ಮುಂಬೈ ಪೊಲೀಸ್ಗೆ ಧನ್ಯವಾದ ಹೇಳಿದ ರೋಹಿತ್ ಶರ್ಮಾ
Team Udayavani, Apr 13, 2020, 6:26 PM IST
ಮುಂಬೈ: ಭಾರತ ತಂಡದ ಉಪನಾಯಕ ರೋಹಿತ್ ಶರ್ಮ ಲಾಕ್ ಡೌನ್ ಸಮಯದಲ್ಲಿ ಮುಂಬೈ ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ.
ಮುಂಬೈನ ಎಲ್ಲ ಸ್ಥಳಗಳಲ್ಲೂ ಸಮಯದ ಪರಿವೇ ಇಲ್ಲದೆ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ. ನಾವೆಲ್ಲ ಮನೆಯೊಳಗೇ ಇದ್ದು ಪೊಲೀಸರ ಕೆಲಸದಲ್ಲಿ ನೆರವಾಗೋಣ’ ಎಂದು ಟ್ವಿಟ್ಟರ್ನಲ್ಲಿ ರೋಹಿತ್ ಶರ್ಮ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಲ್ಲಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಟೀಂ ಇಂಡಿಯಾ ವೇಗದ ಬೌಲರ್ ಇಶಾಂತ್ ಶರ್ಮಾ ಕೂಡಾ ದಿಲ್ಲಿ ಪೊಲೀಸರ ಶ್ರಮವನ್ನು ಕೊಂಡಾಡಿದ್ದರು.