ರಣಜಿ ಕ್ವಾರ್ಟರ್‌ ಫೈನಲ್‌: ಕರ್ನಾಟಕಕ್ಕೆ ರಾಜಸ್ಥಾನ ಸವಾಲು


Team Udayavani, Jan 15, 2019, 12:55 AM IST

karnataka-manish-pandey-ranji-trophy.jpg

ಬೆಂಗಳೂರು: ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ಮಂಗಳವಾರದಿಂದ ಆತಿಥೇಯ ಕರ್ನಾಟಕ-ರಾಜಸ್ಥಾನ ತಂಡಗಳ ನಡುವೆ ರಣಜಿ ಕ್ವಾರ್ಟರ್‌ ಫೈನಲ್‌ ಹಣಾಹಣಿ ಆರಂಭವಾಗಲಿದೆ. ಪ್ರಬಲ ಪೈಪೋಟಿ ನೀಡಲು ಎರಡೂ ತಂಡಗಳು ಸಜ್ಜಾಗಿದ್ದು, ಅಭಿಮಾನಿಗಳ ಕುತೂಹಲ ಗರಿಗೆದರಿದೆ.

ಒಂದು ಕಡೆ ಲೀಗ್‌ನಲ್ಲಿ ಕಷ್ಟಪಟ್ಟು ಕ್ವಾರ್ಟರ್‌ ಫೈನಲ್‌ ತನಕ ಸಾಗಿ ಬಂದಿರುವ ರಾಜ್ಯ ತಂಡ, ಇನ್ನೊಂದು ಕಡೆ ಲೀಗ್‌ನಲ್ಲಿ ಅಜೇಯ ಎನಿಸಿಕೊಂಡಿರುವ ರಾಜಸ್ಥಾನ. ಮೇಲ್ನೋಟಕ್ಕೆ ಎರಡೂ ತಂಡಗಳು ಪ್ರಬಲವಾಗಿದೆ. ರಾಜಸ್ಥಾನ ಸ್ವಲ್ಪ ಹೆಚ್ಚು ಬಲಿಷ್ಠ ಅನ್ನುವುದು ಹಿಂದಿನ ಪಂದ್ಯಗಳ ಫ‌ಲಿತಾಂಶಗಳಿಂದ ತಿಳಿಯುತ್ತದೆ. ಲೀಗ್‌ನಲ್ಲಿ ರಾಜಸ್ಥಾನ ಒಟ್ಟು 9 ಪಂದ್ಯ ಆಡಿದೆ. 7 ಪಂದ್ಯದಲ್ಲಿ ಗೆಲುವು ಗಳಿಸಿದೆ. 2 ಪಂದ್ಯ ಡ್ರಾ ಆಗಿದೆ. ಸೋಲನ್ನೇ ಕಾಣದೆ “ಸಿ’ ಗುಂಪಿನ ಅಗ್ರಸ್ಥಾನಿಯಾಗಿ ರಾಜಸ್ಥಾನ ಕ್ವಾರ್ಟರ್‌ಫೈನಲ್‌ ತನಕ ಬಂದಿದೆ. ಹೀಗಾಗಿ ರಾಜ್ಯಕ್ಕೆ ಕಠಿನ ಸವಾಲು ಎದುರಾಗಬಹುದು. ಕರ್ನಾಟಕ “ಎ’ ಗುಂಪಿನ 3ನೇ ಸ್ಥಾನಿಯಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಲೀಗ್‌ನಲ್ಲಿ ಒಟ್ಟು 8 ಪಂದ್ಯ ಆಡಿದ್ದ ರಾಜ್ಯ ತಂಡ 3 ಜಯ, 2 ಸೋಲು ಹಾಗೂ ಮೂರನ್ನು ಡ್ರಾ ಮಾಡಿಕೊಂಡಿತ್ತು.

ಮಾಯಾಂಕ್‌ ಅನುಪಸ್ಥಿತಿ
ಮಾಯಾಂಕ್‌ ಅಗರ್ವಾಲ್‌ ಗಾಯದ ಕಾರಣದಿಂದಾಗಿ ಈ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಇದು ರಾಜ್ಯ ತಂಡಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ. ಆದರೆ ಆಲ್‌ರೌಂಡರ್‌ ಕೆ. ಗೌತಮ್‌ ವಾಪಸ್‌ ಆಗಿದ್ದಾರೆ. ಪ್ರಚಂಡ ಫಾರ್ಮ್ನಲ್ಲಿರುವ  ಕೆ.ವಿ. ಸಿದ್ಧಾರ್ಥ್ (651 ರನ್‌) ತವರಿನಂಗಳದಲ್ಲಿ ಮಿಂಚುವ ವಿಶ್ವಾಸವಿದೆ. 6 ಪಂದ್ಯಗಳಿಂದ 29 ವಿಕೆಟ್‌ ಕಬಳಿಸಿರುವ ರೋನಿತ್‌ ಮೋರೆ ತಂಡದ ತಾರಾ ಬೌಲರ್‌ ಆಗಿದ್ದಾರೆ.

ಬಿಷ್ಟಾ, ಅಂಕಿತ್‌ ಅಪಾಯಕಾರಿ
ರಾಜಸ್ಥಾನ ಬ್ಯಾಟ್ಸ್‌ಮನ್‌ ರಾಬಿನ್‌ ಬಿಷ್ಟಾ ರಾಜ್ಯ ಬೌಲರ್‌ಗಳಿಗೆ ಅಪಾಯಕಾರಿಯಾಗಿ ಗೋಚರಿಸುವ ಸಾಧ್ಯತೆ ಇದೆ. 9 ಪಂದ್ಯಗಳಿಂದ ಗರಿಷ್ಠ 684 ರನ್‌ ಬಾರಿಸಿದ ಹೆಗ್ಗಳಿಕೆ ಬಿಷ್ಟಾ ಅವರದು. ಅಂಕಿತ್‌ ಚೌಧರಿ 8 ಪಂದ್ಯಗಳಿಂದ 47 ವಿಕೆಟ್‌ ಕಬಳಿಸಿದ್ದಾರೆ. ಅಂಕಿತ್‌ ಬಗ್ಗೆ ಕರ್ನಾಟಕ ಬ್ಯಾಟ್ಸ್‌ಮನ್‌ಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಕರ್ನಾಟಕ ತಂಡ:
ಮನೀಷ್‌ ಪಾಂಡೆ (ನಾಯಕ), ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ಆರ್‌. ವಿನಯ್‌ ಕುಮಾರ್‌, ಡಿ. ನಿಶ್ಚಲ್‌, ಕರುಣ್‌ ನಾಯರ್‌, ಆರ್‌. ಸಮರ್ಥ್, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಕೆ. ಗೌತಮ್‌, ಪ್ರಸಿದ್ಧ್ ಎಂ. ಕೃಷ್ಣ, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್‌,  ಬಿ.ಆರ್‌. ಶರತ್‌, ಶರತ್‌ ಶ್ರೀನಿವಾಸ್‌, ಪವನ್‌ ದೇಶಪಾಂಡೆ.

ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್ಸ್‌
1. ವಿದರ್ಭ-ಉತ್ತರಖಂಡ (ನಾಗಪುರ)
2. ಸೌರಾಷ್ಟ್ರ-ಉತ್ತರಪ್ರದೇಶ (ಲಕ್ನೊ)
3. ಕರ್ನಾಟಕ-ರಾಜಸ್ಥಾನ (ಬೆಂಗಳೂರು)
4. ಕೇರಳ-ಗುಜರಾತ್‌ (ವಯನಾಡ್‌)

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.