ರಣಜಿ: ಶಿವಮೊಗ್ಗದಲ್ಲಿ ಸಿಹಿ ಸಿಂಚನ


Team Udayavani, Dec 26, 2018, 6:00 AM IST

7.jpg

ಶಿವಮೊಗ್ಗ: ರಣಜಿ ಕ್ರಿಕೆಟ್‌ ನಾಕೌಟ್‌ ಹಂತ ಜೀವಂತವಾಗಿರಿಸಲು ಗೆಲ್ಲಲೇಬೇಕಿದ್ದ ಎಲೈಟ್‌ “ಎ’ ಗುಂಪಿನ ಮಹತ್ವದ ರಣಜಿ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಆತಿಥೇಯ ಕರ್ನಾಟಕ 176 ರನ್‌ ಪ್ರಚಂಡ ಗೆಲುವು ಸಾಧಿಸಿದೆ. 362 ರನ್‌ ಗುರಿ ಪಡೆದಿದ್ದ ರೈಲ್ವೇಸ್‌ ಅಂತಿಮ ದಿನವಾದ ಮಂಗಳವಾರ 185ಕ್ಕೆ ಸರ್ವಪತನ ಕಂಡಿತು. ಸ್ಪಿನ್ನರ್‌ ಕೃಷ್ಣಪ್ಪ ಗೌತಮ್‌ 6 ವಿಕೆಟ್‌ ಉಡಾಯಿಸಿ ಘಾತಕವಾಗಿ ಪರಿಣಮಿಸಿದರು. ಇದು ಪ್ರಸಕ್ತ ಸಾಲಿನ ರಣಜಿ ಕೂಟದಲ್ಲಿ ಕರ್ನಾಟಕಕ್ಕೆ ಒಲಿದ 2ನೇ ಜಯ. ರಾಜ್ಯ ತಂಡ ಒಟ್ಟು 6 ಪಂದ್ಯಗಳನ್ನು ಆಡಿದೆ. 3 ಡ್ರಾ ದಲ್ಲಿ ಅಂತ್ಯಗೊಂಡಿದೆ. ಒಂದರಲ್ಲಿ ಸೋತಿದೆ. ಡಿ. 30ರಿಂದ ಬೆಂಗ ಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕರ್ನಾಟಕ ತಂಡ ಛತ್ತೀಸ್‌ಗಢ ವಿರುದ್ಧ ಆಡಲಿದೆ.

ಗೌತಮ್‌ ಘಾತಕ ದಾಳಿ
ಒಂದು ವಿಕೆಟಿಗೆ 44 ರನ್‌ ಗಳಿಸಿ ದಲ್ಲಿಂದ ಬ್ಯಾಟಿಂಗ್‌ ಮುಂದು ವರಿಸಿದ ರೈಲ್ವೇಸ್‌ಗೆ ಸ್ಪಿನ್ನರ್‌ ಕೆ. ಗೌತಮ್‌ ಸಿಂಹಸ್ವಪ್ನರಾದರು. ಅವರು 30 ರನ್ನಿತ್ತು 6 ವಿಕೆಟ್‌ ಉಡಾಯಿಸಿದರು. ಗೌತಮ್‌ ಮಿಂಚಿನ ದಾಳಿಯೆದುರು ಒಂದೊಂದು ರನ್‌ ತೆಗೆಯಲು ಕೂಡ ರೈಲ್ವೇಸ್‌ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಸಾಗಿದರು.

ಆರಂಭಿಕ ಬ್ಯಾಟ್ಸ್‌ಮನ್‌ ಸೌರಭ್‌ ವಾಲ್ಕರ್‌ (20) ಹಾಗೂ ನಿತಿನ್‌ ಬಿಲ್ಲೆ (16) ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬೃಹತ್‌ ಮೊತ್ತ ಬೆನ್ನಟ್ಟುವ ಜವಾಬ್ದಾರಿ ಹೊತ್ತ ಇವರಿಬ್ಬರು ಭರವಸೆಯಿಂದಲೇ ಬ್ಯಾಟಿಂಗ್‌ ಮುಂದುವರಿಸಿದರು. ತಂಡದ ಮೊತ್ತವನ್ನು 85ರ ತನಕ ವಿಸ್ತರಿಸಿದರು. ಆಗ ಸೌರಭ್‌ ಇಲ್ಲದ ರನ್‌ ಕದಿಯಲು ಹೋಗಿ ಸುಚಿತ್‌ ನಡೆಸಿದ ಅದ್ಭುತ ರನೌಟ್‌ಗೆ ಬಲಿಯಾದರು. ಸೌರಭ್‌ ಗಳಿಕೆ  43 ರನ್‌ (96 ಎಸೆತ, 7 ಬೌಂಡರಿ).

 ತಂಡದ ಮೊತ್ತ 126 ರನ್‌ ಆಗಿದ್ದಾಗ 39 ರನ್‌ ಗಳಿಸಿದ್ದ ನಿತಿನ್‌ ಬಿಲ್ಲೆ (131 ಎಸೆತ, 4 ಬೌಂಡರಿ) ಗೌತಮ್‌ ಎಸೆತದಲ್ಲಿ ಎಲ್‌ಬಿ ಆಗಿ ಹೊರನಡೆದರು. ಇದರಿಂದ ರೈಲ್ವೇಸ್‌ ತೀವ್ರ ಒತ್ತಡಕ್ಕೆ ಸಿಲುಕಿತು. ಈ ಹಂತದಲ್ಲಿ ಪ್ರಥಮ್‌ ಸಿಂಗ್‌ (48 ರನ್‌, 151 ಎಸೆತ, 6 ಬೌಂಡರಿ) ಒಂದಿಷ್ಟು ಹೋರಾಟ ಸಂಘಟಿಸಿದರು. ತಂಡದ ಪರ ಗರಿಷ್ಠ ರನ್‌ ಬಾರಿಸಿದರು. ಇವರ ವಿಕೆಟ್‌ ಕೂಡ ಗೌತಮ್‌ ಪಾಲಾಯಿತು. 

ಈ ವಿಕೆಟ್‌ ಪತನದ ಬಳಿಕ ಗೌತಮ್‌ ದಾಳಿ ಮತ್ತಷ್ಟು ಚುರುಕಾ ಯಿತು. ರೈಲ್ವೇಸ್‌ ವಿಕೆಟ್‌ ಪಟಪಟನೆ ಉರುಳಿತು. ನಾಯಕ ಅರಿಂಧಮ್‌ ಘೋಷ್‌ 24 ರನ್‌ ಗಳಿಸಿ ಅಜೇಯ ರಾಗಿ ಉಳಿದರು. 

ಸಂಕ್ಷಿಪ್ತ ಸ್ಕೋರ್‌ ಕರ್ನಾಟಕ-214 ಮತ್ತು 2 ವಿಕೆಟಿಗೆ 290 ಡಿಕ್ಲೇರ್‌. ರೈಲ್ವೇಸ್‌-143 ಮತ್ತು 185 (ಪ್ರಥಮ್‌ ಸಿಂಗ್‌ 48, ವಕಾಸ್ಕರ್‌ 43, ಭಿಲ್ಲೆ 39, ಕೆ. ಗೌತಮ್‌ 30ಕ್ಕೆ 6, ಶ್ರೇಯಸ್‌ ಗೋಪಾಲ್‌ 39ಕ್ಕೆ 2).

ಮುಂದಿನ ಎದುರಾಳಿ:       ಛತ್ತೀಸ್‌ಗಢ
ಸ್ಥಳ: ಬೆಂಗಳೂರು 
ದಿನಾಂಕ: ಡಿ. 30-ಜ. 2

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.