ಚುಟುಕು ಐಪಿಎಲ್‌: ಗಂಗೂಲಿ ಸುಳಿವು

ಯಾವುದೇ ನಿರ್ಧಾರಕ್ಕೆ ಬಾರದ ಬಿಸಿಸಿಐ-ಐಪಿಎಲ್‌ ಫ್ರಾಂಚೈಸಿಗಳ ಸಭೆ; ಐಪಿಎಲ್‌ ನಡೆಸಲು ವಿವಿಧ ದಾರಿಗಳು; ಯಾವುದೂ ಇತ್ಯರ್ಥವಾಗಿಲ್ಲ

Team Udayavani, Mar 15, 2020, 5:49 AM IST

ಚುಟುಕು ಐಪಿಎಲ್‌: ಗಂಗೂಲಿ ಸುಳಿವು

ಮುಂಬಯಿ: ಹದಿಮೂರನೇ ಐಪಿಎಲ್‌ ಭವಿಷ್ಯವೇನು ಎಂಬುದು ಶನಿವಾರದ ಬಿಸಿಸಿಐ ಹಾಗೂ ಫ್ರಾಂಚೈಸಿಗಳ ನಡುವಿನ ಸಭೆಯಲ್ಲಿ ಪ್ರಶ್ನೆಯಾಗಿಯೇ ಉಳಿಯಿತು. ಈ ಬಾರಿ ಐಪಿಎಲ್‌ ನಡೆಯುತ್ತದೋ ಇಲ್ಲವೋ ಎಂಬುದು ಕೂಡ ಇತ್ಯರ್ಥಗೊಳ್ಳಲಿಲ್ಲ. ಆದರೆ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, “ಈ ಐಪಿಎಲ್‌ ನಡೆದರೆ ಅದು ಚುಟುಕಾಗಿರುತ್ತದೆ’ ಎಂಬ ಸುಳಿವು ನೀಡಿದರು.

ಮಾ. 29ರಂದು ಆರಂಭವಾಗಬೇಕಿದ್ದ ಈ ಬಾರಿಯ ಐಪಿಎಲ್‌ ಪಂದ್ಯಾವಳಿಯನ್ನು ಬಿಸಿಸಿಐ ಎ. 15ರ ತನಕ ಅಮಾನತಿನಲ್ಲಿರಿಸಿದೆ. ಅನಂತರ ಐಪಿಎಲ್‌ ಸಭೆ ನಡೆದಿದ್ದು, ಇದರಲ್ಲಿ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಎಲ್ಲ ಫ್ರಾಂಚೈಸಿಗಳ ಮಾಲಕರು, ಐಪಿಎಲ್‌ ಹಾಗೂ ಬಿಸಿಸಿಐ ಅಧಿಕಾರಿಗಳೆಲ್ಲ ಈ ಸಭೆಯಲ್ಲಿ ಭಾಗವಹಿಸಿದ್ದರು. ಐಪಿಎಲ್‌ ಬೇಕು, ಆದರೆ ಕ್ರಿಕೆಟಿಗರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಮೊದಲ ಆದ್ಯತೆ ಎಂಬುದು ಎಲ್ಲರ ಅಭಿಪ್ರಾಯವಾಗಿತ್ತು.

ಮೇ 31ರ ತನಕ ವಿಸ್ತರಣೆ?
ಬಿಸಿಸಿಐ ನಿರ್ಧಾರದಂತೆ ಐಪಿಎಲ್‌ ಆರಂಭದಲ್ಲಿ 18 ದಿನ ವಿಳಂಬವಾಗಲಿದೆ. ಆದರೆ ಇದು ನಡೆಯುವ ಬಗ್ಗೆ ಯಾವುದೇ ಖಾತರಿ ಇಲ್ಲ. ಎ. 20ರ ತನಕ ಕಾದು ನೋಡಿ ಕೂಟವನ್ನು ನಡೆಸಬಹುದು. ಅನಂತರ ಪೂರ್ಣ ಪ್ರಮಾಣದಲ್ಲಿ ನಡೆಸುವುದು ಅಸಾಧ್ಯವಾಗುತ್ತದೆ. ಹೀಗಾಗಿ ಮೇ 24ರಂದು ಮುಗಿಯುವ ಕೂಟವನ್ನು ಮೇ 31ರ ತನಕ ವಿಸ್ತರಿಸುವ ಪ್ರಸ್ತಾವ ಕೂಡ ಬಿಸಿಸಿಐ ಮುಂದಿತ್ತು. ಆದರೆ ಸಭೆಯಲ್ಲಿ ಈ ಕುರಿತೂ ಖಚಿತ ನಿರ್ಧಾರಕ್ಕೆ ಬರಲಾಗಲಿಲ್ಲ.

“ನಾವು ಎಲ್ಲ ಸಂಗತಿಗಳನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. 18 ದಿನಗಳ ವಿಳಂಬ ವೆಂದರೆ ಆಗ ಪಂದ್ಯಾವಳಿಯನ್ನು ಕಿರಿದು ಗೊಳಿಸಲೇ ಬೇಕಾಗುತ್ತದೆ. ಆದರೆ ಇದು ಹೇಗೆ, ಆಗ ಎಷ್ಟು ಪಂದ್ಯಗಳಿರುತ್ತವೆ… ಎಂಬುದನ್ನೆಲ್ಲ ನನಗೀಗ ಹೇಳಲು ಸಾಧ್ಯವಿಲ್ಲ’ ಎಂದು ಸೌರವ್‌ ಗಂಗೂಲಿ ತಿಳಿಸಿದರು.

“ಎಲ್ಲ ಫ್ರಾಂಚೈಸಿಗಳ ಮಾಲಕರೊಂದಿಗೆ ಮಾತುಕತೆ ನಡೆಸಿ, ಅವರ ಅಭಿಪ್ರಾಯಗಳನ್ನು ಕ್ರೋಡೀಕರಿಸಿದ ಬಳಿಕ ಸ್ಪಷ್ಟ ನಿರ್ಧಾರವೊಂದಕ್ಕೆ ಬರಲಾಗುವುದು. ಇದಕ್ಕೆ ಇನ್ನೂ ಕಾಲಾವಕಾಶವಿದೆ’ ಎಂದು ಗಂಗೂಲಿ ಹೇಳಿದರು.

ದೇಶಿ ಕ್ರಿಕೆಟ್‌ ಕೂಟಗಳಿಗೂ
ಕೊರೊನಾ ಕಂಟಕ
ಕೊರೊನಾ ಭೀತಿಯಿಂದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ರದ್ದುಗೊಳಿಸಿದ ಒಂದೇ ದಿನದಲ್ಲಿ ಪ್ರಸಕ್ತ ಋತುವಿನ ಯಾವುದೇ ದೇಶಿ ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಡಿಸದಿರಲು ಬಿಸಿಸಿಐ ನಿರ್ಧರಿಸಿದೆ. ಇದರಲ್ಲಿ ರಣಜಿ ಚಾಂಪಿಯನ್‌ ಸೌರಾಷ್ಟ್ರ ಮತ್ತು ಶೇಷ ಭಾರತ ತಂಡಗಳ ನಡುವಿನ ಇರಾನಿ ಕಪ್‌ ಪಂದ್ಯವೂ ಸೇರಿದೆ.

ಶನಿವಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಈ ನಿರ್ಧಾರವನ್ನು ಪ್ರಕಟಿಸಿದರು. ಉಳಿದಂತೆ ವಿಜಿ ಟ್ರೋಫಿ, ವನಿತೆಯರ ಸೀನಿಯರ್‌ ಏಕದಿನ ನಾಕೌಟ್‌ ಹಾಗೂ ಏಕದಿನ ಚಾಲೆಂಜರ್‌ ಸರಣಿಗಳು ಇದರಲ್ಲಿ ಸೇರಿವೆ.

ಮುಂದಿನ ಆದೇಶದ ತನಕ ವನಿತೆಯರ ಜೂನಿಯರ್‌ ಕ್ರಿಕೆಟ್‌ ಟೂರ್ನಿಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಇದರಲ್ಲಿ ಅಂಡರ್‌-19 ಏಕದಿನ ನಾಕೌಟ್‌, ಅಂಡರ್‌-19 ಟಿ20 ಲೀಗ್‌, ಸೂಪರ್‌ ಲೀಗ್‌ ಮತ್ತು ನಾಕೌಟ್‌, ಅಂಡರ್‌-19 ಟಿ20 ಚಾಲೆಂಜರ್‌ ಟ್ರೋಫಿ, ಅಂಡರ್‌-23 ನಾಕೌಟ್‌ ಮತ್ತು ಏಕದಿನ ಚಾಲೆಂಜರ್‌ ಪಂದ್ಯಾವಳಿಗಳು ಸೇರಿವೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.