ರವಿಶಾಸ್ತ್ರಿ ವೈಫಲ್ಯವನ್ನು ಸಹಿಸಿಕೊಳ್ಳುತ್ತಿದ್ದುದು ತುಂಬಾ ಕಡಿಮೆ: ದಿನೇಶ್ ಕಾರ್ತಿಕ್
Team Udayavani, Aug 17, 2022, 3:37 PM IST
ನವದೆಹಲಿ: ”ರವಿಶಾಸ್ತ್ರಿ ಅವರು ವಿಶೇಷ ಸಾಧನೆ ಮಾಡಲು ಆಟಗಾರರನ್ನು ಹುರಿದುಂಬಿಸುತ್ತಿದ್ದರು, ಆದರೆ ಅವರು ಭಾರತದ ಮುಖ್ಯ ಕೋಚ್ ಆಗಿದ್ದಾಗ ವೈಫಲ್ಯವನ್ನು ಸಹಿಸಿಕೊಳ್ಳುತ್ತಿದ್ದುದು ತುಂಬಾ ಕಡಿಮೆ” ಎಂದು ಅನುಭವಿ ವಿಕೆಟ್ಕೀಪರ್ ಮತ್ತು ಬ್ಯಾಟ್ಸ್ ಮ್ಯಾನ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಕ್ರಿಕ್ಬಝ್ ಡಾಕ್ಯುಸರೀಸ್ ‘ಸಮ್ಮರ್ ಸ್ಟಾಲಿಮೇಟ್’ ನಲ್ಲಿ ಮಾತನಾಡಿ “ಶಾಸ್ತ್ರಿ ಅವರು ಇಷ್ಟಪಡದ ನಿರ್ದಿಷ್ಟ ವೇಗದಲ್ಲಿ ಬ್ಯಾಟಿಂಗ್ ಮಾಡದ ಯಾರಿಗಾದರೂ ಅಥವಾ ನೆಟ್ಸ್ ಮತ್ತು ಮ್ಯಾಚ್ನಲ್ಲಿ ಕಡಿಮೆ ಸಹಿಷ್ಣುತೆಯನ್ನು ಹೊಂದಿದ್ದರು. ಅವರು ವಿಭಿನ್ನವಾಗಿ ಬ್ಯಾಟ್ ಮಾಡಲು ಬಯಸುತ್ತಿದ್ದರು” ಎಂದು ಕಾರ್ತಿಕ್ ಹೇಳಿದ್ದಾರೆ.
“ಶಾಸ್ತ್ರಿ ಅವರಿಗೆ ತಂಡದಿಂದ ಏನು ಬೇಕು, ಅದನ್ನು ಮಾಡಿಸುವ ರೀತಿ ನಿಖರವಾಗಿ ತಿಳಿದಿತ್ತು ಆದರೆ ವೈಫಲ್ಯಗಳನ್ನು ಸಹಿಯುವಲ್ಲಿ ಅವರ ಸಹನೆ ಬಹಳ ಕಡಿಮೆ. ಅವರು ಯಾವಾಗಲೂ ಚೆನ್ನಾಗಿ ಆಡಲು ಒತ್ತಾಯಿಸುತ್ತಿದ್ದರು ಎಂದಿದ್ದಾರೆ.
“ನನ್ನ ಪ್ರಕಾರ ಶಾಸ್ತ್ರಿ ತರಬೇತುದಾರರಾಗಿ ತಮ್ಮ ಸಾಮರ್ಥ್ಯವನ್ನು ತೋರಿದರು. ಅವರು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಮಾಡಿದರು. ತರಬೇತುದಾರರಾಗಿ, ಅವರು ದೊಡ್ಡ ವ್ಯಕ್ತಿಯಾಗಿದ್ದರು. ಅವರು ವಿಶೇಷ ವಿಷಯಗಳನ್ನು ಪ್ರಯತ್ನಿಸಲು ಮತ್ತು ಸಾಧಿಸಲು ಆಟಗಾರರನ್ನು ಪ್ರೇರೇಪಿಸಿದ ವ್ಯಕ್ತಿ ಎಂದರು.
ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಯುಗದಲ್ಲಿ ತಾನು ಹೆಚ್ಚು ನಿರಾಳವಾಗಿದ್ದೇನೆ ಮತ್ತು ಸುರಕ್ಷಿತವಾಗಿರುತ್ತೇನೆ ಎಂದು ಕಾರ್ತಿಕ್ ಈಗಾಗಲೇ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ