ಶುಭಂ ಗಿಲ್‌ ಶತಕ; ಭಾರತಕ್ಕೆ ಸರಣಿ ಮುನ್ನಡೆ


Team Udayavani, Feb 4, 2017, 3:45 AM IST

03-SPO-3.jpg

ಮುಂಬಯಿ: ಆರಂಭಕಾರ ಶುಭಂ ಗಿಲ್‌ ಅವರ ಅಜೇಯ ಶತಕ, ಇದಕ್ಕೂ ಮುನ್ನ ಸ್ಪಿನ್‌ದ್ವಯರಾದ ರಾಹುಲ್‌ ಚಹರ್‌ ಹಾಗೂ ಅನುಕೂಲ್‌ ರಾಯ್‌ ಸಂಘಟಿಸಿದ ಘಾತಕ ದಾಳಿಯ ನೆರವಿನಿಂದ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಅಂಡರ್‌-19 ಏಕದಿನ ಸರಣಿಯ 3ನೇ ಮುಖಾಮುಖೀಯಲ್ಲಿ ಭಾರತದ ಕಿರಿಯರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಗಳಿಸಿದ್ದಾರೆ.

ಮುಂಬಯಿಯ “ಬ್ರೆಬೋರ್ನ್ ಸ್ಟೇಡಿಯಂ’ನಲ್ಲಿ ನಡೆದ ಶುಕ್ರವಾರದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 49 ಓವರ್‌ಗಳಲ್ಲಿ 215 ರನ್ನಿಗೆ ಕುಸಿಯಿತು. ಭಾರತ 44.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 216 ರನ್‌ ಪೇರಿಸಿ ಗೆದ್ದು ಬಂದಿತು.

ಶುಭಂ ಆಕರ್ಷಕ ಶತಕ: ಪಂಜಾಬ್‌ನ 17ರ ಹರೆಯದ ಬಲಗೈ ಆರಂಭಕಾರ ಶುಭಂ ಗಿಲ್‌ ಅಜೇಯ 138 ರನ್‌ ಬಾರಿಸಿ ಭಾರತದ ಚೇಸಿಂಗ್‌ ಸವಾಲನ್ನು ಸುಲಭಗೊಳಿಸಿ ದರು. 157 ಎಸೆತಗಳನ್ನು ಎದುರಿಸಿ ನಿಂತ ಗಿಲ್‌ 17 ಬೌಂಡರಿ, 2 ಸಿಕ್ಸರ್‌ ನೆರವಿನಿಂದ ಈ ಸ್ಮರಣೀಯ ಇನ್ನಿಂಗ್ಸ್‌ ಕಟ್ಟಿದರು. ಭಾರತದ ಗೆಲುವಿನ ವೇಳೆ ಗಿಲ್‌ ಜತೆ ಕೀಪರ್‌ ಹಾರ್ವಿಕ್‌ ದೇಸಾಯಿ ಅಜೇಯ 37ರಲ್ಲಿದ್ದರು. ಗಿಲ್‌-ದೇಸಾಯಿ ಜತೆಯಾಟದಲ್ಲಿ ಮುರಿಯದ 4ನೇ ವಿಕೆಟಿಗೆ 115 ರನ್‌ ಹರಿದು ಬಂತು. 

ಗಿಲ್‌ ಹಾಗೂ ನಾಯಕ ರಾಣ ನಿರ್ಮಿಸಿದ ಉತ್ತಮ ಅಡಿಪಾಯ ಕೂಡ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿತು. ಇವರಿ ಬ್ಬರು 7.5 ಓವರ್‌ಗಳಿಂದ 63 ರನ್‌ ಪೇರಿಸಿದರು. ಇದರಲ್ಲಿ ರಾಣ ಗಳಿಕೆ 19 ರನ್‌ ಮಾತ್ರ. ಆದರೆ ರಾಣ ನಿರ್ಗಮನದ ಬೆನ್ನಲ್ಲೇ ಪ್ರಿಯಂ ಗರ್ಗ್‌ (8) ಮತ್ತು ಸಲ್ಮಾನ್‌ ಖಾನ್‌ (11) ಅವರನ್ನು ಪೆವಿಲಿಯನ್ನಿಗೆ ಅಟ್ಟಿದ ಇಂಗ್ಲೆಂಡ್‌ ಮೇಲುಗೈ ಸಾಧಿಸಲು ಹವಣಿಸಿತು. ಇದಕ್ಕೆ ಗಿಲ್‌-ದೇಸಾಯಿ ಅಡ್ಡಗೋಡೆಯಾಗಿ ನಿಂತರು.

ಚಹರ್‌, ರಾಯ್‌ ಆಕ್ರಮಣ: ಬ್ಯಾಟಿಂಗ್‌ ಆಯ್ದು ಕೊಂಡ ಇಂಗ್ಲೆಂಡ್‌ ಉತ್ತಮ ಹಾಗೂ ಬಿರುಸಿನ ಆರಂಭ ಕಂಡು 
ಕೊಳ್ಳುವಲ್ಲಿ ವಿಫ‌ಲವಾಯಿತು.   3ನೇ ವಿಕೆಟಿಗೆ ಜತೆಗೂಡಿದ ಜಾರ್ಜ್‌ ಬಾಟ್ಲೆìಟ್‌ ಮತ್ತು ಡೆಲಾÅಯ್‌ ರಾಲಿನ್ಸ್‌ ಕ್ರೀಸ್‌ ಆಕ್ರಮಿಸಿಕೊಂಡು 84 ರನ್‌ ಪೇರಿಸಿದರು. ಬಾಟ್ಲೆìಟ್‌ 55 ರನ್‌ ಮಾಡಿದರೆ (67 ಎಸೆತ, 6 ಬೌಂಡರಿ, 1 ಸಿಕ್ಸರ್‌), ರಾಲಿನ್ಸ್‌ ನಾಲ್ಕೇ ರನ್ನಿನಿಂದ ಶತಕ ವಂಚಿತರಾದರು (106 ಎಸೆತ, 96 ರನ್‌, 11 ಬೌಂಡರಿ, 2 ಸಿಕ್ಸರ್‌). 

ಈ ಜೋಡಿಯನ್ನು ಬೇರ್ಪಡಿಸಿದ ಲೆಗ್‌ ಸ್ಪಿನ್ನರ್‌ ಚಹರ್‌ ಭಾರತಕ್ಕೆ ಮೇಲುಗೈ ಒದಗಿಸಿದರು. ಚಹರ್‌ ಸಾಧನೆ 33ಕ್ಕೆ 4. ಆಫ್ಸ್ಪಿನ್ನರ್‌ ರಾಯ್‌ ಕೂಡ ಘಾತಕವಾಗಿ ಪರಿಣಮಿಸಿದರು. ರಾಯ್‌ 39 ರನ್‌ ನೀಡಿ 3 ವಿಕೆಟ್‌ ಹಾರಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಕಿರಿಯರು-49 ಓವರ್‌ಗಳಲ್ಲಿ 215 (ರಾಲಿನ್ಸ್‌ 96, ಬಾಟ್ಲೆìಟ್‌ 55, ಚಹರ್‌ 33ಕ್ಕೆ 4, ರಾಯ್‌ 39ಕ್ಕೆ 3). ಭಾರತ-44.1 ಓವರ್‌ಗಳಲ್ಲಿ 3 ವಿಕೆಟಿಗೆ 216 (ಗಿಲ್‌ ಔಟಾಗದೆ 138, ದೇಸಾಯಿ ಔಟಾಗದೆ 37, ರಾಲಿನ್ಸ್‌ 30ಕ್ಕೆ 2).

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.