“ಶ್ರೀಶಾಂತ್‌ ಫೀಲ್ಡಿಂಗ್‌ ಬಗ್ಗೆ  ಹೆದರಿಕೆ ಇದ್ದಿತ್ತು’


Team Udayavani, Sep 25, 2017, 11:41 AM IST

25-STATE-18.jpg

ಹೊಸದಿಲ್ಲಿ: “ನನಗೆ ಶ್ರೀಶಾಂತ್‌ನದೇ ಹೆದರಿಕೆ ಇದ್ದಿತ್ತು. ಆತನ ಕ್ಯಾಚಿಂಗ್‌ ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ ಆತನ ಆ ಅದ್ಭುತ ಕ್ಯಾಚ್‌ ಮೂಲಕ ಭಾರತ ಟಿ-20 ವಿಶ್ವಕಪ್‌ ಜಯಿಸಿದ್ದನ್ನು ಮರೆ ಯುವಂತಿಲ್ಲ…’ ಎಂದು ಮೆಲುಕು ಹಾಕಿದವರು ಭಾರತದ ಸ್ಟಾರ್‌ ಕ್ರಿಕೆಟರ್‌ ಯುವರಾಜ್‌ ಸಿಂಗ್‌. 

ಸಂದರ್ಭ, ಭಾರತದ ಟಿ-20 ವಿಶ್ವಕಪ್‌ ಗೆಲುವಿನ 10ನೇ ವರ್ಷಾಚರಣೆ. ಸೆ. 24ರ ರವಿವಾರ ಧೋನಿ ಸಾರಥ್ಯದ ಭಾರತ ತಂಡದ ಟಿ-20 ವಿಶ್ವಕಪ್‌ ಗೆಲುವಿಗೆ ಸರಿಯಾಗಿ 10 ವರ್ಷ ತುಂಬಿತು. 2007ರ ಇದೇ ದಿನಾಂಕದಂದು ಜೊಹಾನ್ಸ್‌ಬರ್ಗ್‌ನ “ವಾಂಡರರ್ ಸ್ಟೇಡಿಯಂ’ನಲ್ಲಿ ಸಾಂಪ್ರದಾಯಕ ಎದುರಾಳಿ ಪಾಕಿಸ್ಥಾನವನ್ನು 5 ರನ್ನುಗಳಿಂದ ರೋಮಾಂಚಕಾರಿ ಯಾಗಿ ಸೋಲಿಸುವ ಮೂಲಕ ಭಾರತ ಚೊಚ್ಚಲ ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಿಸಿತು. ಈ ಸಂದರ್ಭ ವಿಜೇತ ತಂಡದ ಅಂದಿನ ಸದಸ್ಯ ಯುವ ರಾಜ್‌ ಸಿಂಗ್‌ ಪಂದ್ಯದ ಅಂತಿಮ ಓವರನ್ನು ಕಣ್ಮುಂದೆ ಬಿಡಿಸಿಟ್ಟಿದ್ದಾರೆ.

ಆ ಕ್ಷಣ ಹೀಗಿತ್ತು. ಪಾಕಿಸ್ಥಾನದ ಗೆಲುವಿಗೆ ಅಂತಿಮ ಓವರಿನಲ್ಲಿ 13 ರನ್‌ ಬೇಕಿತ್ತು. ಕೈಲಿದ್ದುದು ಒಂದೇ ವಿಕೆಟ್‌. ಆದರೆ ಅಪಾಯಕಾರಿ ಬ್ಯಾಟ್ಸ್‌ ಮನ್‌ ಮಿಸ್ಬಾ ಉಲ್‌ ಹಕ್‌ ಸ್ಟ್ರೈಕಿಂಗ್‌ ತುದಿಯಲ್ಲಿದ್ದರು. ಆಗಲೇ 37 ರನ್‌ ಮಾಡಿದ್ದರು. ಜತೆಗಾರ ಮೊಹಮ್ಮದ್‌ ಆಸಿಫ್. ಬೌಲರ್‌, ಮಧ್ಯಮ ವೇಗಿ ಜೋಗಿಂದರ್‌ ಶರ್ಮ. ಶರ್ಮ ಎಸೆದ ಮೊದಲ ಎಸೆತವೇ ವೈಡ್‌. ಅನಂತರದ ಎಸೆತದಲ್ಲಿ ರನ್‌ ಬರಲಿಲ್ಲ. ಮುಂದಿನದು ಫ‌ುಲ್‌ಟಾಸ್‌. ಇದನ್ನು ಮಿಸ್ಬಾ ನೇರವಾಗಿ ಸಿಕ್ಸರ್‌ಗೆ ರವಾನಿಸಿದರು. ಮುಂದಿನದು ಇತಿಹಾಸ. 4 ಎಸೆತಗಳಿಂದ ಕೇವಲ 6 ರನ್‌ ತೆಗೆಯಬೇಕಿದ್ದ ಹೊತ್ತಿನಲ್ಲಿ ಮಿಸ್ಬಾ “ರಿಸ್ಕಿ ಶಾಟ್‌’ ಒಂದಕ್ಕೆ ಮುಂದಾದರು. ಶಾರ್ಟ್‌ ಫೈನ್‌ ಲೆಗ್‌ ಮೂಲಕ ಸ್ಕೂಪ್‌ ಶಾಟ್‌ ಬಾರಿಸಲು ಹೋಗಿ ಅಲ್ಲಿ ಹೊಂಚುಹಾಕಿ ನಿಂತಿದ್ದ ಶ್ರೀಶಾಂತ್‌ಗೆ ಕ್ಯಾಚ್‌ ನೀಡಿದರು. ಈ ಸಂದರ್ಭವನ್ನು ಯುವರಾಜ್‌ ಸಿಂಗ್‌ ಮಾತುಗಳಲ್ಲೇ ಕೇಳಿ…

“ನಾನು ಕಣ್ಣು ಮುಚ್ಚಿಕೊಂಡಿದ್ದೆ’ “ಓಹ್‌! ಅದೊಂದು ನಂಬಲಾಗದ ಕ್ಷಣ. ಮಿಸ್ಬಾ ಆ ಹೊಡೆತವನ್ನು ಯಾವುದೇ ರೀತಿಯಲ್ಲಿ ಬಾರಿಸುವ ಸಾಧ್ಯತೆ ಇದ್ದಿತ್ತು. ಏಕೋ ಸ್ಕೂಪ್‌ ಶಾಟ್‌ಗೆ ಮುಂದಾದರು. ಆದರೆ ಆ ಕ್ಷಣದಲ್ಲಿ ಶ್ರೀಶಾಂತ್‌ನನ್ನು ಕಂಡ ನಾನು ಒಮ್ಮೆಲೇ ಕಣ್ಣು ಮುಚ್ಚಿಕೊಂಡೆ. ಏಕೆಂದರೆ, ಆತ ಕ್ಯಾಚ್‌ ಬಿಡುವುದರಲ್ಲಿ ಹೆಸರುವಾಸಿ. ಅಷ್ಟೇ ಅನಿಶ್ಚಿತ ಆಟ ಗಾರನೂ ಹೌದು. ಆತ ಕ್ಯಾಚನ್ನು ಪಡೆದೇ ಬಿಟ್ಟ, ಜತೆಗೆ ವಿಶ್ವಕಪ್‌ ಅನ್ನೂ ತಂದಿತ್ತ…’ ಎಂದು ಯುವರಾಜ್‌ ಆ ಕ್ಷಣವನ್ನು ನೆನಪಿಸಿಕೊಂಡರು.

ಹರ್ಭಜನ್‌ ಹಿಂದೇಟು
“ನಿಜಕ್ಕಾದರೆ ಅಂದಿನ ಕೊನೆಯ ಓವರನ್ನು ಹರ್ಭಜನ್‌ ಸಿಂಗ್‌ ಎಸೆಯಬೇಕಿತ್ತು. ಧೋನಿ ಯೋಜನೆಯೂ ಇದೇ ಆಗಿತ್ತು. ಆದರೆ ಆಗ ಧೋನಿ ಬಳಿ ಬಂದ ಹರ್ಭಜನ್‌, ಸ್ಪಿನ್‌ ಯಾರ್ಕರ್‌ ಯಶಸ್ವಿಯಾದೀತೆಂಬ ನಂಬಿಕೆ ತನ್ನಲ್ಲಿಲ್ಲ ಎಂದರು. ಧೋನಿ ಚೆಂಡನ್ನು “ಜೋಗಿ’ಯತ್ತ ಎಸೆದರು. ಥ್ಯಾಂಕ್ಸ್‌ ಟು ಮಿಸ್ಬಾ, ನಾವು ಇತಿಹಾಸ ನಿರ್ಮಿಸಿ ದೆವು…’ ಎಂದ ಯುವರಾಜ್‌, ಭಾರತದ ವಿಶ್ವಕಪ್‌ ಗೆಲುವಿನ ಶ್ರೇಯವನ್ನು ಬೌಲರ್‌ಗಳಿಗೆ ಅರ್ಪಿಸಿದರು.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.