ರಣಜಿಯಲ್ಲಿ ಹೈಡ್ರಾಮಾ: ಅಂಪೈರ್ ಔಟ್ ನೀಡಿದರೂ ಕ್ರೀಸ್ ಬಿಟ್ಟು ಕದಲದ ಶುಭ್ಮನ್ ಗಿಲ್
Team Udayavani, Jan 3, 2020, 4:21 PM IST
ಹೊಸದಿಲ್ಲಿ: ಇಲ್ಲಿನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ರಣಜಿ ಪಂದ್ಯ ಹೈಡ್ರಾಮಾವೊಂದಕ್ಕೆ ಕಾರಣವಾಗಿದೆ. ಅಂಪೈರ್ ಔಟ್ ತೀರ್ಪು ನಿಡಿದರೂ ಆಟಗಾರ ಶುಭ್ಮನ್ ಗಿಲ್ ಕ್ರೀಸ್ ಬಿಟ್ಟು ಹೋಗದೆ ಪಂದ್ಯ ಹತ್ತು ನಿಮಿಷಗಳ ಸ್ಥಗಿತವಾಗಿದೆ.
ಪಂಜಾಬ್ ಮತ್ತು ಡೆಲ್ಲಿ ನಡುವಿನ ರಣಜಿ ಪಂದ್ಯದಲ್ಲಿ ಈ ವಿವಾದ ನಡೆದಿದೆ. ಬ್ಯಾಟಿಂಗ್ ಮಾಡುತ್ತಿದ್ದ ಪಂಜಾಬ್ ಬ್ಯಾಟ್ಸಮನ್ ಶುಭ್ಮನ್ ಗಿಲ್ 10 ರನ್ ಗಳಿಸಿದ್ದ ವೇಳೆ ಸುಭೋದ್ ಭಾಟಿ ಎಸೆತದಲ್ಲಿ ವಿಕೆಟ್ ಕೀಪರ್ ಕ್ಯಾಚ್ ನೀಡಿರುವುದನ್ನು ಪರಿಗಣಿಸಿ ಅಂಪೈರ್ ಮೊಹಮ್ಮದ್ ರಫಿ ಔಟ್ ನೀಡಿದರು.
ಆದರೆ ಅಂಪೈರ್ ತೀರ್ಪನ್ನು ಒಪ್ಪದ ಶುಭ್ಮನ್ ಗಿಲ್ ಕ್ರೀಸ್ ಬಿಟ್ಟು ಕದಲಲಿಲ್ಲ. ತಾನು ನಾಟ್ ಔಟ್ ಎಂದು ಪಟ್ಟು ಹಿಡಿದಿದು ಅಂಪೈರ್ ಗಳ ಜೊತೆಗೆ ವಾಗ್ವಾದಕ್ಕೆ ಇಳಿದರು.
ಇದೇ ಮೊದಲ ಬಾರಿಗೆ ರಣಜಿ ಅಂಪೈರಿಂಗ್ ಮಾಡುತ್ತಿರುವ ಸ್ಕ್ವಾರ್ ಲೆಗ್ ಅಂಪೈರ್ ಪಶ್ಚಿಮ್ ಪಾಠಕ್ ಜೊತೆಗೆ ಚರ್ಚಿಸಿದ ಮೊಹಮ್ಮದ್ ರಫಿ ತಮ್ಮ ನಿರ್ಣಯವನ್ನು ಬದಲಾಯಿಸಿ ಗಿಲ್ ನಾಟ್ ಔಟ್ ಎಂಬ ತೀರ್ಮಾನ ನೀಡಿದರು!
ಗಿಲ್ ಗೆ ಮರಳಿ ಆಡಲು ಅವಕಾಶ ನೀಡಿದ ಅಂಪೈರ್ ತೀರ್ಮಾನದಿಂದ ಕುಪಿತರಾದ ದಿಲ್ಲಿ ಆಟಗಾರರು ವಾಕ್ ಔಟ್ ಮಾಡಲು ತೀರ್ಮಾನಿಸಿದ್ದರು ಎಂದು ವರದಿಯಾಗಿತ್ತು.
ಮತ್ತೆ ಬ್ಯಾಟಿಂಗ್ ಮುಂದುವರಿಸಿದ ಶುಭ್ಮನ್ ಗಿಲ್ 23 ರನ್ ಮಾಡಿ ಔಟಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ