ವೀನಸ್‌ ಆಟ ಮುಗಿಸಿದ ಹಾಲೆಪ್‌​​​​​​​


Team Udayavani, Jan 20, 2019, 12:30 AM IST

simona-halep-venus-williams.jpg

ಮೆಲ್ಬರ್ನ್: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ವಿಲಿಯಮ್ಸ್‌ ಸೋದರಿಯರಲ್ಲಿ ಹಿರಿಯಳಾದ ವೀನಸ್‌ಗೆ ಸೋಲುಣಿಸುವ ಮೂಲಕ ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ. ಸೋಮವಾರ ಇಲ್ಲಿ ಸೆರೆನಾ ವಿಲಿಯಮ್ಸ್‌ ವಿರುದ್ಧ ಸೆಣಸಲಿದ್ದಾರೆ. ನವೋಮಿ ಒಸಾಕಾ, ಗಾರ್ಬಿನ್‌ ಮುಗುರುಜಾ, ಕ್ಯಾರೋಲಿನಾ ಪ್ಲಿಸ್ಕೋವಾ, ಅನಾಸ್ತಾಸಿಜಾ ಸೆವಸ್ತೋವಾ ವನಿತಾ ಸಿಂಗಲ್ಸ್‌ ವಿಭಾಗದಿಂದ ಮುನ್ನಡೆದವರಲ್ಲಿ ಪ್ರಮುಖರು.

ಕಳೆದ ಸಲದ ಫೈನಲಿಸ್ಟ್‌ ಹಾಲೆಪ್‌ ಶನಿವಾರದ 3ನೇ ಸುತ್ತಿನ ಪಂದ್ಯದಲ್ಲಿ 6-2, 6-3 ಅಂತರದಿಂದ, ಬಹಳ ಸುಲಭದಲ್ಲಿ ವೀನಸ್‌ ಆಟಕ್ಕೆ ತೆರೆ ಎಳೆದರು. “ಈ ವರ್ಷ ನನ್ನ ಅತ್ಯುತ್ತಮ ಪಂದ್ಯವೊಂದನ್ನು ಇಲ್ಲಿ ಆಡಿದೆ’ ಎಂಬುದಾಗಿ ಹಾಲೆಪ್‌ ಪ್ರತಿಕ್ರಿಯಿಸಿದ್ದಾರೆ. ಆದರೆ ಸೆರೆನಾ ವಿರುದ್ಧ ಹಾಲೆಪ್‌ ಕಳಪೆ ದಾಖಲೆ ಹೊಂದಿದ್ದಾರೆ. 9 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ.

ಸೆರೆನಾಗೆ ಸುಲಭ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಉಕ್ರೇನಿನ ಯುವ ಆಟಗಾರ್ತಿ ಡಯಾನಾ ಯಾಸ್ಟ್ರೆಮ್‌ಸ್ಕಾ ವಿರುದ್ಧ 6-2, 6-1 ಅಂತರದಿಂದ ಗೆದ್ದು ಬಂದರು. ಸೆರೆನಾ 1999ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದಾಗ ಆಗಿನ್ನೂ ಯಾಸ್ಟ್ರೆಮ್‌ಸ್ಕಾ ಜನಿಸಿರಲಿಲ್ಲ!

“ನಿನ್ನ ಆಟ ಅಮೋಘವಾಗಿತ್ತು. ಮುಂದೊಂದು ದಿನ ಗೆಲುವು ಕೈಹಿಡಿಯಲಿದೆ. ಬೇಸರಪಡಬೇಡ’ ಎಂದು ಸೆರೆನಾ ಕಣ್ಣೀರಿಡುತ್ತಿದ್ದ ಯಾಸ್ಟ್ರೆಮ್‌ಸ್ಕಾಗೆ ಸಮಾಧಾನ ಮಾಡಿ ಕ್ರೀಡಾಸ್ಫೂರ್ತಿ ಮೆರೆದರು.

ಒಸಾಕಾ, ಮುಗುರುಜಾ ಓಟ
ಯುಎಸ್‌ ಓಪನ್‌ ಚಾಂಪಿಯನ್‌, ಜಪಾನಿನ 17ರ ಹರೆಯದ ಆಟಗಾರ್ತಿ ನವೋಮಿ ಒಸಾಕಾ 3 ಸೆಟ್‌ಗಳ ಕಾದಾಟದ ಬಳಿಕ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾದರು. ಶನಿವಾರದ “ಆಲ್‌ ಏಶ್ಯನ್‌’ ಪಂದ್ಯದಲ್ಲಿ ಅವರು ಥೈವಾನ್‌ನ ಸೀ ಸು ವೀ ವಿರುದ್ಧ 7-5, 4-6, 6-1 ಅಂತರದ ಗೆಲುವು ಸಾಧಿಸಿದರು. ಮುಂದಿನ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ. ಅವರು ಚೀನದ ವಾಂಗ್‌ ಕ್ವಿಯಾಂಗ್‌ ವಿರುದ್ಧ 6-3, 6-3 ಅಂತರದಿಂದ ಗೆದ್ದರು.ಸ್ಪೇನಿನ ಗಾರ್ಬಿನ್‌ ಮುಗುರುಜಾ ಸ್ವಿಸ್‌ ಆಟಗಾರ್ತಿ ಟೈಮಿಯಾ ಬಕ್ಸಿನ್‌ಸ್ಕಿ ವಿರುದ್ಧ 7-6 (7-5), 6-2 ಅಂತರದಿಂದ ಜಯ ಸಾಧಿಸಿ 4ನೇ ಸುತ್ತು ತಲುಪಿದರು.

ಮಿಕ್ಸೆಡ್‌ ಡಬಲ್ಸ್‌
ಪೇಸ್‌ ಜಯ, ಬೋಪಣ್ಣ ಪರಾಭವ

ಆಸ್ಟ್ರೇಲಿಯನ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಶನಿವಾರ ಭಾರತ ಮಿಶ್ರ ಫ‌ಲ ಅನುಭವಿಸಿದೆ. ಲಿಯಾಂಡರ್‌ ಪೇಸ್‌ ಜಯ ಸಾಧಿಸಿದರೆ, ರೋಹನ್‌ ಬೋಪಣ್ಣ ಪರಾಭವಗೊಂಡರು.ತವರಿನ ಸಮಂತಾ ಸ್ಟೋಸರ್‌ ಜತೆಗೂಡಿ ಆಡುತ್ತಿರುವ ಲಿಯಾಂಡರ್‌ ಪೇಸ್‌ ನೆದರ್ಲೆಂಡ್‌ನ‌ ವೆಸ್ಲಿ ಕೂಲ್‌ಹೋಫ್-ಜೆಕ್‌ ಗಣರಾಜ್ಯದ ಕ್ವೆಟಾ ಪೆಶೆR ವಿರುದ್ಧ 6-4, 7-5 ಅಂತರದಿಂದ ಜಯ ಸಾಧಿಸಿದರು. ಆದರೆ ದಿಟ್ಟ ಹೋರಾಟ ಪ್ರದರ್ಶಿಸಿಯೂ ರೋಹನ್‌ ಬೋಪಣ್ಣ-ಚೀನದ ಯಾಂಗ್‌ ಜೊಕ್ಸುವಾನ್‌ ಜೋಡಿ ರಾಬರ್ಟ್‌ ಫ‌ರ (ಕೊಲಂಬಿಯಾ)-ಅನ್ನಾ ಲೆನಾ ಗ್ರೋನ್‌ಫೆಲ್ಡ್‌ (ಜರ್ಮನಿ) ವಿರುದ್ಧ 6-3, 3-6, 6-10 ಅಂತರದಿಂದ ಪರಾಭವಗೊಂಡರು.

ಟಾಪ್ ನ್ಯೂಸ್

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.