ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ರೇಸ್‌: ಪಂತ್‌ಗಿಂತ ಮುಂದಿದ್ದಾರೆ ಅನುಭವಿ ಸಾಹಾ!


Team Udayavani, Dec 15, 2020, 9:15 AM IST

ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ರೇಸ್‌: ಪಂತ್‌ಗಿಂತ ಮುಂದಿದ್ದಾರೆ ಅನುಭವಿ ಸಾಹಾ!

ಅಡಿಲೇಡ್‌: ಭಾರತ- ಆಸೀಸ್ ನಡುವಿನ ಅಡಿಲೇಡ್‌ ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕೆ ಇನ್ನು ಎರಡೇ ದಿನ. ಎರಡೂ ತಂಡಗಳು ತಮ್ಮ ಹನ್ನೊಂದರ ಕಾಂಬಿನೇಶನ್‌ ಕುರಿತು ದೊಡ್ಡ ಮಟ್ಟದಲ್ಲೇ ಯೋಜನೆ ರೂಪಿಸುತ್ತಿವೆ. ಯಾರನ್ನು ಆಡಿಸುವುದು, ಯಾರನ್ನು ಬಿಡುವುದು ಎಂಬ ಲೆಕ್ಕಾಚಾರ ಜೋರಾಗಿಯೇ ಸಾಗುತ್ತಿದೆ. ಪ್ರವಾಸಿ ಭಾರತದ ವಿಷಯದತ್ತ ಬಂದಾಗ ಮುಖ್ಯವಾಗಿ ಎರಡು ಅಂಶಗಳನ್ನು ಬಗೆಹರಿಸಿ ಕೊಳ್ಳಬೇಕಿದೆ. ಓಪನಿಂಗ್‌ ಜೋಡಿ ಯಾವುದು ಹಾಗೂ ವಿಕೆಟ್‌ ಕೀಪರ್‌ ಯಾರು ಎಂಬುದನ್ನು ಇತ್ಯರ್ಥಗೊಳಿಸುವುದು ಸವಾಲಾಗಿ ಪರಿಣಮಿಸಿದೆ. ಈ ಎರಡೂ ಸಂಗತಿ ತಂಡದ ಆಡಳಿತ ಮಂಡಳಿಯ ತಲೆ ಕೊರೆಯುತ್ತಿದೆ.

ಪಂತ್‌ ಅಸ್ಥಿರ ಪ್ರದರ್ಶನ
ವಿಕೆಟ್‌ ಕೀಪಿಂಗ್‌ ಆಯ್ಕೆಯಲ್ಲಿ ಮೊನ್ನೆ ಮೊನ್ನೆಯ ತನಕ ಟೀಮ್‌ ಇಂಡಿಯಾದಲ್ಲಿ ಯಾವುದೇ ಗೊಂದಲ ಇರಲಿಲ್ಲ. ಆದರೆ ಯಾವಾಗ ರಿಷಭ್‌ ಪಂತ್‌ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದರೋ, ಸಮಸ್ಯೆಯೊಂದು ಉದ್ಭವಿಸಿತು! ಸಾಹಾ-ಪಂತ್‌ ನಡುವೆ ಪೈಪೋಟಿ ತೀವ್ರಗೊಂಡಿತು.

ರಿಷಭ್‌ ಪಂತ್‌ ಇಲ್ಲಿಯ ತನಕ ಅಸ್ಥಿರ ಪ್ರದರ್ಶನ ನೀಡುತ್ತ ಬಂದ ಕ್ರಿಕೆಟಿಗ. ಬಹುಶಃ ಅವರಿಗೆ ಲಭಿಸಿದಷ್ಟು ಅವಕಾಶ ಇತ್ತೀಚೆಗೆ ಭಾರತ ತಂಡದಲ್ಲಿ ಬೇರೆ ಯಾರಿಗೂ ಸಿಕ್ಕಿಲ್ಲ. ಆದರೆ ಪಂತ್‌ ಇವನ್ನೆಲ್ಲ ಕೈಚೆಲ್ಲಿದ್ದೇ ಹೆಚ್ಚು. ಬೇಜವಾಬ್ದಾರಿಯುತ ಬ್ಯಾಟಿಂಗ್‌ ಹಾಗೂ ಸಾಮಾನ್ಯ ಮಟ್ಟದ ಕೀಪಿಂಗ್‌ ಪಂತ್‌ ಪಾಲಿನ ಮೈನಸ್‌ ಪಾಯಿಂಟ್ಸ್‌. ಹೀಗಿರುವಾಗ ಅಭ್ಯಾಸ ಪಂದ್ಯದಲ್ಲಿ ಸೆಂಚುರಿಯೊಂದನ್ನು ಬಾರಿಸಿ ದೊಡನೆಯೇ ಅವರು ಟೆಸ್ಟ್‌ ತಂಡಕ್ಕೆ ಫಿಟ್‌ ಆಗಬಲ್ಲರೇ ಎಂಬುದೊಂದು ಪ್ರಶ್ನೆ.

rishabh pant vs wriddhiman saha

ಕ್ಯಾಪ್ಟನ್‌ ಕೊಹ್ಲಿ, ಕೋಚ್‌ ರವಿಶಾಸ್ತ್ರೀ, ಸಹಾಯಕ ಕೋಚ್‌ ವಿಕ್ರಮ್‌ ರಾಠೊಡ್‌, ಭರತ್‌ ಅರುಣ್‌, ಆಯ್ಕೆ ಮಂಡಳಿ ಸದಸ್ಯ ಹರ್ವಿಂದರ್‌ ಸಿಂಗ್‌ ಅವರೆಲ್ಲ ಪಂತ್‌ ಮತ್ತು ಸಾಹಾ ಆಟವನ್ನು ಬಹಳ ಹತ್ತಿರದಲ್ಲಿ ಕುಳಿತು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಇವರ ಪ್ರಕಾರ ಟೆಸ್ಟ್‌ ಆಯ್ಕೆ ರೇಸ್‌ನಲ್ಲಿ ಸಾಹಾ ಅವರೇ ಮುಂದಿದ್ದಾರೆ. ಯಾವುದೇ ರ್ಯಾಶ್‌ ಶಾಟ್‌ಗೆ ಮುಂದಾಗದೆ ನಿಂತು ಆಡುವುದು, ಕೀಪಿಂಗ್‌ ಕೌಶಲದಲ್ಲೂ ಬಹಳ ಮುಂದಿರುವುದು ಸಾಹಾ ಪಾಲಿನ ಪ್ಲಸ್‌ ಪಾಯಿಂಟ್‌ ಎಂಬುದಾಗಿ ತೀರ್ಮಾನಿಸಿದ್ದಾರೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತೀವ್ರ ಸಂಕಟದಲ್ಲಿದ್ದಾಗ ಸಾಹಾ ಜವಾಬ್ದಾರಿಯುತ ಆಟದ ಮೂಲಕ 54 ರನ್‌ ಹೊಡೆದು ತಂಡವನ್ನು ರಕ್ಷಿಸಿದ್ದರು. ಆಗ ಪ್ಯಾಟಿನ್ಸನ್‌, ನೆಸರ್‌, ಗ್ರೀನ್‌ ಮೊದಲಾದವರ ಘಾತಕ ಎಸೆತಗಳನ್ನು ನಿಭಾಯಿಸಿ ನಿಂತಿದ್ದರು. ದ್ವಿತೀಯ ಪಂದ್ಯದಲ್ಲಿ ಪಂತ್‌ ಆಡುವಾಗ ಭಾರತ ಆತಂಕದಲ್ಲೇನೂ ಇರಲಿಲ್ಲ. ಆಗ ಲೆಗ್‌ ಸ್ಪಿನ್ನರ್‌ ಸ್ವೆಪ್ಸನ್‌, ಪಾರ್ಟ್‌ಟೈಮ್‌ ಬೌಲರ್‌ ಮ್ಯಾಡಿನ್ಸನ್‌ ಬೌಲಿಂಗ್‌ ನಡೆಸುತ್ತಿದ್ದರು. ಪಂತ್‌ಗೂ ಮುನ್ನ ಗಿಲ್‌, ಅಗರ್ವಾಲ್‌, ವಿಹಾರಿ ಸೇರಿಕೊಂಡು ಭಾರತವನ್ನು ಮೇಲೆತ್ತಿ ನಿಲ್ಲಿಸಿದ್ದರು.

ಇದನ್ನೂ ಓದಿ:ತೆರೆ ಮೇಲೆ ಬರಲಿದೆ ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಬಯೋಪಿಕ್

ಮೊದಲು ಕೀಪಿಂಗ್‌…
ಸಂಜಯ್‌ ಮಾಂಜ್ರೇಕರ್‌, ಅಲನ್‌ ಬೋರ್ಡರ್‌ ಮೊದಲಾದವರು ಹೇಳಿದಂತೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪಿಂಗ್‌ ಕೌಶಲಕ್ಕೇ ಮೊದಲು ಪ್ರಾಧಾನ್ಯ ನೀಡಬೇಕು. ಬ್ಯಾಟಿಂಗ್‌ ಏನಿದ್ದರೂ ಅನಂತರ. ಆಗ 23ರ ಪಂತ್‌ಗಿಂತ 37 ಟೆಸ್ಟ್‌ಗಳ ಅನುಭವಿ, 92 ಕ್ಯಾಚ್‌ ಹಾಗೂ 11 ಸ್ಟಂಪಿಂಗ್‌ ಮಾಡಿರುವ 36 ವರ್ಷದ ಸಾಹಾ ಆಯ್ಕೆಗೆ ಮೊದಲ ಪ್ರಾಶಸ್ತ್ಯ ಲಭಿಸುವ ಸಾಧ್ಯತೆಯೇ ಹೆಚ್ಚು.

ಸೆಂಚುರಿ ಆತ್ಮವಿಶ್ವಾಸ ತುಂಬಿದೆ: ಪಂತ್‌
ಅಭ್ಯಾಸ ಪಂದ್ಯದಲ್ಲಿ ಬಾರಿಸಿದ ಶತಕ ಎನ್ನುವುದು ಅಡಿಲೇಡ್‌ ಟೆಸ್ಟ್‌ ಪಂದ್ಯಕ್ಕೂ ಮೊದಲು ತನ್ನಲ್ಲಿ ಹೊಸ ಆತ್ಮವಿಶ್ವಾಸ  ತುಂಬಿದೆ ಎಂಬುದಾಗಿ ವಿಕೆಟ್‌ ಕೀಪಿಂಗ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಹೇಳಿದ್ದಾರೆ. ಕಳೆದ ಐಪಿಎಲ್‌ನಲ್ಲಿ ತೀವ್ರ ರನ್‌ ಬರಗಾಲದಲ್ಲಿದ್ದ ತನಗೆ ಇದೊಂದು “ಎನರ್ಜಿ ಬೂಸ್ಟ್‌’ ಆಗಿದೆ ಎಂದರು.

“ನಾನು ಬ್ಯಾಟಿಂಗಿಗೆ ಇಳಿದಾಗ ಸಾಕಷ್ಟು ಓವರ್‌ ಬಾಕಿ ಉಳಿದಿದ್ದವು. ಹೀಗಾಗಿ ನಾನು ಮತ್ತು ಹನುಮ ವಿಹಾರಿ ಸೇರಿಕೊಂಡು ಉತ್ತಮ ಜತೆಯಾಟ ನಿಭಾಯಿಸುವ ಯೋಜನೆ ಹಾಕಿಕೊಂಡೆವು. ಮೊದಲು ವಿಹಾರಿಗೆ ಬೆಂಬಲ ನೀಡತೊಡಗಿದೆ, ಬಳಿಕ ಸಹಜ ಆಟಕ್ಕೆ ಕುದುರಿದೆ. ಸೆಂಚುರಿಯಿಂದ ಆತ್ಮವಿಶ್ವಾಸ ಹೆಚ್ಚಿತು. ಕಳೆದೊಂದು ತಿಂಗಳಿಂದ ಆಸ್ಟ್ರೇಲಿಯದಲ್ಲಿದ್ದರೂ ನನಗೆ ಹೆಚ್ಚಿನ ಬ್ಯಾಟಿಂಗ್‌ ಅವಕಾಶ ಸಿಕ್ಕಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ದುರದೃಷ್ಟವಶಾತ್‌ ಲೆಗ್‌ ಬಿಫೋರ್‌ ಆದೆ. ಆದರೆ ಅದು ನಾಟೌಟ್‌ ಆಗಿತ್ತು’ ಎಂಬುದಾಗಿ 23 ವರ್ಷದ ಎಡಗೈ ಆಟಗಾರ ಹೇಳಿದರು.

ಟಾಪ್ ನ್ಯೂಸ್

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.