ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ


Team Udayavani, Apr 23, 2021, 12:44 AM IST

ಪಡಿಕ್ಕಲ್‌ ಸೆಂಚುರಿ: ಆರ್‌ಸಿಬಿ 4ನೇ ಜಯಭೇರಿ

ಮುಂಬಯಿ: ಎಡಗೈ ಆಟಗಾರ ದೇವದತ್ತ ಪಡಿಕ್ಕಲ್‌ ಅವರ ಅತ್ಯಾಕರ್ಷಕ ಸೆಂಚುರಿ, ಅವರು ನಾಯಕ ವಿರಾಟ್‌ ಕೊಹ್ಲಿ ಜತೆ ನಡೆಸಿದ ಅಜೇಯ ಜತೆಯಾಟದ ಸಾಹಸದಿಂದ ರಾಯಲ್‌ ಚಾಲೆಂಜರ್ ಬೆಂಗಳೂರು ತನ್ನ 200ನೇ ಐಪಿಎಲ್‌ ಪಂದ್ಯದಲ್ಲಿ ಭರ್ಜರಿ ಜಯಭೇರಿ ಮೊಳಗಿಸಿದೆ. ಗುರುವಾರದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಪ್ರಸಕ್ತ ಐಪಿಎಲ್‌ನ ಎಲ್ಲ 4 ಪಂದ್ಯಗಳನ್ನು ಗೆದ್ದು ಮೆರೆದಾಡಿದೆ.

“ವಾಂಖೇಡೆ’ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ಆರಂಭಿಕ ಕುಸಿತಕ್ಕೆ ಸಿಲುಕಿಯೂ ಚೇತರಿಸಿಕೊಂಡು  9 ವಿಕೆಟಿಗೆ 177 ರನ್‌ ಗಳಿಸಿತು.

ಆರ್‌ಸಿಬಿ ಕೇವಲ 16.3 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 181 ರನ್‌ ಬಾರಿಸಿತು. ಆಗ ಪಡಿಕ್ಕಲ್‌ 101 ರನ್‌ ಮಾಡಿ ಅಜೇಯರಾಗಿದ್ದರು. ಇದು ಪಡಿಕ್ಕಲ್‌ ಅವರ ಮೊದಲ ಐಪಿಎಲ್‌ ಸೆಂಚುರಿ. ಕೇವಲ 52 ಎಸೆತ ಎದುರಿಸಿದ ಅವರು 11 ಬೌಂಡರಿ, 6 ಸಿಕ್ಸರ್‌ ಸಿಡಿಸಿದರು. ಕೊಹ್ಲಿ 47 ಎಸೆತ ಎದುರಿಸಿ 72 ರನ್‌ ಹೊಡೆದರು. ಸಿಡಿಸಿದ್ದು 6 ಫೋರ್‌ ಹಾಗೂ 3 ಸಿಕ್ಸರ್‌.

ಪಡಿಕ್ಕಲ್‌-ಕೊಹ್ಲಿ ಮೊದಲ ವಿಕೆಟಿಗೆ ಅತ್ಯಧಿಕ ರನ್‌ ಬಾರಿಸಿದ ಆರ್‌ಸಿಬಿ ಜೋಡಿ ಎನಿಸಿತು. ಹಾಗೆಯೇ ಪಡಿಕ್ಕಲ್‌ ಐಪಿಎಲ್‌ನಲ್ಲಿ ಶತಕ ಬಾರಿಸಿದ ಭಾರತದ 3ನೇ “ಅನ್‌ ಕ್ಯಾಪ್ಡ್’ ಆಟಗಾರನೆನಿಸಿದರು. ಉಳಿದಿಬ್ಬರೆಂದರೆ ಮನೀಷ್‌ ಪಾಂಡೆ ಮತ್ತು ಪಾಲ್‌ ವಲ್ತಾಟಿ.

ರಾಜಸ್ಥಾನ್‌ ಕುಸಿತ :

ಆರ್‌ಸಿಬಿಯ ಮಾಜಿ ಆಟಗಾರ ದುಬೆ ಸರ್ವಾಧಿಕ 46 ರನ್‌ ಹೊಡೆದರೆ (32 ಎಸೆತ, 5 ಬೌಂಡರಿ, 2 ಸಿಕ್ಸರ್‌), ತೇವಟಿಯಾ 23 ಎಸೆತಗಳಿಂದ 40 ರನ್‌ ಬಾರಿಸಿದರು (4 ಫೋರ್‌, 2 ಸಿಕ್ಸರ್‌).  ಮೊಹಮ್ಮದ್‌ ಸಿರಾಜ್‌ ಅವರ ಮೊದಲ ಓವರ್‌ನಲ್ಲೇ ಸತತ ಬೌಂಡರಿ ಬಾರಿಸಿದ ಜಾಸ್‌ ಬಟ್ಲರ್‌ ರಾಜಸ್ಥಾನ್‌ಗೆ

ಭರ್ಜರಿ ಆರಂಭ ನೀಡುವ ಸೂಚನೆಯಿತ್ತರು. ಆದರೆ ಸಿರಾಜ್‌ ಮುಂದಿನ  ಓವರ್‌ನಲ್ಲೇ ಸೇಡು ತೀರಿಸಿ ಕೊಂಡರು. ಬಿಗ್‌ ಹಿಟ್ಟರ್‌ ಬಟ್ಲರ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಆರ್‌ಸಿಬಿಗೆ ದೊಡ್ಡದೊಂದು ಯಶಸ್ಸು ತಂದಿತ್ತರು. ಬಟ್ಲರ್‌ ಅವರ ಬ್ಯಾಟಿಂಗ್‌ ಈ ಎರಡು ಬೌಂಡರಿಗಳಿಗಷ್ಟೇ ಸೀಮಿತಗೊಂಡಿತು.

ಮುಂದಿನ ಓವರ್‌ನಲ್ಲಿ ಜಾಮೀಸನ್‌ ಮತ್ತೋರ್ವ ಆರಂಭಕಾರ ಮನನ್‌ ವೋಹ್ರಾ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಕೇವಲ 7 ರನ್‌ ಮಾಡಿದ ವೋಹ್ರಾ ಮತ್ತೂಮ್ಮೆ ಬ್ಯಾಟಿಂಗ್‌ ವೈಫ‌ಲ್ಯವನ್ನು ತೆರೆದಿರಿಸಿದರು. 16 ರನ್‌ ಆಗುವಷ್ಟರಲ್ಲಿ ರಾಜಸ್ಥಾನ್‌ ಆರಂಭಿಕರಿಬ್ಬರ ವಿಕೆಟ್‌ ಉರುಳಿ ಹೋಯಿತು.

ಸಿರಾಜ್‌ ಅವರ ಮುಂದಿನ ಬಿಗ್‌ ವಿಕೆಟ್‌ ಅಪಾಯಕಾರಿ ಡೇವಿಡ್‌ ಮಿಲ್ಲರ್‌ ಅವರದಾಗಿತ್ತು. ಖಾತೆ ತೆರೆಯುವ ಮೊದಲೇ ಮಿಲ್ಲರ್‌ ಲೆಗ್‌ ಬಿಫೋರ್‌ ಬಲೆಗೆ ಬಿದ್ದರು. ಡಿಆರ್‌ಎಸ್‌ ಮೂಲಕ ಈ ತೀರ್ಪು ಆರ್‌ಸಿಬಿ ಪರವಾಗಿ ಬಂತು. 18 ರನ್‌ ಆಗುವಷ್ಟರಲ್ಲಿ ರಾಜಸ್ಥಾನ್‌ ತಂಡದ 3 ವಿಕೆಟ್‌ ಬಿತ್ತು. ಪವರ್‌ ಪ್ಲೇ ಮುಕ್ತಾಯಕ್ಕೆ  ಈ ಸ್ಕೋರ್‌ 32ಕ್ಕೆ ಏರಿತ್ತು.

ಈ ನಡುವೆ ನಾಯಕ ಸಂಜು ಸ್ಯಾಮ್ಸನ್‌ ಮುನ್ನುಗ್ಗಿ ಬೀಸುವ ಸೂಚನೆಯಿತ್ತರು. ವಾಷಿಂಗ್ಟನ್‌ಗೆ ಸಿಕ್ಸರ್‌ ರುಚಿಯನ್ನೂ ತೋರಿಸಿದರು. ಆದರೆ ಕ್ರೀಸ್‌ ಆಕ್ರಮಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದೇ ಎಸೆತದ ಅಂತರದಲ್ಲಿ ಮ್ಯಾಕ್ಸ್‌ವೆಲ್‌ಗೆ ಕ್ಯಾಚ್‌ ನೀಡಿ ವಾಪಸಾದರು. 43 ರನ್ನಿಗೆ 4 ವಿಕೆಟ್‌ ಬಿತ್ತು. ಶಿವಂ ದುಬೆ-ರಿಯಾನ್‌ ಪರಾಗ್‌ 5ನೇ ವಿಕೆಟಿಗೆ ಜತೆಗೂಡಿದ ಬಳಿಕ ರಾಜಸ್ಥಾನ್‌ ಚೇತರಿಕೆ ಕಾಣ ತೊಡಗಿತು.

 

ಆರ್‌ಸಿಬಿ ಮ್ಯಾಚ್‌ ನಂ. 200 :

 

ಗುರುವಾರ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆಡಲಿಳಿಯುವ ಮೂಲಕ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ವಿಶಿಷ್ಟ ಸಾಧನೆಗೆ ಪಾತ್ರವಾಯಿತು. ಇದು ಆರ್‌ಸಿಬಿಯ 200ನೇ ಐಪಿಎಲ್‌ ಪಂದ್ಯವಾಗಿದೆ. ಐಪಿಎಲ್‌ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ ಕೇವಲ ಎರಡನೇ ತಂಡವೆಂಬುದು ಆರ್‌ಸಿಬಿ ಹೆಗ್ಗಳಿಕೆ. ಮುಂಬೈ ಇಂಡಿಯನ್ಸ್‌ 207 ಪಂದ್ಯಗಳನ್ನಾಡಿ ಅಗ್ರಸ್ಥಾನ ಅಲಂಕರಿಸಿದೆ.

ಈ ವರೆಗಿನ 199 ಪಂದ್ಯಗಳಲ್ಲಿ ಆರ್‌ಸಿಬಿ 92 ಜಯ ಸಾಧಿಸಿದ್ದು, ಭರ್ತಿ 100 ಪಂದ್ಯಗಳಲ್ಲಿ ಸೋಲನುಭವಿಸಿದೆ. 2 ಟೈ ಪಂದ್ಯಗಳನ್ನು ಸೂಪರ್‌ ಓವರ್‌ಗಳಲ್ಲಿ ಜಯಿಸಿದ್ದು, ಒಂದನ್ನು ಸೋತಿದೆ. 4 ಪಂದ್ಯಗಳು ಯಾವುದೇ ಫ‌ಲಿತಾಂಶ ದಾಖಲಿಸಿಲ್ಲ.

 

 

ರಾಜಸ್ಥಾನ್‌ ರಾಯಲ್ಸ್‌ :

ಜಾಸ್‌ ಬಟ್ಲರ್‌  ಬಿ ಸಿರಾಜ್‌        8

ವೋಹ್ರಾ ಸಿ ರಿಚರ್ಡ್‌ಸನ್‌ ಬಿ ಜಾಮೀಸನ್‌         7

ಸಂಜು ಸ್ಯಾಮ್ಸನ್‌ ಸಿ ಮ್ಯಾಕ್ಸ್‌ವೆಲ್‌ ಬಿ ಸುಂದರ್‌ 21

ಡೇವಿಡ್‌ ಮಿಲ್ಲರ್‌         ಎಲ್‌ಬಿಡಬ್ಲ್ಯು ಬಿ ಸಿರಾಜ್‌        0

ಶಿವಂ ದುಬೆ ಸಿ ಮ್ಯಾಕ್ಸ್‌ವೆಲ್‌ ಬಿ ರಿಚರ್ಡ್‌ಸನ್‌   46

ರಿಯಾನ್‌ ಪರಾಗ್‌         ಸಿ ಚಹಲ್‌ ಬಿ ಹರ್ಷಲ್‌ 25

ರಾಹುಲ್‌ ತೇವಟಿಯಾ ಸಿ ಅಹ್ಮದ್‌ ಬಿ ಸಿರಾಜ್‌    40

ಕ್ರಿಸ್‌ ಮಾರಿಸ್‌  ಸಿ ಚಹಲ್‌ ಬಿ ಹರ್ಷಲ್‌ 10

ಶ್ರೇಯಸ್‌ ಗೋಪಾಲ್‌ ಔಟಾಗದೆ 7

ಚೇತನ್‌ ಸಕಾರಿಯಾ     ಸಿ ಎಬಿಡಿ ಬಿ ಹರ್ಷಲ್‌  0

ಮುಸ್ತಫಿಜುರ್‌  ಔಟಾಗದೆ         0

ಇತರ               13

ಒಟ್ಟು(9 ವಿಕೆಟಿಗೆ)                    177

ವಿಕೆಟ್‌ ಪತನ:1-14, 2-16, 3-18, 4-43, 5-109, 6-133, 7-170, 8-170.

ಬೌಲಿಂಗ್‌

ಮೊಹಮ್ಮದ್‌ ಸಿರಾಜ್‌   4-0-27-3

ಕೈಲ್‌ ಜಾಮೀಸನ್‌                    4-0-28-1

ಕೇನ್‌ ರಿಚರ್ಡ್‌ಸನ್‌                  3-0-29-1

ಯಜುವೇಂದ್ರ ಚಹಲ್‌  2-0-18-0

ವಾಷಿಂಗ್ಟನ್‌ ಸುಂದರ್‌ 3-0-23-1

ಹರ್ಷಲ್‌ ಪಟೇಲ್‌                    4-0-47-3

ರಾಯಲ್‌ ಚಾಲೆಂಜರ್ ಬೆಂಗಳೂರು

ವಿರಾಟ್‌ ಕೊಹ್ಲಿ            ಅಜೇಯ          72

ದೇವದತ್ತ ಪಡಿಕ್ಕಲ್‌      ಅಜೇಯ          101

ಇತರ               8

ಒಟ್ಟು (16.3 ಓವರ್‌ಗಳಲ್ಲಿ ನೋಲಸ್‌)  181

ಬೌಲಿಂಗ್‌;

ಶ್ರೇಯಸ್‌ ಗೋಪಾಲ್‌   3-0-35-0

ಚೇತನ್‌ ಸಕಾರಿಯಾ                 4-0-35-0

ಕ್ರಿಸ್‌ ಮಾರಿಸ್‌              3-0-38-0

ಮುಸ್ತಫಿಜುರ್‌ ರೆಹಮಾನ್‌        3.3-0-34-0

ರಾಹುಲ್‌ ತೇವಟಿಯಾ  2-0-23-0

ರಿಯಾನ್‌ ಪರಾಗ್‌                     1-0-14-0

ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.