- Wednesday 11 Dec 2019
ಸೌತ್ ಏಶ್ಯನ್ ಗೇಮ್ಸ್: ಆ್ಯತ್ಲೆಟಿಕ್ಸ್ ನಲ್ಲಿ ಭಾರತಕ್ಕೆ 10 ಪದಕ
Team Udayavani, Dec 3, 2019, 11:57 PM IST
ಕಾಠ್ಮಂಡು: ಇಲ್ಲಿ ಸಾಗುತ್ತಿರುವ 13ನೇ ಸೌತ್ ಏಶ್ಯನ್ ಗೇಮ್ಸ್ನ ಆ್ಯತ್ಲೆಟಿಕ್ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಅರ್ಚನಾ ಸುಶೀಂದ್ರನ್, ಎಂ. ಜಸ್ನಾ, ಸರ್ವೇಶ್ ಅನಿಲ್ ಕುಶಾರೆ ಮತ್ತು ಅಜಯ್ ಕುಮಾರ್ ಸರೋಜ್ ಆ್ಯತ್ಲೆಟಿಕ್ಸ್ ಸ್ಪರ್ಧೆಯ ಮೊದಲ ದಿನ ಚಿನ್ನ ಗೆದ್ದ ಸಾಧಕರಾಗಿದ್ದಾರೆ.
ಅತೀ ವೇಗದ ಓಟಗಾರ್ತಿ
ವನಿತೆಯರ 100 ಮೀ. ಓಟದಲ್ಲಿ ಅರ್ಚನಾ ಸುಶೀಂದ್ರನ್ 11.80 ಸೆ.ನಲ್ಲಿ ಗುರಿ ತಲುಪಿ ಗೇಮ್ಸ್ ನ ಅತೀವೇಗದ ಓಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಶ್ರೀಲಂಕಾದ ತನುಜಿ ಅಮಶಾ ಬೆಳ್ಳಿ ಮತ್ತು ಲಕ್ಷಿಕಾ ಸುಗಂದ್ ಕಂಚು ಗೆದ್ದಿದ್ದಾರೆ. ವನಿತೆಯರ ಹೈಜಂಪ್ನಲ್ಲಿ ಜಸ್ನಾ 1.73 ಮೀ. ಹಾರಿ ಚಿನ್ನ ತಮ್ಮದಾಗಿಸಿಕೊಂಡರೆ ರಬಿನಾ ಯಾದವ್ ಕಂಚು ಪಡೆದರು. ಪುರುಷರ ಹೈಜಂಪ್ನ ಚಿನ್ನವೂ ಭಾರತದ ಪಾಲಾಯಿತು. ಸರ್ವೇಶ್ ಕುಶಾರೆ 2.21 ಮೀ. ಹಾರಿ ಚಿನ್ನ ಪಡೆದರೆ ಚೇತನ್ ಬಾಲಸುಬ್ರಹ್ಮಣ್ಯ ಬೆಳ್ಳಿ ಗೆದ್ದರು. ಈ ಮೂಲಕ ಭಾರತ ಚಿನ್ನ, ಬೆಳ್ಳಿ ಗೆಲ್ಲುವಂತಾಯಿತು.
ಪುರುಷರ 1,500 ಮೀ.ನಲ್ಲಿ ಅಜಯ್ ಕುಮಾರ್ ಸರೋಜ್ 3:54.18 ಸೆ.ನಲ್ಲಿ ಗುರಿ ತಲುಪಿ ಚಿನ್ನ ಪಡೆದರೆ ಅಜೀತ್ ಕುಮಾರ್ ಬೆಳ್ಳಿ ಜಯಿಸಿದರು. ನೇಪಾಲದ ಟಿಂಕ ಕಾರ್ಕಿ ಕಂಚು ಪಡೆದರು. ಕವಿತಾ ಯಾದವ್ ವನಿತೆಯರ 10,000 ಮೀ. ಓಟದಲ್ಲಿ ಭಾರತಕ್ಕೆ ಇನ್ನೊಂದು ಬೆಳ್ಳಿ ದೊರಕಿಸಿಕೊಟ್ಟರು.
ಈ ಮೊದಲು ವನಿತೆಯರ 1,500 ಮೀ.ನಲ್ಲಿ ಭಾರತದ ಚಂದಾ ಬೆಳ್ಳಿ ಗೆದ್ದರೆ ತಂಡ ಸದಸ್ಯೆ ಚಿತ್ರಾ ಪಲಕೀಝ್ ಕಂಚು ಪಡೆದರು.
ಆ್ಯತ್ಲೆಟಿಕ್ಸ್ ಸ್ಪರ್ಧೆಯ ಮೊದಲ ದಿನ ಭಾರತ 4 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ.
ಶೂಟಿಂಗ್: 4 ಚಿನ್ನ
ಭಾರತೀಯ ಶೂಟರ್ಗಳು ನಾಲ್ಕು ಚಿನ್ನ ಸಹಿತ 9 ಪದಕ ಗೆದ್ದುಕೊಂಡಿದ್ದಾರೆ. 19ರ ಹರೆಯದ ಮೆಹುಲಿ, ಚೈನ್ ಸಿಂಗ್, ಯೊಗೇಶ್ ಸಿಂಗ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದರೆ 10 ಮೀ. ಏರ್ರೈಫಲ್ನಲ್ಲಿ ಭಾರತೀಯ ತಂಡ ಚಿನ್ನ ಜಯಿಸಿದೆ. ಫೈನಲ್ನಲ್ಲಿ ಮೆಹುಲಿ 253.3 ಅಂಕ ಗಳಿಸಿ ಚಿನ್ನ ಗೆದ್ದರು. ಇದು ಹಾಲಿ ವಿಶ್ವದಾಖಲೆಯ ಸಾಧನೆಗಿಂತ (252.9) 0.4 ಅಂಕ ಹೆಚ್ಚು. ಈ ವಿಶ್ವದಾಖಲೆ ಭಾರತೀಯ ಶೂಟರ್ ಅಪೂರ್ವ ಚಾಂಡೇಲ ಅವರ ಹೆಸರಲ್ಲಿದೆ.
ಒಟ್ಟಾರೆ 18 ಚಿನ್ನ ಸಹಿತ 43 ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಈ ವಿಭಾಗದಿಂದ ಇನ್ನಷ್ಟು
-
ಮುಂಬಯಿ: ಈಗಾಗಲೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿರುವ ಭಾರತ ಮತ್ತು ವೆಸ್ಟ್ಇಂಡೀಸ್ ಟಿ20 ಸರಣಿಯ ಕಿರೀಟಕ್ಕಾಗಿ ಬುಧವಾರ ವಾಂಖೆಡೆ ಮೈದಾನದಲ್ಲಿ...
-
ದಿಂಡಿಗಲ್ (ತ.ನಾ.): ವಾರಗಳ ಹಿಂದೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಕೆ.ಗೌತಮ್ ಅವರ ಆಲ್ರೌಂಡ್ ಪರಾಕ್ರಮದಿಂದಾಗಿ ಆತಿಥೇಯ ತಮಿಳುನಾಡು ವಿರುದ್ಧ ಕರ್ನಾಟಕ...
-
ಗ್ವಾಂಗ್ಝೂ: ಭಾರತದ ಸ್ಟಾರ್ ಶಟ್ಲರ್ ಮತ್ತು ಹಾಲಿ ಚಾಂಪಿ ಯನ್ ಆಗಿರುವ ಪಿ.ವಿ. ಸಿಂಧು ಬುಧವಾರದಿಂದ ಆರಂಭವಾಗುವ ವರ್ಷಾಂತ್ಯದ ಬಿಡಬ್ಲ್ಯುಎಫ್ ವಿಶ್ವ ಟೂರ್...
-
ಕಾಠ್ಮಂಡು: ಭಾರತೀಯ ಕ್ರೀಡಾಪಟುಗಳು ಸೌತ್ ಏಶ್ಯನ್ ಗೇಮ್ಸ್ ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಒಟ್ಟಾರೆ 312 ಪದಕ ಗೆಲ್ಲುವ ಮೂಲಕ ಸತತ 13ನೇ...
-
ಮಂಗಳೂರು: ಕಜಕಿಸ್ಥಾನದಲ್ಲಿ ನಡೆದ ಏಶ್ಯನ್ ಪವರ್ಲಿಫ್ಟಿಂಗ್ ಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಚಿನ್ನ, ಬೆಳ್ಳಿ ಪದಕ ಗೆದ್ದ ಪವರ್ಲಿಫ್ಟರ್ಗಳನ್ನು...
ಹೊಸ ಸೇರ್ಪಡೆ
-
ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ...
-
ಸುರಪುರ: ತಾಲೂಕಿನ ಯಕ್ತಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಪ್ರತಿಭಾವಂತ ವಿದ್ಯಾರ್ಥಿ ಅಂಕಪಟ್ಟಿ ತಿದ್ದುಪಡಿ ಮಾಡಿದ ಪ್ರಧಾನ ಶಿಕ್ಷಕರ...
-
ದೇಶ ಕಾಯುವ ಯೋಧರು ನಮ್ಮನ್ನು ಶತ್ರುಗಳಿಂದ ರಕ್ಷಿಸಿದರೆ, ಹೊಲ ಉಳುವ ರೈತ ನಮಗೆಲ್ಲಾ ಅನ್ನದಾತ, ಹಸಿವಿನಿಂದ ನಮ್ಮನ್ನು ರಕ್ಷಿಸುವ ದೇವದೂತ. ಅಂತಹ ರೈತರನ್ನು ಸ್ಮರಿಸುವುದು...
-
ಚಂದ್ರಶೇಖರ ಯರದಿಹಾಳ ಸಿಂಧನೂರು: ಸಿಂಧನೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ವಿವಿಧ ಸರ್ಕಾರಿ ಕಚೇರಿ, ಬ್ಯಾಂಕ್ಗಳ ಎದುರು ಸವಾರರು ಅಡ್ಡಾದಿಡ್ಡಿ ಬೈಕ್ ನಿಲುಗಡೆ...
-
ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಕರೆ ಮೇರೆಗೆ ಮಂಗಳವಾರ ಜಿಲ್ಲೆಯ ಖಾಸಗಿ ಶಿಕ್ಷಣ...