ಜೈಪುರಕ್ಕೆ ಗೌತಮ್ಪುರವೆಂದು ಹೆಸರಿಡಿ: ಕನ್ನಡಿಗನಿಗೆ ಟ್ವೀಟರ್ ಪರಾಕ್
Team Udayavani, Apr 24, 2018, 6:50 AM IST
ಮುಂಬಯಿ: ಮುಂಬೈ ವಿರುದ್ಧ ರವಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದ ಕೊನೆಯ 3 ಓವರ್ಗಳಲ್ಲಿ 11 ಎಸೆತಕ್ಕೆ 33 ರನ್ ಚಚ್ಚಿದ ಕರ್ನಾಟಕದ ಆಲ್ರೌಂಡರ್ ಕೆ.ಗೌತಮ್ ಈಗ ಟ್ವೀಟರ್ನಲ್ಲಿ ಜನಪ್ರಿಯ ತಾರೆ.
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆಡುತ್ತಿರುವ ಅವರು ಕೊನೆ ಹಂತದಲ್ಲಿ ತಮ್ಮ ತಂಡಕ್ಕೆ ಅಮೋಘ ಗೆಲುವನ್ನು ತಂದುಕೊಟ್ಟರು. ಇದೇ ಸಂತಸದಲ್ಲಿ ಅಭಿಮಾನಿಗಳೀಗ ಗೌತಮ್ರನ್ನು ಕೊಂಡಾಡುತ್ತಿದ್ದಾರೆ. ಓರ್ವ ಅಭಿಮಾನಿಯಂತೂ ಒಂದು ದಿನದ ಮಟ್ಟಿಗೆ ಜೈಪುರ ನಗರದ ಹೆಸರನ್ನು ಗೌತಮ್ ಪುರ ಎಂದು ಬದಲಿಸಿ ಎಂಬ ಸಲಹೆಯನ್ನೇ ನೀಡಿದ್ದಾರೆ! ಅಷ್ಟು ಮಾತ್ರವಲ್ಲ ರಾಜಸ್ಥಾನ್ ನಾಯಕ ಅಜಿಂಕ್ಯ ರಹಾನೆ ಕೂಡ ಗೌತಮ್ ಬಗ್ಗೆ ಖುಷಿಯಾಗಿದ್ದಾರೆ.