ಶ್ರೀಕಾಂತ್, ಸೈನಾ, ಚಿರಾಗ್ ಜೋಡಿಗೆ ಗೆಲುವು
ಪಂದ್ಯ ತ್ಯಜಿಸಿದ ಗಾಯಾಳು ಕಶ್ಯಪ್. ಸೌರಭ್ ವರ್ಮ ಪರಾಭವ
Team Udayavani, Jan 14, 2021, 6:20 AM IST
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕೆ. ಶ್ರೀಕಾಂತ್, ಸೈನಾ ನೆಹ್ವಾಲ್ ಚಿರಾಗ್ ಶೆಟ್ಟಿ-ಸಾತ್ವಿಕ್ ಗೆಲುವಿನ ಆರಂಭ ಪಡೆದಿದ್ದಾರೆ. ಆದರೆ ಪಾರುಪಳ್ಳಿ ಕಶ್ಯಪ್ ಗಾಯಾಳಾಗಿ ಪಂದ್ಯವನ್ನು ತ್ಯಜಿಸುವ ಸಂಕಟಕ್ಕೆ ಸಿಲುಕಿದರು.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪಿ. ಕಶ್ಯಪ್ ಕೆನಡಾದ ಜಾಸನ್ ಆ್ಯಂಟನಿ ಹೋ ಸೇ ವಿರುದ್ಧ 3ನೇ ಗೇಮ್ನಲ್ಲಿ ತೀವ್ರ ಸ್ನಾಯು ಸೆಳೆತಕ್ಕೆ ಸಿಲುಕಿ ಪಂದ್ಯ ತ್ಯಜಿಸಿದರು. ಆಗ ಅವರು 8-14ರ ಹಿನ್ನಡೆಯಲ್ಲಿದ್ದರು. ಮೊದಲ ಗೇಮ್ ಕಳೆದುಕೊಂಡ ಕಶ್ಯಪ್ (9-21), ದ್ವಿತೀಯ ಗೇಮ್ನಲ್ಲಿ ತೀವ್ರ ಪೈಪೋಟಿ ನೀಡಿ 21-13ರಿಂದ ಪಂದ್ಯವನ್ನು ಸಮಬಲಕ್ಕೆ ತಂದಿದ್ದರು.
ಮತ್ತೂಂದು ಸಿಂಗಲ್ಸ್ ಮುಖಾ ಮುಖೀ ಕೆ. ಶ್ರೀಕಾಂತ್-ಸೌರಭ್ ವರ್ಮ ನಡುವಿನ “ಆಲ್ ಇಂಡಿಯನ್ ಮ್ಯಾಚ್’ ಆಗಿತ್ತು. ಇದನ್ನು ಶ್ರೀಕಾಂತ್ 21-12, 21-11 ಅಂತರದಿಂದ ಸುಲಭದಲ್ಲಿ ಗೆದ್ದರು.
ಚಿರಾಗ್-ಸಾಯಿರಾಜ್ ಜಯ :
ಭಾರತದ ಸ್ಟಾರ್ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ದಕ್ಷಿಣ ಕೊರಿಯಾದ ಕಿಮ್ ಜಿ ಗೀ-ಲೀ ಯೋಂಗ್ ಡೇ ವಿರುದ್ಧ 19-21, 21-16, 21-14 ಅಂತರದಿಂದ ಗೆಲುವು ಸಾಧಿಸಿದರು. ಆದರೆ ಪುರುಷರ
ವಿಭಾಗದ ಮತ್ತೂಂದು ಜೋಡಿ :
ಅರ್ಜುನ್ ಮಡತಿಲ್ ರಾಮ ಚಂದ್ರನ್ ಮತ್ತು ಧ್ರುವ ಕಪಿಲ ಮಲೇಶ್ಯದ ಓಂಗ್ ಯ್ಯೂ ಸಿನ್-ಟಿಯೋ ಇ ಯಿ ವಿರುದ್ಧ 13-21, 21-8, 24-22 ಅಂತರದಿಂದ ಪರಾಭವಗೊಂಡಿತು.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಎನ್. ಸಿಕ್ಕಿ ರೆಡ್ಡಿ-ಸುಮೀತ್ ರೆಡ್ಡಿ ಕೂಡ ಸೋಲನುಭವಿಸಿದರು. ಇವರ ವಿರುದ್ಧ ಹಾಂಕಾಂಗ್ನ ಚುಂಗ್ ಮ್ಯಾನ್ ಥಾಂಗ್-ಯೋಂಗ್ ಸೂಟ್ ತ್ಸೆ 22-20, 21-17 ನೇರ ಗೇಮ್ಗಳ ಜಯ ಸಾಧಿಸಿದರು.
ದ್ವಿತೀಯ ಸುತ್ತು ತಲುಪಿದ ಸೈನಾ ನೆಹ್ವಾಲ್ ;
ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರದ ಪಂದ್ಯದಲ್ಲಿ ಮಲೇಶ್ಯದ ಸೆಲ್ವದುರೈ ಕಿಸೋನಾ ವಿರುದ್ಧ 21-15, 21-15 ನೇರ ಗೇಮ್ಗಳ ಜಯ ಸಾಧಿಸಿದರು. ಅವರಿನ್ನು ಆತಿಥೇಯ ನಾಡಿನ ಬುಸಾನನ್ ಒಂಗ್ಬಾಮ್ರುಂಗಫಾನ್ ವಿರುದ್ಧ ಸೆಣಸಲಿದ್ದಾರೆ.
“ಮಂಗಳವಾರದ ಕೊರೊನಾ ವರದಿಯಲ್ಲಿ ಪಾಸಿಟಿವ್ ಫಲಿತಾಂಶದ ಆಘಾತಕ್ಕೆ ಸಿಲುಕಿದ್ದೆ. ನನಗೆ ಕಳೆದ ನವೆಂಬರ್ನಲ್ಲೇ ಕೊರೊನಾ ಬಂದು ಹೋಗಿದೆ, ನಾನು ಚೇತರಿಸಿಕೊಂಡಿದ್ದೇನೆ ಎಂದು ಮನದಟ್ಟು ಮಾಡಿದೆ. ಕೊನೆಗೆ ನನ್ನ ರಕ್ತ ಪರೀಕ್ಷೆ ಹಾಗೂ ಎಕ್ಸ್-ರೇ ಪರಿಶೀಲಿಸಿದ ವೈದ್ಯರು ಓಕೆ ಹೇಳಿದರು. ನನ್ನಲ್ಲಿ ಕೋವಿಡ್ನ ಯಾವುದೇ ಲಕ್ಷಣವಿಲ್ಲ. ವೈದ್ಯರಿಗೆ ಕೃತಜ್ಞತೆಗಳು’ ಎಂದು ಗೆಲುವಿನ ಬಳಿಕ ಸೈನಾ ಹೇಳಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani
Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??
ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ
ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು
ಹೊಸ ಸೇರ್ಪಡೆ
ಕೃಷಿ ಸಚಿವರಿಂದ ಬಿಡುಗಡೆಕಾರ್ಲಕಜೆ ಅಕ್ಕಿ
ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ
ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು
2ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ, 447 ಫಲಾನುಭವಿಗಳಲ್ಲಿ ಅಡ್ಡಪರಿಣಾಮ ಪತ್ತೆ: ಕೇಂದ್ರ
ಮಹಾರಾಷ್ಟ್ರದಲ್ಲಿ ಸಾವಿರ ಮುಖ್ಯಮಂತ್ರಿ ಬಂದರೂ ಬೆಳಗಾವಿ ಕರ್ನಾಟದಲ್ಲೇ ಇರುತ್ತದೆ: ಸವದಿ