ಪರಾಸಿನ್ ಓಪನ್ ಎ ಚೆಸ್ ಟೂರ್ನಿ: ಪ್ರಗ್ನಾನಂದ ಚಾಂಪಿಯನ್
Team Udayavani, Jul 17, 2022, 11:39 PM IST
ಹೊಸದಿಲ್ಲಿ: ಭಾರತದ ಯುವ ಗ್ರ್ಯಾನ್ಮಾಸ್ಟರ್ ಆರ್. ಪ್ರಗ್ನಾನಂದ ಸರ್ಬಿಯಾದಲ್ಲಿ ನಡೆದ “ಪರಾಸಿನ್ ಓಪನ್ ಎ ಚೆಸ್ ಟೂರ್ನಿ’ಯಲ್ಲಿ ಚಾಂಪಿಯನ್ ಆಗಿದ್ದಾರೆ.
ಕೂಟದುದ್ದಕ್ಕೂ ಅಜೇಯ ರಾಗಿಯೇ ಉಳಿದ ಪ್ರಗ್ನಾನಂದ 9 ಸುತ್ತುಗಳ ಈ ಸ್ಪರ್ಧೆಯಲ್ಲಿ ಒಟ್ಟು 8 ಅಂಕ ಸಂಪಾದಿಸಿದರು. ದ್ವಿತೀಯ ಸ್ಥಾನಿ ಅಲೆಕ್ಸಾಂಡರ್ ಅವರಿಗಿಂತ ಕೇವಲ ಅರ್ಧ ಅಂಕದ ಮುನ್ನಡೆ ಹೊಂದಿದ್ದರು. ಭಾರತದ ಮತ್ತೋರ್ವ ಸ್ಪರ್ಧಿ ಎ.ಎಲ್. ಮುತ್ತಯ್ಯ 7 ಅಂಕಗಳೊಂದಿಗೆ 4ನೇ ಸ್ಥಾನಿಯಾದರು. ಅಂತಿಮ ಸುತ್ತಿನಲ್ಲಿ ಪ್ರಡ್ಕೆ ವಿರುದ್ಧ ಸೋತ ಭಾರತದ ಮತ್ತೋರ್ವ ಜಿಎಂ ಅರ್ಜುನ್ ಕಲ್ಯಾಣ್ (6.5) 7ನೇ ಸ್ಥಾನಕ್ಕೆ ಕುಸಿದರು.
ಅಮೋಘ ಫಾರ್ಮ್ ತೋರ್ಪಡಿದಸಿದ ಪ್ರಗ್ನಾನಂದ ಸತತ 6 ಪಂದ್ಯಗಳನ್ನು ಗೆದ್ದು ಭರವಸೆ ಮೂಡಿಸಿದ್ದರು. 7ನೇ ಸುತ್ತಿನಲ್ಲಿ ಪ್ರಡ್ಕೆ ವಿರುದ್ಧ ಡ್ರಾ ಸಾಧಿಸಿದ ಬಳಿಕ ಭಾರತದ ಅರ್ಜುನ್ ಕಲ್ಯಾಣ್ಗೆ ಸೋಲುಣಿಸಿದರು.
ಅಂತಿಮ ಸುತ್ತಿನಲ್ಲಿ ಕಜಾಕ್ಸ್ಥಾನದ ಅಲಿಶೇರ್ ಸುಲೆಯ್ಮೆನೋವ್ ವಿರುದ್ಧ ಡ್ರಾ ಸಾಧಿಸಿದರು. ಈ ಕೂಟದಲ್ಲಿ ಪ್ರಗ್ನಾನಂದ ದ್ವಿತೀಯ ಹಾಗೂ ಪ್ರಡ್ಕೆ ದ್ವಿತೀಯ ಶ್ರೇಯಾಂಕ ಹೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ