನೋ ನಿಜ. ಆದರೆ ಈ ಮಟ್ಟಕ್ಕೆ ತಕ್ಕ ಆಟ ಅವರಲ್ಲಿಲ್ಲ ಎಂಬುದನ್ನು ಮನಗಂಡರು. ಚಾತುರ್ಯ, ಬುದ್ಧಿ ವಂತಿಕೆ, ಮನೋಬಲದ ಕೊರತೆ ಜತೆಗೆ ಅವರ ಹಿಟ್ಟಿಂಗ್‌ನಲ್ಲಿ ಏನೋ ದೋಷ ಇರುವುದನ್ನು ಮನಗಂಡರು. ಇಷ್ಟು ಎತ್ತರದ ಆಟಗಾರ್ತಿ ಜಪಾನ್‌, ಚೀನ, ಇಂಡೋನೇಷ್ಯಾದ ಚಿಕ್ಕ ಗಾತ್ರದ ಆಟಗಾರರೆದುರು ಸೋಲಲು ಸಾಧ್ಯವೇ ಇಲ್ಲ ಎಂಬುದು ಜಿ ಹ್ಯುನ್‌ ಅವರ ದೃಢ ನಂಬಿಕೆ ಆಗಿತ್ತು.

ಸಿಂಧು ಇದಕ್ಕೆಲ್ಲ ಸಕಾರಾತ್ಮಕವಾಗಿ ಸ್ಪಂದಿಸುತ್ತ ಹೋದರು. ಇದರ ಫ‌ಲಿತಾಂಶವೇ ವಿಶ್ವ ಚಾಂಪಿಯನ್‌ ಚಿನ್ನ!

ಸಿಂಧು ವಿಶ್ವ ಕಿರೀಟ ಏರಿಸಿಕೊಂಡ ಕೂಡಲೇ ಸ್ಮರಿಸಿಕೊಂಡದ್ದು ಕೋಚ್‌ಗಳಾದ ಜಿ ಹ್ಯುನ್‌, ಗೋಪಿಚಂದ್‌, ಟ್ರೇನರ್‌ ಶ್ರೀಕಾಂತ್‌ ವರ್ಮ, ಪ್ರಾಯೋಜಕರು ಮತ್ತು ಕುಟುಂಬದವರನ್ನು.

ಚಿನ್ನಗಳಲ್ಲೇ ಶ್ರೇಷ್ಠ…
ಸಿಂಧು ಈವರೆಗೆ ಜಯಿಸಿದ್ದು ಐದೇ ಚಿನ್ನ. ಇದರಲ್ಲೊಂದು ತಂಡ ಸ್ಪರ್ಧೆಯಲ್ಲಿ ಬಂದಿತ್ತು. ಉಳಿದಂತೆ 2011ರ ಕಾಮನ್‌ವೆಲ್ತ್‌ ಯುತ್‌ ಗೇಮ್ಸ್‌, 2012ರ ಏಶ್ಯನ್‌ ಜೂನಿಯರ್‌ ಚಾಂಪಿಯನ್‌ಶಿಪ್‌, 2016ರ ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಒಲಿದಿತ್ತು. ಆದರೆ ಬಸೆಲ್‌ ಪದಕ ಮಾತ್ರ ಚಿನ್ನಗಳಲ್ಲೇ ಶ್ರೇಷ್ಠವಾದದ್ದು. ಇದು ಉಳಿದ ಚಿನ್ನಗಳಿಗೆ ದಿಕ್ಸೂಚಿಯಾಗಬೇಕಿದೆ. ಸಿಂಧು ಚಿನ್ನದ ಓಟ ಇಲ್ಲಿಂದ ಮುಂದುವರಿಯಬೇಕಿದೆ. 6 ಬೆಳ್ಳಿ, 9 ಕಂಚು ಸಿಂಧು ಗೆದ್ದ ಇತರ ಪದಕಗಳಾಗಿವೆ.

ನನಗೆ ನಾನೇ ಕೇಳಿಕೊಂಡಿದ್ದೆ…
“ನಾನು 2 ವರ್ಷದ ಹಿಂದೆ ಫೈನಲ್‌ನಲ್ಲಿ ಸೋತಾಗ ಬೇಸರವಾಗಿತ್ತು. ಕಳೆದ ವರ್ಷವೂ ಸೋತಾಗ ನೋವಿನ ಜತೆಗೆ ಸಿಟ್ಟು ಕೂಡ ಬಂದಿತ್ತು. ಆಗ ನನಗೆ ನಾನೇ, ನಿನಗೆ ಇನ್ನೊಂದು ಪಂದ್ಯವನ್ನು ಏಕೆ ಗೆಲ್ಲಲಾಗದು… ಎಂದು ಪ್ರಶ್ನಿಸಿಕೊಂಡಿದ್ದೆ. ಈ ದಿನ ನನ್ನ ಆಟವನ್ನು ಆಡಬೇಕೆಂದು ನಿರ್ಧರಿಸಿದ್ದೆ. ಅದು ಫ‌ಲ ನೀಡಿತು’ ಎಂದು ಸಿಂಧು ವಿಶ್ವ ಚಾಂಪಿಯನ್‌ ಆದ ಬಳಿಕ ನೀಡಿದ ಪ್ರತಿಕ್ರಿಯೆ.

ಮುಂದಿದೆ ಟೋಕಿಯೊ ಒಲಿಂಪಿಕ್ಸ್‌
ಸಿಂಧು ಗೆದ್ದ ವಿಶ್ವ ಚಾಂಪಿಯನ್‌ ಚಿನ್ನ ಕೇವಲ ಬ್ಯಾಡ್ಮಿಂಟನ್‌ಗಷ್ಟೇ ಸೀಮಿತವಾದ ಸಾಧನೆಯಲ್ಲ. ಇದು ಭಾರತದ ಕ್ರೀಡಾಪರ್ವದ ನೂತನ ಶಕೆ. ಮುಂದಿನ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಈ ಸಾಧನೆ ಸ್ಫೂರ್ತಿ ಆಗಬೇಕಿದೆ.

ನಾನು 2 ವರ್ಷದ ಹಿಂದೆ ಫೈನಲ್‌ನಲ್ಲಿ ಸೋತಾಗ ಬೇಸರವಾಗಿತ್ತು. ಕಳೆದ ವರ್ಷವೂ ಸೋತಾಗ ನೋವಿನ ಜತೆಗೆ ಸಿಟ್ಟು ಕೂಡ ಬಂದಿತ್ತು. ಈ ಬಾರಿ ನನ್ನ ಆಟವನ್ನು ಆಡಬೇಕೆಂದು ನಿರ್ಧರಿಸಿದ್ದೆ. ಅದು ಫ‌ಲ ನೀಡಿತು.
– ಪಿ.ವಿ.ಸಿಂಧು

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.