ರಣಜಿ: 183ಕ್ಕೆ ಕುಸಿದ ಕರ್ನಾಟಕ
Team Udayavani, Oct 25, 2017, 7:45 AM IST
ಶಿವಮೊಗ್ಗ: ಕೆ.ಎಲ್. ರಾಹುಲ್, ಕರುಣ್ ನಾಯರ್ ಮೊದಲಾದ ಸ್ಟಾರ್ ಆಟಗಾರರು ತಂಡಕ್ಕೆ ಮರಳಿದರೂ ಹೈದರಾಬಾದ್ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಕರ್ನಾಟಕ 183 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್ ಆಗಿದೆ. ಜವಾಬು ನೀಡಲಾರಂಭಿಸಿದ ಹೈದರಾಬಾದ್ 51 ರನ್ನಿಗೆ 3 ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ ಮೊದಲ ದಿನದಾಟ 13 ವಿಕೆಟ್ ಪತನಕ್ಕೆ ಸಾಕ್ಷಿಯಾಯಿತು.
ಶಿವಮೊಗ್ಗದ “ಕೆಎಸ್ಸಿಎ ನವುಲೆ ಸ್ಟೇಡಿಯಂ’ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಕರ್ನಾಟಕದ ನಿರ್ಧಾರ ಯಾವುದೇ ರೀತಿಯಲ್ಲಿ ಫಲ ಕೊಡಲಿಲ್ಲ. ಸೋಮವಾರವಷ್ಟೇ ಟೀಮ್ ಇಂಡಿಯಾಕ್ಕೆ ಕರೆ ಪಡೆದ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಎಂ. ರವಿಕಿರಣ್ ಸೇರಿಕೊಂಡು ರಾಜ್ಯದ ಬ್ಯಾಟಿಂಗ್ ಸರದಿಯ ಮೇಲೆ ಘಾತಕವಾಗಿ ಎರಗಿದರು. ಸಿರಾಜ್ 42 ರನ್ನಿಗೆ 4 ವಿಕೆಟ್ ಕಿತ್ತು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರೆ, ರವಿಕಿರಣ್ 36 ರನ್ ವೆಚ್ಚದಲ್ಲಿ 3 ವಿಕೆಟ್ ಉರುಳಿಸಿದರು. ಟೀಮ್ ಇಂಡಿಯಾದಿಂದ ಬೇರ್ಪಟ್ಟಿರುವ ಪ್ರಗ್ಯಾನ್ ಓಜಾ 31 ರನ್ನಿಗೆ 2 ವಿಕೆಟ್ ಕಿತ್ತರು. ಉಳಿದೊಂದು ವಿಕೆಟ್ ಆಶಿಷ್ ರೆಡ್ಡಿ ಪಾಲಾಯಿತು.
6ನೇ ಕ್ರಮಾಂಕದಲ್ಲಿ ಆಡಲಿಳಿದ ಸ್ಟುವರ್ಟ್ ಬಿನ್ನಿ 61 ರನ್ ಬಾರಿಸಿ ಹೋರಾಟವೊಂದನ್ನು ನಡೆಸಿದ್ದು ಕರ್ನಾಟಕ ಸರದಿಯ ಗಮನ ಸೆಳೆಯುವ ಸಾಧನೆ ಎನಿಸಿಕೊಂಡಿತು. 88 ಎಸೆತ ಎದುರಿಸಿದ ಬಿನ್ನಿ 8 ಬೌಂಡರಿ ಬಾರಿಸಿದರು. ಬಿನ್ನಿ ಹೊರತುಪಡಿಸಿದರೆ 23 ರನ್ ಮಾಡಿದ ಕರುಣ್ ನಾಯರ್ ಅವರದೇ ಹೆಚ್ಚಿನ ಗಳಿಕೆ. ಅಸ್ಸಾಂ ವಿರುದ್ಧ ಶತಕ ಬಾರಿಸಿದ್ದ ಆರ್. ಸಮರ್ಥ್, ಅಭಿಮನ್ಯು ಮಿಥುನ್ ತಲಾ 19 ರನ್ ಮಾಡಿದರು.
ರಾಹುಲ್ 27 ಎಸೆತ ಎದುರಿಸಿ ಕೇವಲ 4 ರನ್ ಮಾಡಲಷ್ಟೇ ಶಕ್ತರಾದರು. ಮಾಯಾಂಕ್ ಅಗರ್ವಾಲ್ ಖಾತೆಯನ್ನೇ ತೆರೆಯಲಿಲ್ಲ. ಸಿ.ಎಂ. ಗೌತಮ್ 9, ಶ್ರೇಯಸ್ ಗೋಪಾಲ್ 3, ವಿನಯ್ ಕುಮಾರ್ 7 ರನ್ ಮಾಡಿ ನಿರ್ಗಮಿಸಿದರು.
ರಾಜ್ಯದ ಬೌಲರ್ಗಳು ಹೈದರಾಬಾದ್ ಮೇಲೆ ತಿರುಗಿ ಬೀಳುವ ಸೂಚನೆಯೊಂದನ್ನು ನೀಡಿದ್ದಾರೆ. ಆರಂಭಿಕರಾದ ತನ್ಮಯ್ ಅಗರ್ವಾಲ್ (1), ಅಕ್ಷತ್ ರೆಡ್ಡಿ (13) ಮತ್ತು ನಾಯಕ ಅಂಬಾಟಿ ರಾಯುಡು (0) ಅಗ್ಗಕ್ಕೆ ಉರುಳಿದ್ದಾರೆ. ಅಸ್ಸಾಂ ವಿರುದ್ಧ ಮಿಂಚಿದ್ದ ಸ್ಪಿನ್ನರ್ ಕೆ. ಗೌತಮ್ 2 ವಿಕೆಟ್ ಹಾರಿಸಿದರು. ಅಗರ್ವಾಲ್ ರನೌಟಾದರು. ಕೀಪರ್ ಕೆ. ಸುಮಂತ್ 34 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬುಧವಾರದ ಆಟ ಇತ್ತಂಡಗಳ ಪಾಲಿಗೆ ನಿರ್ಣಾಯಕ.
ಸಿರಾಜ್ ಮಾರಕ ದಾಳಿ
ಕರ್ನಾಟಕಕ್ಕೆ ಆರ್. ಸಮರ್ಥ್ ಮತ್ತು ಕೆ.ಎಲ್. ರಾಹುಲ್ ತೀವ್ರ ಎಚ್ಚರಿಕೆಯ ಆರಂಭ ಒದಗಿಸಿದ್ದರು. ಮೊದಲ 10 ಓವರ್ಗಳಲ್ಲಿ ಇವರು ಕ್ರೀಸಿಗೆ ಅಂಟಿಕೊಂಡು ಇನ್ನಿಂಗ್ಸ್ ಬೆಳೆಸುವ ಸೂಚನೆ ರವಾನಿಸಿದರು. ಆದರೆ ಪಂದ್ಯದ 11ನೇ ಓವರಿನ 4ನೇ ಎಸೆತದಲ್ಲಿ ಸಮರ್ಥ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದ ಸಿರಾಜ್ ಹೈದರಾಬಾದ್ಗೆ ಮೊದಲ ಯಶಸ್ಸು ತಂದಿತ್ತರು. ಅದೇ ಓವರಿನ ಅಂತಿಮ ಎಸೆತದಲ್ಲಿ ಅಗರ್ವಾಲ್ ವಿಕೆಟನ್ನೂ ಉರುಳಿಸಿದರು. 26 ರನ್ನಿಗೆ ಕರ್ನಾಟಕದ 2 ವಿಕೆಟ್ ಬಿತ್ತು. ಈ ಕುಸಿತದಿಂದ ರಾಜ್ಯ ತಂಡ ಚೇತರಿಸಿಕೊಳ್ಳಲೇ ಇಲ್ಲ.
ಸಂಕ್ಷಿಪ್ತ ಸ್ಕೋರ್: ಕರ್ನಾಟಕ-183 (ಬಿನ್ನಿ 61, ನಾಯರ್ 23, ಸಮರ್ಥ್ 19, ಮಿಥುನ್ 19, ಸಿರಾಜ್ 42ಕ್ಕೆ 4, ರವಿಕಿರಣ್ 36ಕ್ಕೆ 3, ಓಜಾ 31ಕ್ಕೆ 2). ಹೈದರಾಬಾದ್-3 ವಿಕೆಟಿಗೆ 51 (ಸುಮಂತ್ ಬ್ಯಾಟಿಂಗ್ 34, ಶ್ರೇಯಸ್ ಗೋಪಾಲ್ 22ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ