ಕ್ರೀಡಾಂಗಣದ ಸಿಬ್ಬಂದಿಗಳಿಗೆ ಸಂಜು ಸ್ಯಾಮ್ಸನ್ ನಗದು ಬಹುಮಾನ
ಮಳೆ ನಡುವೆಯೂ ಅಂಗಳವನ್ನು ಸಜ್ಜುಗೊಳಿಸಿದ ಸಿಬ್ಬಂದಿಗಳು
Team Udayavani, Sep 7, 2019, 8:59 PM IST
ಕೊಚ್ಚಿ: ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ 2 ಪಂದ್ಯಗಳ ಸಂಭಾವನೆ 1.50 ಲಕ್ಷ ರೂ.ವನ್ನು ತಿರುವನಂತಪುರದ “ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣ’ದ ನಿರ್ವಹಣಾ ಸಿಬ್ಬಂದಿಗಳಿಗೆ ನೀಡಿದ್ದಾರೆ.
ಇಲ್ಲಿ ಭಾರತ “ಎ’-ದಕ್ಷಿಣ ಆಫ್ರಿಕಾ “ಎ’ ತಂಡಗಳ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆದಿದ್ದು, ಭಾರತ ಇದನ್ನು 4-1 ಅಂತರದಿಂದ ಗೆದ್ದಿದೆ. ಬಳಿಕ ಸಂಜು ಸ್ಯಾಮ್ಸನ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸಿಬ್ಬಂದಿಗಳ ಪರಿಶ್ರಮ
“ಮಳೆಯಿಂದ ಅಡಚಣೆ ಉಂಟಾಗಿದ್ದ ಪಂದ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದವು. ಕ್ರೀಡಾಂಗಣ ಸ್ವಲ್ಪ ಒದ್ದೆಯಾಗಿದ್ದರೂ ಪಂದ್ಯ ನಡೆಸಲಾಗುತ್ತಿರಲಿಲ್ಲ. ಆದರೆ ನಮ್ಮ ಕ್ರೀಡಾಂಗಣ ನಿರ್ವಹಣಾ ಸಿಬಂದಿಗಳು ತುಂಬಾ ಶ್ರಮವಹಿಸಿ ಯಾವ ಪಂದ್ಯವನ್ನೂ ರದ್ದಾಗದಂತೆ ನೋಡಿಕೊಂಡರು.
ಇದರಿಂದ ನಾವು ಸರಣಿ ಗೆಲ್ಲುವಂತಾಯಿತು. ಹೀಗಾಗಿ ನನ್ನ ಎರಡು ಪಂದ್ಯಗಳ ಸಂಭಾವನೆ 1.50 ಲಕ್ಷ ರೂ. ಮೊತ್ತವನ್ನು ಇಲ್ಲಿನ ಸಿಬಂದಿಗಳಿಗೆ ನೀಡುತ್ತಿದ್ದೇನೆ’ ಎಂದು ತಿಳಿಸಿದರು.
ಸಂಜು ಸ್ಯಾಮ್ಸನ್ ಅವರ ಈ ನಿರ್ಧಾರಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ