ಅಂಕಣ ಅವ್ಯವಸ್ಥೆ: ಪಂದ್ಯ ತ್ಯಜಿಸಿದ ಸೈನಾ ನೆಹ್ವಾಲ್
Team Udayavani, Feb 15, 2019, 5:16 AM IST
ಗುವಾಹಟಿ (ಅಸ್ಸಾಂ): ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಡ್ಮಿಂಟನ್ನ, ಮೂರು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಸಂಘಟಕರು ಅನಿವಾರ್ಯವಾಗಿ ಅದಲು ಬದಲು ಮಾಡಿದರು. ಗುರುವಾರ ಅಂಕಣ ಸರಿಯಾಗಿಲ್ಲವೆಂಬಕಾರಣಕ್ಕೆ, ವಿಶ್ವವಿಖ್ಯಾತ ಆಟಗಾರ್ತಿ ಸೈನಾ ನೆಹ್ವಾಲ್ ಆಡಲು ನಿರಾಕರಿಸಿದರು. ಅದರ ಪರಿಣಾಮ ಈ ನಿರ್ಧಾರ ಮಾಡಲಾಯಿತು.
ಇದಕ್ಕೂ ಮುನ್ನ ಸಮೀರ್ ವರ್ಮ, ಹಿಮ್ಮಡಿ ನೋವಿನ ಕಾರಣ ನೀಡಿ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದರು. ಮುಂದೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕೂಟದಲ್ಲಿ ಆಡಬೇಕಾಗಿರುವುದರಿಂದ, ಅಪಾಯವನ್ನು ಹೊತ್ತುಕೊಳ್ಳಲು ಸಿದ್ಧವಿಲ್ಲ, ಈಗಾಗಲೇ ಹಲವು ಗಾಯಗಳಿಂದ ಬೇಸತ್ತಿದ್ದೇನೆ ಎಂದು ಸೈನಾ ತಿಳಿಸಿದ್ದಾರೆ