ಮೊದಲ ರಣಜಿ ಟ್ರೋಫಿ ಸನಿಹ ಮಧ್ಯ ಪ್ರದೇಶ: ರಜತ್‌ ಪಾಟೀದಾರ್‌ 122

ಮಧ್ಯಪ್ರದೇಶಕ್ಕೆ 162 ರನ್‌ ಲೀಡ್‌; ಚಾಂಪಿಯನ್‌ ಪಟ್ಟ ಖಾತ್ರಿ

Team Udayavani, Jun 25, 2022, 11:41 PM IST

ಮೊದಲ ರಣಜಿ ಟ್ರೋಫಿ ಸನಿಹ ಮಧ್ಯ ಪ್ರದೇಶ: ರಜತ್‌ ಪಾಟೀದಾರ್‌ 122

ಬೆಂಗಳೂರು: ಮಧ್ಯ ಪ್ರದೇಶ ದೇಶಿ ಕ್ರಿಕೆಟ್‌ ದೊರೆಯ ಪಟ್ಟವನ್ನು ಅಲಂಕರಿಸಲು ಸರ್ವರೀತಿಯಲ್ಲೂ ಸಿದ್ಧಗೊಂಡಿದೆ. ಈಗಾಗಲೇ ರಣಜಿ ಟ್ರೋಫಿಯತ್ತ ಒಂದು ಕೈ ಚಾಚಿದ್ದು, ರವಿವಾರ ನೂತನ ಇತಿಹಾಸ ನಿರ್ಮಿಸುವುದು ಬಹುತೇಕ ಖಾತ್ರಿಯಾಗಿದೆ.

ರಣಜಿ ಚಾಂಪಿಯನ್‌ ಎನಿಸಿಕೊಳ್ಳಲು ಮೊದಲ “ಅರ್ಹತಾ ಪರೀಕ್ಷೆ’ಯಾದ ಇನ್ನಿಂಗ್ಸ್‌ ಲೀಡ್‌ ಗಳಿಕೆಯಲ್ಲಿ ಮಧ್ಯ ಪ್ರದೇಶ ತೇರ್ಗಡೆಯಾಗಿದೆ. ಪಂದ್ಯದ 4ನೇ ದಿನವಾದ ಶನಿವಾರ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ ಪೇರಿಸಿತು. ಲಭಿಸಿದ ಮುನ್ನಡೆ 162 ರನ್‌. ರಜತ್‌ ಪಾಟೀದಾರ್‌ 122 ರನ್‌ ಬಾರಿಸಿ ತಂಡದ ಮೊತ್ತವನ್ನು ಐನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 374 ರನ್‌ ಗಳಿಸಿತ್ತು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಮುಂಬಯಿ 2 ವಿಕೆಟ್‌ ನಷ್ಟಕ್ಕೆ 113 ರನ್‌ ಗಳಿಸಿದೆ. ಇನ್ನೂ 49 ರನ್‌ ಹಿನ್ನಡೆಯಲ್ಲಿದೆ. ರವಿವಾರ ಪಂದ್ಯದ ಕೊನೆಯ ದಿನವಾದ್ದರಿಂದ ಸ್ಪಷ್ಟ ಗೆಲುವು ಅಸಾಧ್ಯ. ಹೀಗಾಗಿ 42ನೇ ರಣಜಿ ಟ್ರೋಫಿ ಮುಂಬಯಿ ಪಾಲಿಗೆ ಮರೀಚಿಕೆಯೇ ಆಗಿ ಉಳಿಯುವುದರಲ್ಲಿ, ಮಧ್ಯ ಪ್ರದೇಶ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತುವುದರಲ್ಲಿ ಅನುಮಾನವಿಲ್ಲ.

4ನೇ ದಿನದಾಟಕ್ಕೆ ಮಳೆಯಿಂದಲೂ ಅಡಚಣೆ ಆಗಿತ್ತು. ಹೀಗಾಗಿ ಅಂತಿಮ ದಿನ 95 ಓವರ್‌ಗಳ ಆಟ ಆಡಲಾಗುವುದು. ಇಲ್ಲಿ ಪವಾಡ ನಡೆಯುವುದು ಅನುಮಾನ. ಮಧ್ಯ ಪ್ರದೇಶ ಬರೋಬ್ಬರಿ 14 ಗಂಟೆ, 2 ನಿಮಿಷಗಳ ಕಾಲ ಬ್ಯಾಟಿಂಗ್‌ ನಡೆಸಿತು. ಎದುರಿಸಿದ್ದು 177.2 ಓವರ್‌.

ಪಾಟೀದಾರ್‌ ಪರಾಕ್ರಮ
ಮಧ್ಯ ಪ್ರದೇಶ 3 ವಿಕೆಟಿಗೆ 368 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಆಗ ರಜತ್‌ ಪಾಟೀದಾರ್‌ 67ರಲ್ಲಿದ್ದರು. ಸೊಗಸಾದ ಬ್ಯಾಟಿಂಗ್‌ ಮುಂದುವರಿಸಿ 122ರ ತನಕ ಬೆಳೆದರು. 219 ಎಸೆತಗಳ ಈ ಆಟದಲ್ಲಿ 20 ಬೌಂಡರಿ ಸೇರಿತ್ತು. ಈ ರಣಜಿ ಸೀಸನ್‌ನಲ್ಲಿ ಅವರ ರನ್‌ ಗಳಿಕೆ 628ಕ್ಕೆ ಏರಿದೆ. ಸಫ‌ìರಾಜ್‌ ಖಾನ್‌ (937 ರನ್‌) ಬಳಿಕ ಇವರದೇ ಅತ್ಯಧಿಕ ಮೊತ್ತವಾಗಿದೆ.

ಬೌಲಿಂಗ್‌ನಲ್ಲಿ ಮಿಂಚಿದ ಸಾರಾಂಶ್‌ ಜೈನ್‌ ಬ್ಯಾಟಿಂಗ್‌ನಲ್ಲೂ ತಮ್ಮ ಪರಾಕ್ರಮ ಪ್ರದರ್ಶಿಸಿ 57 ರನ್‌ ಬಾರಿಸಿದರು (97 ಎಸೆತ, 7 ಬೌಂಡರಿ). ಇನ್ನಿಂಗ್ಸ್‌ ಮುನ್ನಡೆಯಲ್ಲಿ ಜೈನ್‌ ಪಾತ್ರವೂ ಮಹತ್ವದ್ದಾಗಿತ್ತು.

ಮುಂಬಯಿ ಪರ ಶಮ್ಸ್‌ ಮುಲಾನಿ 5 ವಿಕೆಟ್‌ ಉರುಳಿಸಿದರಾದರೂ ಇದಕ್ಕಾಗಿ 173 ರನ್‌ ಬಿಟ್ಟುಕೊಟ್ಟರು. ತುಷಾರ್‌ ದೇಶಪಾಂಡೆ ಕೂಡ “ಬೌಲಿಂಗ್‌ ಶತಕ’ ದಾಖಲಿಸಿದರು (116ಕ್ಕೆ 3 ವಿಕೆಟ್‌).

ದ್ವಿತೀಯ ಸರದಿಯಲ್ಲಿ ನಾಯಕ ಪೃಥ್ವಿ ಶಾ (44) ಮತ್ತು ಅವರ ಜತೆಗಾರ ಹಾರ್ದಿಕ ತಮೋರೆ (25) ಅವರನ್ನು ಮುಂಬಯಿ ಈಗಾಗಲೇ ಕಳೆದುಕೊಂಡಿದೆ. ಇಬ್ಬರೂ ಬಿರುಸಿನ ಆಟಕ್ಕೆ ಮುಂದಾಗಿದ್ದರು. 10.3 ಓವರ್‌ಗಳಲ್ಲಿ 63 ರನ್‌ ಪೇರಿಸಿದ್ದರು.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ-374 ಮತ್ತು 2 ವಿಕೆಟಿಗೆ 113 (ಶಾ 44, ತಮೋರೆ 25, ಜಾಫ‌ರ್‌ ಬ್ಯಾಟಿಂಗ್‌ 30). ಮಧ್ಯ ಪ್ರದೇಶ-536 (ಯಶ್‌ ದುಬೆ 133, ಪಾಟೀದಾರ್‌ 122, ಶುಭಂ ಶರ್ಮ 116, ಸಾರಾಂಶ್‌ ಜೈನ್‌ 57, ಮುಲಾನಿ 173ಕ್ಕೆ 5, ದೇಶಪಾಂಡೆ 116ಕ್ಕೆ 3, ಅವಸ್ಥಿ 93ಕ್ಕೆ 2).

 

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.