ಭಾರತದ ಬ್ಯಾಟಿಂಗ್‌ ಭವಿಷ್ಯ ಭದ್ರ


Team Udayavani, Feb 22, 2017, 12:22 PM IST

Prithvi-Shaw.jpg

ರಿಷಬ್‌ ಪಂತ್‌, ಪೃಥ್ವಿ ಶಾ, ಪ್ರಿಯಾಂಕ್‌ ಪಾಂಚಾಲ್‌, ಸಮಿತ್‌ ಗೋಯಲ್‌, ಶುಭಂ ಗಿಲ್‌, ಶ್ರೇಯಸ್‌ ಅಯ್ಯರ್‌…. ಈ ಹೆಸರುಗಳನ್ನು ನೋಡಿದರೆ ಸಾಕು ಭಾರತೀಯ ಕ್ರಿಕೆಟ್‌ ಭವಿಷ್ಯ ಭದ್ರವಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನ ಕಾಡದು. ಇವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಬ್ಲೂ ಜೆರ್ಸಿ ತೊಟ್ಟು ಭಾರತೀಯ ತಂಡ ಪ್ರತಿನಿಧಿಸಬೇಕೆಂಬ ಮಹದಾಸೆ ಹೊತ್ತು ವಯಸ್ಸಿಗೂ ಮೀರಿದ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. ಹೀಗಾಗಿ ಎಂಎಸ್‌ಕೆ ಪ್ರಸಾದ್‌ ನೇತೃತ್ವದ ಆಯ್ಕೆ ಸಮಿತಿ ಯುವ ಕಲಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಚಿತ್ತ ನೆಡಬೇಕಿದೆ. 

ಪ್ರಿಯಾಂಕ್‌ ಪಾಂಚಾಲ್‌
ರಣಜಿ ಟೂರ್ನಿಯ ಈ ಸಾಲಿನಲ್ಲಿ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡಿ 10 ಪಂದ್ಯಗಳಲ್ಲಿ 1,310 ರನ್‌ ಬಾರಿಸಿ ಅಗ್ರಸ್ಥಾನ ಪಡೆದಿರುವ ಪ್ರಿಯಾಂಕ್‌ ಪಾಂಚಾಲ್‌ ಟೆಸ್ಟ್‌ ಮಾದರಿಯ ಕ್ರಿಕೆಟಿಗೆ ಹೇಳಿ ಮಾಡಿಸಿದ ಆಟಗಾರ. ಗುಜರಾತ್‌ ಮೊದಲ ಬಾರಿಗೆ ರಣಜಿ ಚಾಂಪಿಯನ್‌ ಆಗುವಲ್ಲಿ ಮಹತ್ವದ ಪಾತ್ರವಹಿಸಿದ ಕ್ರಿಕೆಟಿಗ. ರಣಜಿಯಲ್ಲಿ ತ್ರಿಶತಕದ ಜತೆಗೆ 5 ಶತಕ ಹಾಗೂ 4 ಅರ್ಧ ಶತಕ ಬಾರಿಸಿದ ಸಾಧನೆ ಪಾಂಚಾಲ್‌ ಅವರದು. 

ರಿಷಬ್‌ ಪಂತ್‌
ದಿಲ್ಲಿಯ ರಿಷಬ್‌ ಪಂತ್‌ ಭಾರತೀಯ ಕ್ರಿಕೆಟಿನ ಭವಿಷ್ಯದ ಕೀಪರ್‌ ಎಂದೇ ಬಿಂಬಿತರಾಗಿದ್ದಾರೆ. ಈಗಾಗಲೇ ಒಂದು ಟಿ-20ಯಲ್ಲಿ ಆಡುವ ಬಳಗದಲ್ಲಿದ್ದರೂ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆದರೆ ಭವಿಷ್ಯದಲ್ಲಿ ಧೋನಿ ಅವರ ಸ್ಥಾನ ತುಂಬುವ ಭರವಸೆ ಮೂಡಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಪಂತ್‌ ರಣಜಿಯಲ್ಲಿ ತ್ರಿಶತಕ ಬಾರಿಸಿದ ಹೆಗ್ಗಳಿಕೆಯೊಂದಿಗೆ ಯಾವುದೇ ಪಂಥಾಹ್ವಾನಕ್ಕೂ ಸಿದ್ಧ ಎಂಬಂತಿದ್ದಾರೆ.

ಪೃಥ್ವಿ ಶಾ
ಅಂಡರ್‌-19 ಮಾದರಿಯ ಕ್ರಿಕೆಟಿನಲ್ಲಿ ಬೆಳಕಿಗೆ ಬಂದ ಮುಂಬಯಿ ಪ್ರತಿಭೆ. ಕಳೆದ ಅಂಡರ್‌-19 ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಗಮನ ಸೆಳೆದದ್ದು ಮಾತ್ರವಲ್ಲದೆ ಈ ಬಾರಿಯ ರಣಜಿಯ ಮಹತ್ವದ ಸೆಮಿಫೈನಲ್‌ನಲ್ಲಿ ಮುಂಬಯಿ ತಂಡಕ್ಕೆ ಆಯ್ಕೆಯಾದ ಪ್ರತಿಭಾವಂತ ಆಟಗಾರ. 17ನೇ ವಯಸ್ಸಿನಲ್ಲೇ ರಣಜಿ ಆಡುವ ಅವಕಾಶ ಗಿಟ್ಟಿಸಿದ ಶಾ ಶತಕ ಬಾರಿಸಿ, ತನ್ನ ತಂಡವನ್ನು ಫೈನಲ್‌ಗೇರಿಸಿ ಆಯ್ಕೆಯನ್ನು ಸಮರ್ಥಿಸಿದ ದಿಟ್ಟತನ ಮೆರೆದಿದ್ದರು. ಅದಲ್ಲದೆ ಚಿಕ್ಕ ವಯಸ್ಸಿನಲ್ಲೇ ರಣಜಿ ಶತಕ ಬಾರಿಸಿದ ಹೆಗ್ಗಳಿಕೆ ಶಾ ಅವರದು. 

ಶುಭಂ ಗಿಲ್‌
ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಪಳಗು ತ್ತಿರುವ ಕಿರಿಯರ ತಂಡದ ಪಂಜಾಬ್‌ ಆಟಗಾರ ಶುಭಂ ಗಿಲ್‌. ಇಂಗ್ಲೆಂಡ್‌ ವಿರುದ್ಧದ ಅಂಡರ್‌-19 ಸರಣಿಯಲ್ಲಿ ಸತತ 2 ಶತಕ ಬಾರಿಸಿ ಸುದ್ದಿಯಲ್ಲಿ ದ್ದಾರೆ. ಪಂಜಾಬ್‌ನ ದೇಶಿ ಪಂದ್ಯಾವಳಿಯಲ್ಲಿ ಸಾವಿರ ರನ್‌ ಬಾರಿಸಿದ ಸರದಾರನೂ ಹೌದು. 18ರ ಹರೆಯದ ಗಿಲ್‌ ಆಡಿರುವ 6 ಅಂಡರ್‌-19 ಪಂದ್ಯಗಳಲ್ಲಿ  ತಲಾ 2 ಶತಕ, ಅರ್ಧ ಶತಕದೊಂದಿಗೆ 499 ರನ್‌ ಬಾರಿಸಿದ್ದಾರೆ. 

ಸಮಿತ್‌ ಗೋಯಲ್‌
ರಣಜಿ ಚಾಂಪಿಯನ್‌ ಗುಜರಾತ್‌ ತಂಡದ ಆಟಗಾರನಾಗಿರುವ ಸಮಿತ್‌ ಗೋಯಲ್‌ ಈ ಸಾಲಿನ ರಣಜಿಯಲ್ಲಿ ಒಂದು ತ್ರಿಶತಕದೊಂದಿಗೆ 2 ಶತಕ ಹಾಗೂ 3 ಅರ್ಧ ಶತಕ ಬಾರಿಸಿದ್ದಾರೆ. 10 ಪಂದ್ಯಗಳಲ್ಲಿ 914 ಪೇರಿಸಿದ್ದಾರೆ. ಅದಲ್ಲದೆ ಆರಂಭಿಕನಾಗಿ ಕಣಕ್ಕಿಳಿದು ತ್ರಿಶತಕ ಬಾರಿಸಿ ತಂಡದ ಎಲ್ಲ ಆಟಗಾರರು ಔಟ್‌ ಆದರೂ ತಾನು ಅಜೇಯನಾಗಿ ಉಳಿದು 117 ವರ್ಷಗಳ ದಾಖಲೆಯನ್ನು ಮೀರಿಸಿದ್ದಾರೆ. 

ಶ್ರೇಯಸ್‌ ಅಯ್ಯರ್‌
ಸಾಮಾನ್ಯವಾಗಿ ಒನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬರುವ ಮುಂಬಯಿಯ ಶ್ರೇಯಸ್‌ ಅಯ್ಯರ್‌ ಕಳೆದ ಋತುವಿನಿಂದಲೇ ಟೀಮ್‌ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ. ಇವರ ನೈಜ ತಾಕತ್ತು ಏನೆಂಬುದಕ್ಕೆ ಮೊನ್ನೆ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯ ಸಾಕ್ಷಿಯೊದಗಿಸಿತು. ಕಾಂಗರೂಗಳ ಬಲಿಷ್ಠ ಬೌಲಿಂಗ್‌ ಸರದಿಯನ್ನು ಚಚ್ಚಿ ಪುಡಿಗುಟ್ಟಿದ ಅಯ್ಯರ್‌ ಅಜೇಯ ದ್ವಿಶತಕ ಬಾರಿಸಿ ಮೆರೆದರು. 

ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಅಯ್ಯರ್‌ 100 ರನ್‌ ಹೊಡೆದಿದ್ದರು. ತಂಡದಲ್ಲಿ ಆವರ್ತನ ಪದ್ಧತಿಯಂತೆ ಕೆಲ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಒಬ್ಬರು ಅಥವಾ ಇಬ್ಬರು ಯುವ ಆಟಗಾರರಿಗೆ ಅವ ಕಾಶ ನೀಡುವ ನಿಯಮವನ್ನು ಆಯ್ಕೆ ಸಮಿತಿ ಅನುಸರಿಸಿದರೆ ಹೊಸಬರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಕ್ಕಂತಾಗುತ್ತದೆ. ಒಂದೆರಡು ಪಂದ್ಯಗಳಲ್ಲಿ ಮಿಂಚಿದ ಕೂಡಲೇ ರಾಷ್ಟ್ರೀಯ ತಂಡದಲ್ಲಿ ಕರೆದು ಅವಕಾಶ ನೀಡವುದು ಸರಿ ಅಲ್ಲದಿದ್ದರೂ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಸಚಿನ್‌, ಕೊಹ್ಲಿ ಅವರಂಥ ಶ್ರೇಷ್ಠ ಕ್ರಿಕೆಟ್‌ ಕಲಿಗಳ ಉದಯವಾಗಬಹುದು.

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.