ಕ್ವಾರ್ಟರ್ ಫೈನಲ್ಗೆ ನೆಗೆದ ಪಿ.ವಿ. ಸಿಂಧು
Team Udayavani, Jul 19, 2019, 5:39 AM IST
ಜಕಾರ್ತಾ: ಭಾರತದ ಟಾಪ್ ಶಟ್ಲರ್ ಪಿ.ವಿ. ಸಿಂಧು “ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ದ್ವಿತೀಯ ಸುತ್ತು ದಾಟಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಜಿದ್ದಾಜಿದ್ದಿ ಮುಖಾಮುಖೀಯಲ್ಲಿ 5ನೇ ಶ್ರೇಯಾಂ ಕದ ಸಿಂಧು ಡೆನ್ಮಾರ್ಕ್ನ ಮಿಯಾ ಬ್ಲಿಕ್ಫೆಲ್ಟ್ ಅವರನ್ನು 21-14, 17-21, 21-11 ಅಂತರದಿಂದ ಪರಾಭವಗೊಳಿ ಸಿದರು. ಒಂದು ಗಂಟೆ, 2 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ಇದು ವಿಶ್ವದ ನಂ.3 ಆಟಗಾರ್ತಿ, ಬ್ಲಿಕ್ಫೆಲ್ಟ್ ವಿರುದ್ಧ ಈ ವರ್ಷ ಸಿಂಧು ಸಾಧಿಸಿದ 3ನೇ ಗೆಲುವು. ಇದಕ್ಕೂ ಮುನ್ನ ಇಂಡಿಯನ್ ಓಪನ್ ಮತ್ತು ಸಿಂಗಾಪುರ್ ಓಪನ್ ಕೂಟಗಳಲ್ಲಿ ಸಿಂಧು ನೇರ ಗೇಮ್ಗಳಿಂದ ಡೇನ್ ಆಟಗಾರ್ತಿಗೆ ಸೋಲುಣಿಸಿದ್ದರು.
ಸಿಂಧು ಅವರಿನ್ನು ಮಲೇಶ್ಯದ ಸೋನಿಯಾ ಚೆ-ಜಪಾನಿನ ನವೋಮಿ ಒಕುಹಾರಾ ನಡುವಿನ ವಿಜೇತರನ್ನು ಕ್ವಾ. ಫೈನಲ್ನಲ್ಲಿ ಎದುರಿಸಲಿದ್ದಾರೆ.
ಪುರುಷರ ಡಬಲ್ಸ್
ಜೋಡಿಗೆ ಸೋಲು
ಈ ಕೂಟದ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ ಸೋಲನುಭವಿಸಿದೆ. ತವರಿನ ಅಗ್ರ ಶ್ರೇಯಾಂಕದ ಮಾರ್ಕಸ್ ಫೆರ್ನಾಲ್ಡಿ ಗಿಡೆಯೋನ್-ಕೆವಿನ್ ಸಂಜಯ ಸುಕಮುಲೊj ವಿರುದ್ಧದ 2ನೇ ಸುತ್ತಿನ ಮುಖಾಮುಖೀಯನ್ನು ಭಾರತೀಯ ಜೋಡಿ 15-21, 14-21 ಅಂಕಗಳಿಂದ ಕಳೆದುಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ