ಹಸರಂಗ ಮಾರಕ; RCBಗೆ ಭರ್ಜರಿ ಗೆಲುವು, ಬ್ಯಾಟಿಂಗ್‌ ನಲ್ಲಿ ಮಿಂಚಿದ ಡುಪ್ಲೆಸಿಕ್ಸ್‌

ಹೈದರಾಬಾದ್‌ ವಿರುದ್ಧ 67 ರನ್‌ ಗಳ ಗೆಲುವು

Team Udayavani, May 8, 2022, 10:13 PM IST

ಹಸರಂಗ ಮಾರಕ; RCBಗೆ ಭರ್ಜರಿ ಗೆಲುವು, ಬ್ಯಾಟಿಂಗ್‌ ನಲ್ಲಿ ಮಿಂಚಿದ ಡುಪ್ಲೆಸಿಕ್ಸ್‌

ಮುಂಬೈ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 67 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ. ಬ್ಯಾಟಿಂಗ್‌ನಲ್ಲಿ ನಾಯಕ ಪ್ಲೆಸಿಸ್‌, ರಜತ್‌ ಪಾಟಿದಾರ್‌, ಮಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌ ಮಿಂಚಿದರೆ ಬೌಲಿಂಗ್‌ನಲ್ಲಿ ವನಿಂದು ಹಸರಂಗ ಮತ್ತು ಹ್ಯಾಝೆಲ್‌ವುಡ್‌ ಗಮನಾರ್ಹ ನಿರ್ವಹಣೆ ತೋರಿ ತಂಡದ ಬೃಹತ್‌ ಅಂತರದ ಗೆಲುವಿಗೆ ಕಾರಣರಾದರು.

ಈ ಗೆಲುವಿನಿಂದ ಆರ್‌ಸಿಬಿ ತಾನಾಡಿದ 12 ಪಂದ್ಯಗಳಿಂದ ಏಳರಲ್ಲಿ ಜಯ ಗಳಿಸಿ 14 ಅಂಕಗಳೊಂದಿಗೆ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಸೋಲನ್ನು ಕಂಡ ಹೈದರಾಬಾದ್‌ ತಂಡದ ಪ್ಲೇ ಆಫ್ಗೆ ತೇರ್ಗಡೆಯಾಗುವ ಸಾಧ್ಯತೆ ಸ್ವಲ್ಪಮಟ್ಟಿಗೆ ಕಠಿಣವಾಗಿದೆ.

ಆರ್‌ಸಿಬಿಯಂತೆ ಹೈದರಾಬಾದ್‌ ತಂಡವು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ವಿಕೆಟನ್ನು ಕಳೆದುಕೊಂಡಿತ್ತು. ನಾಯಕ ಕೇನ್‌ ವಿಲಿಯಮ್ಸನ್‌ ರನೌಟಾದರು. ಆದೇ ಓವರಿನ ಐದನೇ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ ಆರಂಭಿಕ ಅಭಿಷೇಕ್‌ ಶರ್ಮ ಅವರ ವಿಕೆಟನ್ನು ಹಾರಿಸಿದರು. ಅವರಿಬ್ಬರು ಶೂನ್ಯಕ್ಕೆ ಔಟಾಗಿದ್ದರಿಂದ ಹೈದರಾಬಾದ್‌ ಸಂಕಷ್ಟಕ್ಕೆ ಬಿತ್ತು.

ರಾಹುಲ್‌ ತ್ರಿಪಾಠಿ ಮತ್ತು ಐಡೆನ್‌ ಮಾರ್ಕ್‌ರಮ್‌ ನಿಧಾನಗತಿಯಲ್ಲಿ ಆಡಿ ತಂಡವನ್ನು ಸಂಕಷ್ಟದಿಂದ ಮೇಲಕ್ಕೆತ್ತುವ ಪ್ರಯತ್ನ ನಡೆಸಿದರು. ಮೂರನೇ ವಿಕೆಟಿಗೆ 50 ರನ್‌ ಪೇರಿಸಿದರು. ಈ ಹಂತದಲ್ಲಿ ಮಾರ್ಕ್‌ರಮ್‌ ಭಾರೀ ಎಸೆತಕ್ಕೆ ಮುಂದಾಗಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಬಿಗ್‌ ಹಿಟ್ಟರ್‌ ನಿಕೋಲಾಸ್‌ ಪೂರಣ್‌ ಇಲ್ಲಿ ಮಿಂಚಲಿಲ್ಲ. ಇನ್ನುಳಿದ ಆಟಗಾರರು ಕುಸಿದ ಕಾರಣ ತಂಡ 19.2 ಓವರ್‌ಗಳಲ್ಲಿ 125 ರನ್ನಿಗೆ ಆಲೌಟಾಯಿತು. ಏಕಾಂಗಿ ಹೋರಾಟ ನೀಡಿದ ತ್ರಿಪಾಠಿ 37 ಎಸೆತಗಳಿಂದ 58 ರನ್‌ ಹೊಡೆದರು. ತ್ರಿಪಾಠಿ ಔಟಾದ ಬೆನ್ನಿಗೆ ತಂಡ ಇನ್ನೂ ಮೂರು ವಿಕೆಟ್‌ ಕಳೆದುಕೊಂಡು ಶೋಚನೀಯ ಸ್ಥಿತಿಗೆ ತಲುಪಿತು.

ಮಾರಕ ದಾಳಿ ಸಂಘಟಿಸಿದ ವನಿಂದು ಹಸರಂಗ ತನ್ನ 4 ಓವರ್‌ಗಳ ದಾಳಿಯಲ್ಲಿ ಒಂದು ಮೇಡನ್‌ ಸಹಿತ 18 ರನ್ನಿಗೆ 5 ವಿಕೆಟ್‌ ಕಿತ್ತು ಗಮನ ಸೆಳೆದರು. ಜೋಶ್‌ ಹ್ಯಾಝೆಲ್‌ವುಡ್‌ ಕೇವಲ 17 ರನ್‌ ನೀಡಿ 2 ವಿಕೆಟ್‌ ಪಡೆದರು.


ಅನುಭವಿ ವಿರಾಟ ಕೊಹ್ಲಿ ಮತ್ತೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿಯೇ ಅವರು ಸುಚಿತ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಫಾ ಡು ಪ್ಲೆಸಿಸ್‌ ಮತ್ತು ರಜತ್‌ ಪಾಟಿದಾರ್‌ ಅವರ ಶತಕದ ಜತೆಯಾಟದಿಂದಾಗಿ ಆರ್‌ಸಿಬಿ ಚೇತರಿಸಿಕೊಂಡಿತು. ಹೈದರಾಬಾದ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರಿಬ್ಬರು ಆಕರ್ಷಕವಾಗಿ ಆಡಿ ರಂಜಿಸಿದರು.

ಪ್ಲೆಸಿಸ್‌ ಮತ್ತು ಪಾಟಿದಾರ್‌ 73 ಎಸೆತ ಎದುರಿಸಿ ಎರಡನೇ ವಿಕೆಟಿಗೆ 105 ರನ್‌ ಪೇರಿಸಿದರು. ಈ ಹಂತದಲ್ಲಿ 48 ರನ್‌ ಗಳಿಸಿದ ಪಾಟಿದಾರ್‌ ಮತ್ತೆ ಸುಚಿತ್‌ಗೆ ಬಲಿಯಾದರು. ಪಾಟಿದಾರ್‌ 38 ಎಸೆತ ಎದುರಿಸಿದ್ದು 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು. ಪ್ಲೆಸಿಸ್‌ ಆಬಳಿಕ ಮ್ಯಾಕ್ಸ್‌ವೆಲ್‌ ಜತೆ ಇನ್ನೊಂದು ಉತ್ತಮ ಜತೆಯಾಟ ನಡೆಸಿದರು. ಮೂರನೇ ವಿಕೆಟಿಗೆ ಅವರಿಬ್ಬರು 54 ರನ್‌ ಪೇರಿಸಿದರು. ಮ್ಯಾಕ್ಸ್‌ವೆಲ್‌ 24 ಎಸೆತಗಳಿಂದ 33 ರನ್‌ ಹೊಡೆದರು.

ಕೊನೆ ಹಂತದಲ್ಲಿ ಪ್ಲೆಸಿಸ್‌ ಮತ್ತು ದಿನೇಶ್‌ ಕಾರ್ತಿಕ್‌ ಸ್ಫೋಟಕವಾಗಿ ಆಡಿದ್ದರಿಂದ ತಂಡದ ಮೊತ್ತ 190ರ ಗಡಿ ದಾಟುವಂತಾಯಿತು. ಫಾರೂಕಿ ಎಸೆದ ಅಂತಿಮ ಓವರಿನಲ್ಲಿ ಮೂರು ಸಿಕ್ಸರ್‌ ಮತ್ತು ಒಂದು ಬೌಂಡರಿ ಬಾರಿಸಿದ್ದ ದಿನೇಶ್‌ ಕಾರ್ತಿಕ್‌ ಕೇವಲ 8 ಎಸೆತಗಳಿಂದ 1 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 30 ರನ್‌ ಗಳಿಸಿದರು.

ಇನ್ನಿಂಗ್ಸ್‌ ಪೂರ್ತಿ ಆಡಿದ ನಾಯಕ ಪ್ಲೆಸಿಸ್‌ ಒಟ್ಟಾರೆ 50 ಎಸೆತ ಎದುರಿಸಿ 73 ರನ್‌ ಗಳಿಸಿ ಅಜೇಯರಾಗಿ ಉಳಿದರು. 8 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು. ಇದು ಅವರ ಮೂರನೇ ಅರ್ಧಶತಕವಾಗಿದೆ.

ಸ್ಕೋರುಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು – 20 ಓವರ್‌, 192/3 (ಡುಪ್ಲೆಸಿಸ್‌ 73, ರಜತ್‌ ಪಾಟಿದಾರ್‌ 48, ಜಗದೀಶ್‌ ಸುಚಿತ್‌ 30/2)
ಸನ್‌ರೈಸರ್ ಹೈದರಾಬಾದ್‌  - 125/10 19.2 ಓವ ರ್‌.  (ರಾಹುಲ್‌ ತ್ರಿಪಾಠಿ 58, ಮಾರ್ಕ್‌ರಮ್‌ 21. ಹಸ ರಂಗ 18/5)
ಪಂದ್ಯಶ್ರೇಷ್ಠ: ವನಿಂದು ಹಸರಂಗ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.