ಟೆಸ್ಟ್ ತಂಡಕ್ಕೆ ಉಪನಾಯಕನ ಅಗತ್ಯವೇನಿದೆ? ರಾಹುಲ್ ಭವಿಷ್ಯದ ಬಗ್ಗೆ ಶಾಸ್ತ್ರಿ ಅಭಿಪ್ರಾಯ
Team Udayavani, Feb 26, 2023, 1:04 PM IST
ಮುಂಬೈ: ಭಾರತದ ಟೆಸ್ಟ್ ತಂಡದ ಉಪನಾಯಕ ಸ್ಥಾನವನ್ನು ಕೆಎಲ್ ರಾಹುಲ್ ಕಳೆದುಕೊಂಡಿರುವ ಕುರಿತು ರವಿ ಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟೀಂ ಇಂಡಿಯಾಗೆ ಉಪನಾಯಕನ ಅಗತ್ಯವಿಲ್ಲ ಎಂದು ನಾನು ಯಾವಾಗಲೂ ನಂಬುತ್ತೇನೆ ಎಂದು ಹೇಳಿದರು.
ಸದ್ಯ ನಡೆಯುತ್ತಿರುವ ಬಾರ್ಡರ್- ಗಾವಸ್ಕರ್ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಕೆಎಲ್ ರಾಹುಲ್ ಅವರು ತಂಡದ ಉಪ ನಾಯಕರಾಗಿದ್ದರು. ಆದರೆ ಕಳಪೆ ಫಾರ್ಮ್ ನ ಕಾರಣದಿಂದ ಅವರು ಹುದ್ದೆ ಕಳೆದುಕೊಂಡಿದ್ದಾರೆ. ಸದ್ಯ ತಂಡದಲ್ಲಿ ಯಾರನ್ನೂ ಉಪನಾಯಕನ ಸ್ಥಾನಕ್ಕೆ ನೇಮಿಸಲಾಗಿಲ್ಲ.
ಐಸಿಸಿ ಪಾಡ್ ಕಾಸ್ಟ್ ಗೆ ಮಾತನಾಡಿದ ರವಿ ಶಾಸ್ತ್ರಿ, ಟೀಂ ಇಂಡಿಯಾಗೆ ಉಪ ನಾಯಕನ ಅಗತ್ಯವಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ರಬಕವಿ-ಬನಹಟ್ಟಿ: ಜನರು ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವ ವಿಶ್ವಾಸದಲ್ಲಿದ್ದಾರೆ: ಬೊಮ್ಮಾಯಿ
“ಉಪ ನಾಯಕನ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ನಿರ್ಧಾರ ಮಾಡುತ್ತದೆ. ರಾಹುಲ್ ನ ಫಾರ್ಮ್ ಬಗ್ಗೆ, ಆತನ ಮನಸ್ಥಿತಿಯ ಬಗ್ಗೆ ಅವರಿಗೆ ಗೊತ್ತು. ನನ್ನ ಪ್ರಕಾರ ತವರಿನ ಸರಣಿಗೆ ತಂಡಕ್ಕೆ ಉಪನಾಯಕನ ಅಗತ್ಯವಿಲ್ಲ. ಉತ್ತಮ ತಂಡದೊಂದಿಗೆ ಕಣಕ್ಕಿಳಿಯಲಿ. ಒಂದು ವೇಳೆ ನಾಯಕ ಮೈದಾನದಿಂದ ಹೊರಹಗಬೇಕಾದರೆ ಬೇರೆ ಯಾರ ಬಳಿ ಆ ಕ್ಷಣಕ್ಕೆ ಜವಾಬ್ದಾರಿ ನೀಡಲಿ” ಎಂದಿದ್ದಾರೆ.
“ಉಪನಾಯಕನು ಉತ್ತಮ ಪ್ರದರ್ಶನ ನೀಡದಿದ್ದರೆ ಅವನ ಸ್ಥಾನವನ್ನು ಯಾರಾದರೂ ವಹಿಸಿಕೊಳ್ಳಬಹುದು; ಹೇಗೂ ಉಪನಾಯಕನೆಂಬ ಟ್ಯಾಗ್ ಇರುವುದಿಲ್ಲ. ತವರಿನ ಪರಿಸ್ಥಿತಿಯಲ್ಲಿ ನಾನು ಎಂದಿಗೂ ಉಪನಾಯಕನನ್ನು ಇಷ್ಟಪಡುವುದಿಲ್ಲ” ಎಂದು ಶಾಸ್ತ್ರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ
Arrested: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್ ಕಾನ್ಸ್ಟೆಬಲ್ ಗೆ ಗಾಯ
Brahmavara: ವಿದ್ಯುತ್ ಕಂಬ ಮುರಿದು ಬಿದ್ದು ಯುವಕ ಮೃತ್ಯು