ಜಪಾನ್ ಓಪನ್ :ಸಾಯಿ ಪ್ರಣೀತ್ ದ್ವಿತೀಯ ಸುತ್ತಿಗೆ
ಇಂದು ಸಿಂಧು ಹೋರಾಟ
Team Udayavani, Jul 24, 2019, 6:57 AM IST
ಟೋಕಿಯೊ,: ಭಾರತೀಯ ಶಟ್ಲರ್ ಸಾಯಿ ಪ್ರಣೀತ್ ಅವರು ಜಪಾನಿನ ಕೆಂಟೊ ನಿಶಿಮೊಟೊ ಅವರ ವಿರುದ್ಧ ನೇರ ಗೇಮ್ಗಳ ಗೆಲುವಿನೊಂದಿಗೆ ಜಪಾನ್ ಓಪನ್ ಬ್ಯಾಡ್ಮಿಂಟನ್ ಕೂಟದ ದ್ವಿತೀಯ ಸುತ್ತಿಗೇರಿದ್ದಾರೆ.
ಶ್ರೆಯಾಂಕರಹಿತ ಆಟಗಾರ ಪ್ರಣೀತ್ 21-17, 21-13 ಗೇಮ್ಗಳಿಂದ ಗೆದ್ದು ಬಂದರು. ಕೇವಲ 42 ನಿಮಿಷಗಳಲ್ಲಿ ನಿಶಿಮೊಟೊ ಅವರನ್ನು ಉರುಳಿಸಿ ಮುನ್ನಡೆದರು. ದ್ವಿತೀಯ ಸುತ್ತಿನಲ್ಲಿ ಅವರು ಮತ್ತೆ ಜಪಾನಿನ ಎದುರಾಳಿ ಕಂಟ ಸುನೆಯಾಮ ಅವರನ್ನು ಎದುರಿಸಲಿದ್ದಾರೆ.
ಇಂದು ಸಿಂಧು ಆಟ
ಭಾರತೀಯ ಶಟ್ಲರ್ಗಳಾದ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಬುಧವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಇಂಡೋನೇಶ್ಯ ಓಪನ್ನಲ್ಲಿ ಫೈನಲ್ತನಕ ಏರಿದ್ದ ಸಿಂಧು ಮೊದಲ ಸುತ್ತಿನಲ್ಲಿ ಚೀನದ ಯುಯಿ ಹಾನ್ ಅವರನ್ನು ಎದುರಿಸಲಿದ್ದಾರೆ. ಇದೇ ವೇಳೆ ಶ್ರೀಕಾಂತ್ ತನ್ನ ದೇಶದವರೇ ಆದ ಎಚ್. ಎಸ್. ಪ್ರಣಯ್ ಅವರನ್ನು ಎದುರಿಸಲಿದ್ದಾರೆ.
ಮಿಕ್ಸೆಡ್ನಲ್ಲಿ ಗೆಲುವು
ಮಿಕ್ಸೆಡ್ ಡಬಲ್ಸ್ನಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಗೆಲುವಿನೊಂದಿಗೆ ತಮ್ಮ ಅಭಿಯಾನ ಆರಂಭಿಸಿದ್ದಾರೆ. ಅವರಿಬ್ಬರು ಮೊದಲ ಸುತ್ತಿನಲ್ಲಿ ಜರ್ಮನಿಯ ಮಾರ್ವಿನ್ ಸೈಡೆಲ್ ಮತ್ತು ಲಿಂಡಾ ಎಫ್ಲೆರ್ ಅವರನ್ನು 21-14, 21-19 ಗೇಮ್ಗಳಿಂದ ಉರುಳಿಸಿದರು.
ಆದರೆ ಪುರುಷರ ಡಬಲ್ಸ್ನಲ್ಲಿ ಭಾರತೀಯರು ನಿರಾಶೆ ಅನುಭವಿಸಿದರು. ಮನು ಅತ್ರಿ ಮತ್ತು ಸುಮೀತ್ ಬಿ. ರೆಡ್ಡಿ ಅವರು ಮಲೇಶ್ಯದ ಗೋಹ್ ಝಿ ಮತ್ತು ನುರ್ ಇಝುದಿನ್ ಅವರಿಗೆ 12-21, 16-21 ನೇರ ಗೇಮ್ಗಳಿಂದ ಶರಣಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು