ಋತುರಾಜ್ ಗಾಯಕ್ವಾಡ್ ಪರ ವೆಂಗ್ಸರ್ಕಾರ್ ಬ್ಯಾಟಿಂಗ್
Team Udayavani, Dec 14, 2021, 4:50 AM IST
ಮುಂಬಯಿ: ಕಳೆದ ಐಪಿಎಲ್ನಲ್ಲಿ ಆರೇಂಜ್ ಕ್ಯಾಪ್ ಏರಿಸಿಕೊಂಡ ಬಳಿಕ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲೂ ರನ್ ಪ್ರವಾಹ ಹರಿಸುತ್ತಿರುವ ಋತುರಾಜ್ ಗಾಯಕ್ವಾಡ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೆ ಆಯ್ಕೆ ಮಾಡಬೇಕು ಎಂಬುದಾಗಿ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.
“ಓರ್ವ ಕ್ರಿಕೆಟಿಗನನ್ನು ಫಾರ್ಮ್ನಲ್ಲಿರುವಾಗಲೇ ತಂಡಕ್ಕೆ ಆಯ್ಕೆ ಮಾಡಬೇಕು. ಇದಕ್ಕಾಗಿ ಅವರು ಕಾಯುವಂತಾಗಬಾರದು. ಗಾಯಕ್ವಾಡ್ ಇನ್ನೆಷ್ಟು ರನ್ ಗಳಿಸಬೇಕು? ಅವರ ಆಯ್ಕೆಗೆ ಇದು ಸೂಕ್ತ ಸಮಯ’ ಎಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷರೂ ಆದ ವೆಂಗ್ಸರ್ಕಾರ್ ಹೇಳಿದರು.
“ಗಾಯಕ್ವಾಡ್ಗೆ ಈಗ 24 ವರ್ಷ. 28 ಅಥವಾ 30 ವರ್ಷ ಆದೊಡನೆ ಆಯ್ಕೆ ಮಾಡಿದರೆ ಪ್ರಯೋಜನವಿಲ್ಲ. ಅವರು 3ನೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲರು’ ಎಂದು ವೆಂಗ್ಸರ್ಕಾರ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಅಭ್ಯಾಸದ ವೇಳೆ ರೋಹಿತ್ ಶರ್ಮ ಕೈಗೆ ಏಟು : ಪಾಂಚಾಲ್ಗೆ ಬುಲಾವ್
2021ನೇ ಸಾಲಿನ ಐಪಿಎಲ್ನಲ್ಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪರ 45.36ರ ಸರಾಸರಿಯಲ್ಲಿ 635 ರನ್ ಪೇರಿಸಿದ ಹೆಗ್ಗಳಿಕೆ ಗಾಯಕ್ವಾಡ್ ಅವರದು. ವಿಜಯ್ ಹಜಾರೆ ಟ್ರೋಫಿ ಕೂಟದ 4 ಇನ್ನಿಂಗ್ಸ್ಗಳಿಂದ ಈಗಾಗಲೇ 435 ರನ್ ಬಾರಿಸಿದ್ದಾರೆ. ಇದರಲ್ಲಿ 3 ಸೆಂಚುರಿ ಕೂಡ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ