ಒಡೆದ ಗಾಜು: ಗಾವಸ್ಕರ್,ಮಾಂಜ್ರೇಕರ್ ಪಾರು
Team Udayavani, Nov 8, 2018, 6:55 AM IST
ಲಕ್ನೋ: ಮಂಗಳವಾರ ಭಾರತ-ವೆಸ್ಟ್ಇಂಡೀಸ್ ನಡುವೆ ಮಂಗಳವಾರ ನಡೆದ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಹಾಗೂ ಸಂಜಯ್ ಮಾಂಜ್ರೇಕರ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಕ್ನೋದಲ್ಲಿ ನೂತನವಾಗಿ ನಿರ್ಮಾಣವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಕಾಮೆಂಟರಿ ಬಾಕ್ಸ್ಗೆ ಇವರಿಬ್ಬರೂ ಪ್ರವೇಶಿಸುವ ವೇಳೆ ಕಾಮೆಂಟರಿ ಬಾಕ್ಸ್ನ ಗಾಜಿನ ಬಾಗಿಲು ಒಡೆದ ಘಟನೆ ಸಂಭವಿಸಿದೆ. ಆದರೆ ಒಂದು ಬಾಗಿಲು ಪುಡಿ ಪುಡಿಯಾಯಿತು. ಅದೃಷ್ಣವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ ಎಂದು ಘಟನೆಯ ಬಳಿಕ ಮಾಂಜ್ರೆàಕರ್ ತಿಳಿಸಿದ್ದಾರೆ.