ಕ್ರೀಡಾ ಸಚಿವರ ಸಲಹೆ ಕೇಳಿದ ಸಿಂಧು
Team Udayavani, Mar 13, 2020, 10:36 PM IST
ಹೊಸದಿಲ್ಲಿ: ಕೊರೊನಾ ಹಿನ್ನೆಲೆಯಲ್ಲಿ, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮುಂದುವರಿಯಬಹುದೇ ಎಂದು ಪಿ.ವಿ. ಸಿಂಧು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರ ಸಲಹೆ ಕೇಳಿದ್ದಾರೆ. ಮುಂದುವರಿಯಲು ಅಡ್ಡಿಯಿಲ್ಲ, ಆದರೆ ಸುರಕ್ಷಾ ವಿಧಾನವನ್ನು ಪಾಲಿಸಲು ಮರೆಯದಿರಿ ಎಂದು ಸಚಿವರು ಇದಕ್ಕೆ ಉತ್ತರಿಸಿದ್ದಾರೆ. ಈ ಘಟನೆಯನ್ನು ಸ್ವತಃ ರಿಜಿಜು ಅವರೇ ಹೇಳಿದ್ದಾರೆ.
“ನಿಯಮಗಳನ್ನು ತಪ್ಪದೇ ಪಾಲಿಸಿ’
“ಸಿಂಧು ನನಗೆ ಕರೆ ಮಾಡಿ, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ನಲ್ಲಿ ತಾನು ಆಟ ಮುಂದುವರಿಸಬಹುದೇ ಎಂದು ಕೇಳಿದ್ದಾರೆ. ದೇಶದ ಹೊರಗೆ, ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಆಡುವ ಕಾರಣ ಮುಂದುವರಿಯಿರಿ ಎಂದು ಸೂಚಿಸಿದ್ದೇನೆ. ಆದರೆ ಈ ಸಂದರ್ಭದಲ್ಲಿ ಆ ದೇಶಗಳ ಆರೋಗ್ಯ ನಿಯಮಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದ್ದೇನೆ’ ಎಂದು ಹೇಳಿದ್ದಾಗಿ ರಿಜಿಜು ತಿಳಿಸಿದರು. ಆದರೆ ಶುಕ್ರವಾರದ ಕ್ವಾರ್ಟರ್ ಫೈನಲ್ನಲ್ಲಿ ಸಿಂಧು ಪರಾಭವಗೊಂಡರು. ಜಪಾನಿನ ನಜೋಮಿ ಒಕುಹಾರಾ ವಿರುದ್ಧ 12-21, 21-15, 21-13 ಅಂತರದಿಂದ ಎಡವಿದರು.