ರಣಜಿ: ಕರ್ನಾಟಕ-ಗುಜರಾತ್‌ ಪಂದ್ಯ ಡ್ರಾ


Team Udayavani, Dec 18, 2018, 6:00 AM IST

vinaya-kar.jpg

ಸೂರತ್‌: ಪ್ರಸಕ್ತ ರಣಜಿ ಕ್ರಿಕೆಟ್‌ ಕೂಟದ ಕರ್ನಾಟಕ-ಗುಜರಾತ್‌ ನಡುವಿನ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ. ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ರಾಜ್ಯ ತಂಡ 3 ಅಂಕ, ಆತಿಥೇಯ ಗುಜರಾತ್‌ 1 ಅಂಕ ಪಡೆದುಕೊಂಡಿತು.

ರಾಜ್ಯಕ್ಕೆ ಒಟ್ಟಾರೆ 3ನೇ ಡ್ರಾ. ಡ್ರಾಗೊಂಡ 3 ಪಂದ್ಯಗಳಲ್ಲೂ ವಿನಯ್‌ ಪಡೆ ಮೊದಲ ಇನಿಂಗ್ಸ್‌ ಮುನ್ನಡೆ ಅಂಕ ಸಂಪಾದಿಸಿಕೊಂಡಿದೆ. ಮಹಾರಾಷ್ಟ್ರ ವಿರುದ್ಧ ಗೆಲುವು, ಸೌರಾಷ್ಟ್ರ ವಿರುದ್ಧ ಸೋಲು ಅನುಭವಿಸಿತ್ತು. ಮುಂದೆ ಶಿವಮೊಗ್ಗದಲ್ಲಿ ಡಿ.22ರಿಂದ ಆರಂಭವಾಗುವ ಪಂದ್ಯದಲ್ಲಿ ರೈಲ್ವೇಸ್‌ ಸವಾಲನ್ನು ಕರ್ನಾಟಕ ಎದುರಿಸಲಿದೆ.

ರಾಜ್ಯಕ್ಕೆ 173 ರನ್‌ ಗುರಿ: ಗುಜರಾತ್‌ 2ನೇ ಇನಿಂಗ್ಸ್‌ನಲ್ಲಿ 345 ರನ್‌ಗಳಿಸಿ ಆಲೌಟಾಯಿತು. 2ನೇ ಇನಿಂಗ್ಸ್‌ನಲ್ಲಿ ರಾಜ್ಯದ ಗೆಲುವಿಗೆ ಒಟ್ಟು 173 ರನ್‌ ಗುರಿ ಸಿಕ್ಕಿತ್ತು. ಇದನ್ನು ಬೆನ್ನಟ್ಟಿದ ರಾಜ್ಯಕ್ಕೆ ಆರಂಭಿಕ ಬ್ಯಾಟ್ಸ್‌ಮೆನ್‌ ಮಾಯಾಂಕ್‌ ಅಗರ್ವಾಲ್‌ (53 ರನ್‌) ಅರ್ಧಶತಕ ಸಿಡಿಸಿ ನೆರವಾಗಿದ್ದು ತಂಡದ ಪರ ದಾಖಲಾದ ವೈಯಕ್ತಿಕ ಶ್ರೇಷ್ಠ ರನ್‌. 2ನೇ ವಿಕೆಟ್‌ಗೆ ಬಂದ ಆರ್‌.ಸಮರ್ಥ್ (33 ರನ್‌) ಸ್ವಲ್ಪ ಗಮನ ಸೆಳೆದರು. ಇವರಿಬ್ಬರೂ ವಿಕೆಟ್‌ ಕಳೆದುಕೊಂಡ ಬಳಿಕ ರಾಜ್ಯದ ರನ್‌ ವೇಗ ಕುಸಿಯಿತು. ಒಟ್ಟಾರೆ 107 ರನ್‌ಗಳಿಸುವಷ್ಟರಲ್ಲಿ ರಾಜ್ಯ ತಂಡದ ಪ್ರಮುಖ 4 ವಿಕೆಟ್‌ ಪತನಗೊಂಡಿದ್ದವು. ದೇವದತ್‌ ಪಡೀಕ್ಕಲ್‌ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರೆ ಶ್ರೇಯಸ್‌ ಗೋಪಾಲ್‌ ಕೇವಲ 3 ರನ್‌ಗೆ ಪೆವಿಲಿಯನ್‌ಗೆ ನಡೆದರು. ಕೊನೆಯ ಹಂತದಲ್ಲಿ ರಾಜ್ಯ ಆಟಗಾರರಿಗೆ ಬ್ಯಾಟಿಂಗ್‌ನಲ್ಲಿ ಜಾದೂ ಮಾಡಲು ಸಾಧ್ಯವಾಗಲಿಲ್ಲ. ಗುಜರಾತ್‌ ಪರ ಅಕ್ಷರ್‌ ಪಟೇಲ್‌ (45ಕ್ಕೆ3) ವಿಕೆಟ್‌ ಕಬಳಿಸಿ ರಾಜ್ಯದ ಓಟಕ್ಕೆ ಬ್ರೇಕ್‌ ಹಾಕಿದರು. ಕೆ.ವಿ.ಸಿದ್ಧಾರ್ಥ್ (10 ರನ್‌) ಹಾಗೂ ಡಿ.ನಿಶ್ಚಲ್‌ (1 ರನ್‌) ಅಜೇಯರಾಗಿ ಉಳಿದರು.

ಶತಕ ವಂಚಿತ ಮನ್‌ಪ್ರೀತ್‌, ರುಜುಲ್‌: ಇದಕ್ಕೂ ಮೊದಲು ಅಂತಿಮ ದಿನ 2ನೇ ಇನಿಂಗ್ಸ್‌ 3 ವಿಕೆಟ್‌ಗೆ 187 ರನ್‌ನಿಂದ ಬ್ಯಾಟಿಂಗ್‌ ಮುಂದುವರಿಸಿದ ಗುಜರಾತ್‌ ತೀವ್ರ ಆಘಾತ ಅನುಭವಿಸಿತು. 3ನೇ ದಿನ ಅಜೇಯ 82 ರನ್‌ಗಳಿಸಿ ಕ್ರೀಸ್‌ನಲ್ಲಿದ್ದ ರುಜುಲ್‌ ಭಾನುವಾರದ ರನ್‌ಗೆ ಕೇವಲ 9 ರನ್‌ಗಳಿಸಿ ಔಟಾದರು. 9 ರನ್‌ಗಳಿಂದ ಶತಕವನ್ನೂ ತಪ್ಪಿಸಿಕೊಂಡರು. ಆಗ ತಂಡದ ಮೊತ್ತ 4 ವಿಕೆಟ್‌ಗೆ 214 ರನ್‌ ಆಗಿತ್ತು. ಅಂತಿಮ ದಿನ ಮನ್‌ಪ್ರೀತ್‌ ಜುನೇಜ (98 ರನ್‌) ಹಾಗೂ ಧ್ರುವ್‌ ರಾವಲ್‌ (30 ರನ್‌) ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ ಮನ್‌ಪ್ರೀತ್‌ 98 ರನ್‌ಗಳಿಸಿದ್ದಾಗ ಗೌತಮ್‌ ಎಸೆತದಲ್ಲಿ ಬೌಲ್ಡ್‌ ಆದರು. 2 ರನ್‌ ಅಂತರದಿಂದ ಶತಕ ತಪ್ಪಿಸಿಕೊಂಡು ನಿರಾಸೆ ಅನುಭವಿಸಿದರು. ಗುಜರಾತ್‌ ಪರ ಅಂತಿಮ ದಿನ ಎರಡು ಶತಕಗಳು ಕೈತಪ್ಪಿದ್ದು ಹೈಲೈಟ್ಸ್‌.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.