ಫ‌ುಟ್‌ಬಾಲ್‌ ತಂಡಗಳ ಮ್ಯಾನೇಜರ್‌ಗಳಿಗೂ ರೆಡ್‌ಕಾರ್ಡ್‌!


Team Udayavani, Aug 2, 2018, 12:10 PM IST

red-card.jpg

ಲಂಡನ್‌: ಮೈದಾನದಲ್ಲಿ ದುರ್ವರ್ತನೆ ತೋರುವ ಆಟಗಾರರಿಗೆ ರೆಡ್‌ ಕಾರ್ಡ್‌ ನೀಡುವುದನ್ನು ಕಂಡಿದ್ದೇವೆ. ಇನ್ನು ಮುಂದೆ, ಮೈದಾನದ ಅಂಚಿನಲ್ಲಿ ನಿಂತು ಆಟಗಾರರಿಗಿಂತಲೂ ಕೆಟ್ಟದಾಗಿ ವರ್ತಿಸುವ ತಂಡಗಳ ಮ್ಯಾನೇಜರ್‌ಗಳನ್ನೂ ದಂಡಿಸಲು ಫ‌ುಟ್‌ಬಾಲ್‌ ಒಕ್ಕೂಟ ತೀರ್ಮಾನಿಸಿದೆ. ಇನ್ನು ಮುಂದೆ ಪ್ರೀಮಿಯರ್‌ ಲೀಗ್‌ ಹೊರತುಪಡಿಸಿ ಇಂಗ್ಲೆಂಡ್‌ನ‌ ವೃತ್ತಿಪರ ಫ‌ುಟ್‌ಬಾಲ್‌ ಪಂದ್ಯಾವಳಿಗಳಲ್ಲಿ ರೆಫ್ರಿಗಳು ತಂಡಗಳ ಕೋಚಿಂಗ್‌ ಸಿಬಂದಿಗೂ ಹಳದಿ ಹಾಗೂ ಕೆಂಪು ಕಾರ್ಡ್‌ ಪ್ರದರ್ಶಿಸಲು ಅವಕಾಶವಿರಲಿದೆ. ಮ್ಯಾನೇಜರ್‌ಗಳಿಗೆ ವಾಗ್ಧಂಡನೆ ವಿಧಿಸುವ ಪ್ರಸ್ತಾವವೂ ಇದೆ. ಆಟಗಾರರಂತೆ, ಇವರಿಗೂ ಪಂದ್ಯಗಳ ನಿಷೇಧವನ್ನೂ ಹೇರಲಾಗುತ್ತದೆ. 

ಎಲ್ಲವೂ ಉತ್ತಮ ನಡತೆಗಾಗಿ
ಪ್ರೀಮಿಯರ್‌ ಲೀಗ್‌ನ ಕೆಳಗೆ ಮೂರು ಹಂತಗಳ ಪಂದ್ಯಗಳನ್ನು ಆಯೋಜಿಸುವ ಇಂಗ್ಲಿಷ್‌ ಫ‌ುಟ್‌ಬಾಲ್‌ ಲೀಗ್‌ನ ಮುಖ್ಯ ಕಾರ್ಯ ನಿರ್ವಾಹಕ ಶಾನ್‌ ಹಾರ್ವೆ, “ಡಗ್‌ಔಟ್‌ ಅಥವಾ ತಾಂತ್ರಿಕ ವಲಯದಲ್ಲಿ ನಡತೆಯ ನಿಯಮಗಳೇನೂ ಹೊಸತಲ್ಲ. ಅಭಿಮಾನಿಗಳಿಗೆ ಶಿಸ್ತಿನ ವಿಧಾನಗಳನ್ನು ಸ್ಪಷ್ಟಪಡಿಸುವುದು ಹಾಗೂ ಮೈದಾನದಲ್ಲಿ ಉತ್ತಮ ನಡತೆಯನ್ನು ಉದ್ದೀಪಿಸುವುದು ನಮ್ಮ ಉದ್ದೇಶ. ತಂಡದ ಸಿಬಂದಿ ದುರ್ವರ್ತನೆ ತೋರಿದಾಗ ರೆಡ್‌ ಕಾರ್ಡ್‌ ತೋರಿಸಬಹುದು. ಅಗತ್ಯಬಿದ್ದರೆ ತಂಡದ ಎಲ್ಲ ಸಿಬಂದಿಗೂ ಎಚ್ಚರಿಕೆ ನೀಡುವ ಅಧಿಕಾರ ರೆಫ್ರಿಗಳಿಗಿರುತ್ತದೆ…’ ಎಂದು ಹೇಳಿದರು.

ಹೀಗಿದೆ ಹೊಸ ನಿಯಮ…
ಪಂದ್ಯದ ಅಧಿಕಾರಿಗಳ ನಿರ್ಧಾರಗಳನ್ನು ಪ್ರಭಾವಿಸಬಲ್ಲ ಅಸಂಬದ್ಧ ಭಾಷೆ ಹಾಗೂ ಸನ್ನೆಗಳಿಗೆ ಮೊದಲ ಹಂತದ ಎಚ್ಚರಿಕೆ ನೀಡಲಾಗುವುದು. ನೀರಿನ ಬಾಟಲಿಗಳನ್ನು ಎಸೆಯುವುದು, ಒದೆಯುವುದು, ಬಟ್ಟೆ ಎಸೆಯುವುದು, ಕಿರಿಕಿರಿ ಹುಟ್ಟಿಸುವಂತೆ ಚಪ್ಪಾಳೆ ತಟ್ಟುವುದು ಅಥವಾ ಫ‌ಲಕಗಳನ್ನು ಪ್ರದರ್ಶಿಸುವುದೂ ದಂಡನೆಗೆ ಅರ್ಹ ವಾಗಿರುತ್ತವೆ. ಇಂತಹ 4 ಎಚ್ಚರಿಕೆಗಳನ್ನು ಸ್ವೀಕರಿಸುವ ಸಿಬಂದಿ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಲಿದ್ದಾರೆ. 8 ಎಚ್ಚರಿಕೆಗಳಿಗೆ ಎರಡು, 12 ಎಚ್ಚರಿಕೆಗಳಿಗೆ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. 16 ಎಚ್ಚರಿಕೆಗಳನ್ನು ಸ್ವೀಕರಿಸಿದರೆ ದುರ್ನಡತೆಯ ಆರೋಪ ಹೊರಿಸಲಾಗುತ್ತದೆ. ಆಟಗಾರರಿಗೆ ನಿರ್ದಿಷ್ಟ ಪಂದ್ಯಗಳ ಬಳಿಕ ಕಾರ್ಡ್‌ಗಳನ್ನು ಕಳೆಯಲಾಗುತ್ತದೆ. ಆದರೆ, ಕೋಚಿಂಗ್‌ ಸಿಬಂದಿಗೆ ನೀಡಿದ ಎಚ್ಚರಿಕೆ ವಾಪಸ್‌ ಪಡೆಯುವುದಿಲ್ಲ.

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.