ಬಾಂದ್ರಾದಲ್ಲಿ ತೆಂಡುಲ್ಕರ್ಮತದಾನ
Team Udayavani, Oct 22, 2019, 5:29 AM IST
ಮುಂಬಯಿ : ಕ್ರಿಕೆಟಿನ ಮೇರು ತಾರೆ ಸಚಿನ್ ತೆಂಡುಲ್ಕರ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ನಾಗರಿಕನಾಗಿ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಈಡೇರಿಸಿದ್ದಾರೆ.
ಉಪನಗರ ಬಾಂದ್ರಾ ಮತಗಟ್ಟೆಯಲ್ಲಿ ಪತ್ನಿ ಡಾ| ಅಂಜಲಿ ಮತ್ತು ಪುತ್ರ ಅರ್ಜುನ್ ಜತೆಗೆ ಬಂದು ಸಚಿನ್ ಮತ ಚಲಾಯಿಸಿದರು. ಇದೇ ವೇಳೆ ಅವರು ಎಲ್ಲರೂ ಮತ ಹಾಕಬೇಕೆಂದು ಮನವಿ ಮಾಡಿ ಜಾಗೃತಿ ಮೂಡಿಸಿದರು.
ಮತ ಹಾಕುತ್ತೇವೆ ಎಂದು ಹೇಳಿದ ಮೂವರು ಹಿರಿಯ ನಾಗರಿಕರ ಕುರಿತಾಗಿ ಪ್ರಕಟವಾಗಿದ್ದ ಲೇಖನವೊಂದನ್ನು ಉಲ್ಲೇಖೀಸಿದ ತೆಂಡುಲ್ಕರ್, “ಈಗ ನಾವು ನಮ್ಮ ಕರ್ತವ್ಯವನ್ನು ಈಡೇರಿಸಿದರೆ ಬದಲಾವಣೆಯನ್ನು ಕಾಣಲು ಸಾಧ್ಯ. ಮತದಾನದ ಹಕ್ಕು ಇರುವ ಎಲ್ಲರೂ ತಪ್ಪದೆ ಮತದಾನ ಮಾಡಬೇಕು’ ಎಂದರು.
ಮಾಜಿ ಕ್ರಿಕೆಟಿಗರಾದ ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕಾರ್, ವಿನೋದ್ ಕಾಂಬ್ಳಿ, ರಮೇಶ್ ಪೊವಾರ್, ಟೆನಿಸಿಗ ಮಹೇಶ್ ಭೂಪತಿ, ಮುಂಬೈ ಸಿಟಿ ಎಫ್ಸಿ ಫುಟ್ಬಾಲಿಗರಾದ ಕುನಾಲ್ ಸಾವಂತ್, ಪ್ರತೀಕ್ ಚೌಧರಿ ಮತ ಚಲಾಯಿಸಿದ ಪ್ರಮುಖ ಕ್ರೀಡಾಪಟುಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ