ರಾಜ್ಯ ಮಟ್ಟದ ಕಬಡ್ಡಿ: ಕಡಬ ಸರಸ್ವತಿ ವಿದ್ಯಾಲಯ ಪ್ರಥಮ
Team Udayavani, Aug 24, 2017, 9:07 AM IST
ಕಡಬ: ವಿದ್ಯಾಭಾರತಿ ಅಖೀಲ ಭಾರತ ಶಿಕ್ಷಾ ಸಂಸ್ಥಾನ ಇದರ ಆಶ್ರಯದಲ್ಲಿ ಗುಲ್ಬರ್ಗದ ಸೇಡಂನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಡಬದ ಸರಸ್ವತಿ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಸ್ಥಾನಗಳಿಸಿ, ಅಂತಾರಾಜ್ಯ ಕಬಡ್ಡಿ ಸ್ಪರ್ಧೆಗೆ ಆಯ್ಕೆಗೊಂಡಿದೆ.
ರಾಜ್ಯ ಮಟ್ಟದ ತರುಣರ ವಿಭಾಗದ ಸ್ಪರ್ಧೆಯಲ್ಲಿ ಕಡಬ ಸರಸ್ವತಿ ವಿದ್ಯಾಲಯದ ಕಬಡ್ಡಿ ತಂಡದಲ್ಲಿ ವಿದ್ಯಾರ್ಥಿಗಳಾದ ನಿತೇಶ್, ಹರ್ಷಿತ್, ಸಂತೋಷ್, ಅಕ್ಷತ್, ರತನ್, ಡಿತೀನ್, ಪ್ರತೀಕ್, ಯತೀನ್, ದುರ್ಗಾಪ್ರಸಾದ್, ಕಾರ್ತಿಕ್ ಭಾಗವಹಿಸಿದ್ದರು. ಈ ಕಬಡ್ಡಿ ತಂಡಕ್ಕೆ ಶಾಲಾ ದೈಹಿಕ ಶಿಕ್ಷಕ ಲಕ್ಷ್ಮೀಶ ಆರಿಗ, ಶಿಕ್ಷಕ ಶಿವಪ್ರಸಾದ್ ಹಾಗೂ ಕೋಚ್ ಶೇಖರ ಪೂಜಾರಿ ಬೈಲಂಗಡಿ ತರಬೇತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ