ಶ್ರೀಲಂಕಾ ವಿರುದ್ಧ ಸೋಲಿಗೆ ನೋಬಾಲ್ ಕಾರಣ: ಶಕಿಬ್ ಅಲ್ ಹಸನ್
Team Udayavani, Sep 2, 2022, 11:28 PM IST
ಶಾರ್ಜಾ: ನಮ್ಮ ಬೌಲರ್ಗಳು ಸಾಕಷ್ಟು ನೋಬಾಲ್ ಹಾಕಿದ್ದರಿಂದ ಶ್ರೀಲಂಕಾ ವಿರುದ್ಧ ಸೋಲು ಕಾಣುವಂತಾಯಿತು ಎಂದು ಬಾಂಗ್ಲಾದೇಶ ನಾಯಕ ಶಕಿಬ್ ಅಲ್ ಹಸನ್ ಹೇಳಿದ್ದಾರೆ.
ಮಹೆದಿ ಹಸನ್ ಅವರು ಎಸೆದ ನೋಬಾಲ್ನಿಂದ ಕುಸಲ್ ಮೆಂಡಿಸ್ ಜೀವದಾನ ಪಡೆದರು. ಅವರು ನಾಲ್ಕು ಬಾರಿ ಜೀವದಾನ ಪಡೆದಿದ್ದರು. ಇದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಶಕಿಬ್ ತಿಳಿಸಿದರು. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 2 ವಿಕೆಟ್ಗಳಿಂದ ಸೋತ ಕಾರಣ ಬಾಂಗ್ಲಾ ಸೂಪರ್ ಫೋರ್ ಹಂತಕ್ಕೇರಲು ವಿಫಲವಾಯಿತು.