ರಣಜಿ ಪ್ರಶಸ್ತಿಗೆ ಸೌರಾಷ್ಟ್ರ, ಬಂಗಾಲ ಪೈಪೋಟಿ


Team Udayavani, Mar 9, 2020, 7:45 AM IST

ರಣಜಿ ಪ್ರಶಸ್ತಿಗೆ ಸೌರಾಷ್ಟ್ರ, ಬಂಗಾಲ ಪೈಪೋಟಿ

ರಾಜ್‌ಕೋಟ್‌: ಪ್ರತಿಷ್ಠಿತ ದೇಶಿ ಕ್ರಿಕೆಟ್‌ ಕೂಟವಾದ ರಣಜಿ ಟ್ರೋಫಿ ಪಂದ್ಯಾವಳಿಯ ಫೈನಲ್‌ ಮುಖಾಮುಖೀ ಸೌರಾಷ್ಟ್ರ ಮತ್ತು ಬಂಗಾಲ ನಡುವೆ ಸೋಮವಾರದಿಂದ ರಾಜ್‌ಕೋಟ್‌ನಲ್ಲಿ ಮೊದಲ್ಗೊಳ್ಳಲಿದೆ. ಸತತ 2ನೇ ಫೈನಲ್‌ ಕಾಣುತ್ತಿರುವ ಸೌರಾಷ್ಟ್ರ ತವರಿನಂಗಳದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಇನ್ನೊಂದೆಡೆ ಬಂಗಾಲ 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದೆ. ಅದು 1989-90ರ ಬಳಿಕ ರಣಜಿ ಚಾಂಪಿಯನ್‌ ಆಗಿಲ್ಲ.

ಸೆಮಿಫೈನಲ್‌ನಲ್ಲಿ ಗುಜರಾತ್‌ ವಿರುದ್ಧ ಸೌರಾಷ್ಟ್ರ ಮೇಲುಗೈ ಸಾಧಿಸಿದರೆ, ಬಂಗಾಲ ಪ್ರಬಲ ಕರ್ನಾಟಕ ವನ್ನು ಕೆಡವಿದ ಉತ್ಸಾಹದಲ್ಲಿದೆ. ಎರಡೂ ತಂಡಗಳು ಟೀಮ್‌ ಇಂಡಿಯಾದ ಸದಸ್ಯರ ಸೇರ್ಪಡೆಯಿಂದ ಹೆಚ್ಚು ಬಲಿಷ್ಠವಾಗಿ ಗೋಚರಿಸಿವೆ. ಸೌರಾಷ್ಟ್ರಕ್ಕೆ ಚೇತೇಶ್ವರ್‌ ಪೂಜಾರ, ಬಂಗಾಲಕ್ಕೆ ವೃದ್ಧಿಮಾನ್‌ ಸಾಹಾ ಬಲ ನೀಡಲಿದ್ದಾರೆ.

ಸೌರಾಷ್ಟ್ರ ಕಳೆದ ವರ್ಷ ವಿದರ್ಭ ವಿರುದ್ಧ ಫೈನಲ್‌ನಲ್ಲಿ ಎಡವಿ ಚಾಂಪಿಯನ್‌ ಪಟ್ಟದಿಂದ ದೂರಾಗಿತ್ತು. ಈ ಬಾರಿ ತವರಿನಲ್ಲೇ ಆಡುವುದರಿಂದ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ನಾಯಕ ಹಾಗೂ ಪ್ರಧಾನ ವೇಗಿ ಜೈದೇವ್‌ ಉನಾದ್ಕತ್‌ ಪ್ರಚಂಡ ಫಾರ್ಮ್ನಲ್ಲಿರುವುದು ಈ ನಿರೀಕ್ಷೆಗೆ ಇನ್ನೊಂದು ಮುಖ್ಯ ಕಾರಣ. ಈ ಋತುವಿನಲ್ಲಿ ಅವರು ಈಗಾಗಲೇ 12.17ರ ಸರಾಸರಿಯಲ್ಲಿ 65 ವಿಕೆಟ್‌ ಉಡಾಯಿಸಿದ್ದಾರೆ. ಬಿಹಾರದ ಅಶುತೋಷ್‌ ಅಮಾನ್‌ ಅವರ ಸಾರ್ವಕಾಲಿಕ ರಣಜಿ ದಾಖಲೆ ಯಿಂದ ಕೇವಲ 3 ವಿಕೆಟ್‌ಗಳ ಹಿನ್ನಡೆಯಲ್ಲಿದ್ದಾರೆ. ಕೇವಲ ಬೌಲಿಂಗ್‌ನಲ್ಲಷ್ಟೇ ಅಲ್ಲ, ನಾಯಕತ್ವದಲ್ಲೂ ಉನಾದ್ಕತ್‌ ಪ್ರಬುದ್ಧ ನಿರ್ವಹಣೆ ತೋರುತ್ತ ಬಂದಿದ್ದಾರೆ.

ಶೆಲ್ಡನ್‌ ಜಾಕ್ಸನ್‌ ಸೌರಾಷ್ಟ್ರ ತಂಡದ ಮತ್ತೋರ್ವ ಪ್ರಮುಖ ಬ್ಯಾಟ್ಸ್‌ಮನ್‌. ಸೆಮಿಫೈನಲ್‌ನಲ್ಲಿ ಜಾಕ್ಸನ್‌ ಜಬರ್ದಸ್ತ್ ಪ್ರದರ್ಶನ ನೀಡಿದ್ದರು.

ಬಂಗಾಲ ಸಮತೋಲಿತ ತಂಡ
ಬಂಗಾಲ ಕೂಡ ಸಮತೋಲಿತ ಹಾಗೂ ತಾರಾ ಆಟಗಾರರನ್ನು ಒಳಗೊಂಡ ತಂಡವಾಗಿದೆ. ಬ್ಯಾಟಿಂಗ್‌ನಲ್ಲಿ ಅನುಸ್ತೂಪ್‌ ಮಜುಮಾªರ್‌, ಸುದೀಪ್‌ ಚಟರ್ಜಿ, ಅರ್ನಾಬ್‌ ನಂದಿ, ನಾಯಕ ಅಭಿಮನ್ಯು ಈಶ್ವರನ್‌ ಅಪಾಯಕಾರಿ ಯಾಗಬಲ್ಲರು. 10 ಪಂದ್ಯಗಳಿಂದ 672 ರನ್‌ ಪೇರಿಸಿರುವ ಅನುಭವಿ ಮನೋಜ್‌ ತಿವಾರಿ ಸೌರಾಷ್ಟ್ರ ಮೇಲೆ ಸವಾರಿ ಮಾಡಿದರೆ ಅಚ್ಚರಿ ಇಲ್ಲ.
ಬಂಗಾಲದ ಬೌಲಿಂಗ್‌, ಅದರಲ್ಲೂ ಪೇಸ್‌ ವಿಭಾಗ ಹೆಚ್ಚು ಘಾತಕವಾಗಿದೆ.

ಟಾಪ್ ನ್ಯೂಸ್

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.