ಇಪ್ಪತ್ತರ ಬದಲು ಎಪ್ಪತ್ತರ ಆಟ ! ಆರ್‌ಸಿಬಿಗೆ 7ವಿಕೆಟ್‌ ಸೋಲು


Team Udayavani, Mar 24, 2019, 6:52 AM IST

91

ಚೆನ್ನೈ: 12ನೇ ಐಪಿಎಲ್‌ ಉದ್ಘಾಟನಾ ಪಂದ್ಯ ಅತ್ಯಂತ ನೀರಸವಾಗಿ ಆರಂಭಗೊಂಡಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಾಟಕೀಯ ಕುಸಿತ ಕಂಡ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ 7 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ಸ್ಪಿನ್‌ ದಾಳಿಗೆ ತತ್ತರಿಸಿ 17.1 ಓವರ್‌ಗಳಲ್ಲಿ ಬರೀ 70 ರನ್ನಿಗೆ ಕುಸಿಯಿತು. ಇದು ಐಪಿಎಲ್‌ ಋತುವಿನ ಆರಂಭಿಕ ಪಂದ್ಯದಲ್ಲಿ ದಾಖಲಾದ ಕನಿಷ್ಠ ಮೊತ್ತ. ಚೆನ್ನೈ 17.4 ಓವರ್‌ಗಳಲ್ಲಿ 3 ವಿಕೆಟಿಗೆ 71 ರನ್‌ ಮಾಡಿ ಸುಲಭ ಜಯ ಸಾಧಿಸಿತು.

ಬಿಗ್‌ ಹಿಟ್ಟರ್‌ಗಳ ವೈಫ‌ಲ್ಯ
ಕೊಹ್ಲಿ, ಎಬಿಡಿ, ಮೊಯಿನ್‌ ಅಲಿ, ಹೆಟ್‌ಮೈರ್‌, ದುಬೆ ಮೊದಲಾದ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿದ್ದ ಆರ್‌ಸಿಬಿ ಟಿ20 ಜೋಶ್‌ ಪ್ರದರ್ಶಿಸುವ ಬದಲು ನಾಟಕೀಯ ಕುಸಿತ ಕಾಣುತ್ತಲೇ ಹೋಯಿತು. ಆರಂಭಕಾರ ಪಾರ್ಥಿವ್‌ ಪಟೇಲ್‌ ಹೊರತುಪಡಿಸಿ ಉಳಿದವರ್ಯಾರೂ ಎರಡಂಕೆಯ ಮೊತ್ತ ದಾಖಲಿಸದಿದ್ದುದು ಬೆಂಗಳೂರು ತಂಡದ ಬ್ಯಾಟಿಂಗ್‌ ವೈಫ‌ಲ್ಯವನ್ನು ತೆರೆದಿರಿಸಿತು. ಕೊನೆಯವರಾಗಿ ಔಟಾದ ಪಾರ್ಥಿವ್‌ 35 ಎಸೆತ ಎದುರಿಸಿ 29 ರನ್‌ ಮಾಡಿದರು (2 ಬೌಂಡರಿ).

ಕೊಹ್ಲಿ 6, ಅಲಿ ಮತ್ತು ಎಬಿಡಿ ತಲಾ 9 ರನ್‌ ಮಾಡಿದರೆ, ಮೊದಲ ಐಪಿಎಲ್‌ ಪಂದ್ಯ ಆಡಲಿಳಿದ ಹೆಟ್‌ಮೈರ್‌ ಖಾತೆ ತೆರೆಯುವ ಮೊದಲೇ ರನೌಟಾದರು.

ಭಜ್ಜಿ, ತಾಹಿರ್‌ ಮಾರಕ ಸ್ಪಿನ್‌
ಆರ್‌ಸಿಬಿಗೆ ಆರಂಭದಲ್ಲಿ ಬಿಸಿ ಮುಟ್ಟಿಸಿದವರು ಟರ್ಬನೇಟರ್‌ ಹರ್ಭಜನ್‌ ಸಿಂಗ್‌. ಚಹರ್‌ ಜತೆ ಬೌಲಿಂಗ್‌ ಆರಂಭಿಸಿದ ಅವರು ಮೊದಲ 3 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಬಳಿಕ ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಘಾತಕವಾಗಿ ಎರಗಿ ಕೇವಲ 9 ರನ್ನಿಗೆ 3 ವಿಕೆಟ್‌ ಉಡಾಯಿಸಿದರು. ಜಡೇಜ ಸಾಧನೆ 15 ರನ್ನಿಗೆ 2 ವಿಕೆಟ್‌. ತಾಹಿರ್‌ ಮತ್ತು ಜಡೇಜ ಒಂದೊಂದು ಮೇಡನ್‌ ಓವರ್‌ ಎಸೆದು ಗಮನ ಸೆಳೆದರು. ಬ್ರಾವೊ ತಾನೆಸೆದ ಒಂದೇ ಎಸೆತದಲ್ಲಿ ಪಾರ್ಥಿವ್‌ ಪಟೇಲ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು.

ರೈನಾ 5,000 ರನ್‌ ಸಾಧಕ 
ಚೆನ್ನೈ ಆಟಗಾರ ಸುರೇಶ್‌ ರೈನಾ ಐಪಿಎಲ್‌ ಇತಿಹಾಸದಲ್ಲಿ 5,000 ರನ್‌ ಗಳಿಸಿದ ಮೊದಲ ಸಾಧಕನಾಗಿ ಮೂಡಿಬಂದರು. ಆರ್‌ಸಿಬಿ ಎದುರಿನ ಪಂದ್ಯದಲ್ಲಿ 15 ರನ್‌ ಗಳಿಸಿದಾಗ ಈ ಸಾಧನೆ ಮಾಡಿದರು. ಇದರೊಂದಿಗೆ ವಿರಾಟ್‌ ಕೊಹ್ಲಿಗಿಂತ ಮೊದಲೇ ಈ ದಾಖಲೆಯನ್ನು ರೈನಾ ತಮ್ಮ ಹೆಸರಿಗೆ ಬರೆಸಿಕೊಂಡರು. ಕೊಹ್ಲಿಗೆ 5,000 ರನ್‌ ಗಳಿಸಲು ಈ ಪಂದ್ಯಕ್ಕೂ ಮುನ್ನ 52 ರನ್‌ ಬೇಕಿತ್ತು. ಈ ಪಂದ್ಯದಲ್ಲಿ ಅವರು 6 ರನ್ನಿಗೆ ಔಟಾದರು.

ಸ್ಕೋರ್‌ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ    ಸಿ ಜಡೇಜ ಬಿ ಹರ್ಭಜನ್‌    6
ಪಾರ್ಥಿವ್‌ ಪಟೇಲ್‌    ಸಿ ಜಾಧವ್‌ ಬಿ ಬ್ರಾವೊ    29
ಮೊಯಿನ್‌ ಅಲಿ    ಸಿ ಮತ್ತು ಬಿ ಹರ್ಭಜನ್‌    9
ಎಬಿ ಡಿ ವಿಲಿಯರ್    ಸಿ ಜಡೇಜ ಬಿ ಹರ್ಭಜನ್‌    9
ಶಿಮ್ರನ್‌ ಹೆಟ್‌ಮೈರ್‌    ರನೌಟ್‌    0
ಶಿವಂ ದುಬೆ    ಸಿ ವಾಟ್ಸನ್‌ ಬಿ ತಾಹಿರ್‌    2
ಡಿ ಗ್ರ್ಯಾಂಡ್‌ಹೋಮ್‌    ಸಿ ಧೋನಿ ಬಿ ಜಡೇಜ    4
ನವದೀಪ್‌ ಸೈನಿ    ಸಿ ವಾಟ್ಸನ್‌ ಬಿ ತಾಹಿರ್‌    2
ಯಜುವೇಂದ್ರ ಚಾಹಲ್‌ ಸಿ ಹರ್ಭಜನ್‌ ಬಿ ತಾಹಿರ್‌    4
ಉಮೇಶ್‌ ಯಾದವ್‌    ಬಿ ಜಡೇಜ    1
ಮೊಹಮ್ಮದ್‌ ಸಿರಾಜ್‌    ಔಟಾಗದೆ    0
ಇತರ        4
ಒಟ್ಟು  (17.1 ಓವರ್‌ಗಳಲ್ಲಿ ಆಲೌಟ್‌)    70
ವಿಕೆಟ್‌ ಪತನ: 1-16, 2-28, 3-38, 4-39, 5-45, 6-50, 7-53, 8-59, 9-70.
ಬೌಲಿಂಗ್‌: ದೀಪಕ್‌ ಚಹರ್‌        4-0-17-0
ಹರ್ಭಜನ್‌ ಸಿಂಗ್‌        4-0-20-3
ಸುರೇಶ್‌ ರೈನಾ        1-0-6-0
ಇಮ್ರಾನ್‌ ತಾಹಿರ್‌        4-1-9-3
ರವೀಂದ್ರ ಜಡೇಜ        4-1-15-2
ಡ್ವೇನ್‌ ಬ್ರಾವೊ        0.1-0-1
ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌    ಬಿ ಚಾಹಲ್‌    0
ಅಂಬಾಟಿ ರಾಯುಡು    ಬಿ ಸಿರಾಜ್‌    28
ಸುರೇಶ್‌ ರೈನಾ    ಸಿ ದುಬೆ ಬಿ ಅಲಿ    19
ಕೇದಾರ್‌ ಜಾಧವ್‌    ಔಟಾಗದೆ    13
ರವೀಂದ್ರ ಜಡೇಜ    ಔಟಾಗದೆ    6
ಇತರ        5
ಒಟ್ಟು  (17.4 ಓವರ್‌ಗಳಲ್ಲಿ 3 ವಿಕೆಟಿಗೆ)    71
ವಿಕೆಟ್‌ ಪತನ: 1-8, 2-40, 3-59.
ಬೌಲಿಂಗ್‌: ಯಜುವೇಂದ್ರ ಚಾಹಲ್‌    4-1-6-1
ನವದೀಪ್‌ ಸೈನಿ        4-0-24-0
ಮೊಯಿನ್‌ ಅಲಿ        4-0-19-1
ಉಮೇಶ್‌ ಯಾದವ್‌        3-0-13-0
ಮೊಹಮ್ಮದ್‌ ಸಿರಾಜ್‌        2-1-5-1
ಶಿವಂ ದುಬೆ        0.4-0-3-0

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.