ಕೆಕೆಆರ್‌ಗೆ 48 ರನ್‌ ಸೋಲು; ಡೇವಿಡ್‌ ವಾರ್ನರ್‌ ಭರ್ಜರಿ ಶತಕ


Team Udayavani, May 1, 2017, 11:37 AM IST

PTI4_30_2017_000188B.jpg

ಹೈದರಾಬಾದ್‌: ಆಲ್‌ರೌಂಡ್‌ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಸನ್‌ರೈಸರ್ ಹೈದರಾ ಬಾದ್‌ ತಂಡವು ರವಿವಾರದ ಐಪಿಎಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು 48 ರನ್ನುಗಳಿಂದ ಸೋಲಿಸಿದೆ.

ನಾಯಕ ಡೇವಿಡ್‌ ವಾರ್ನರ್‌ ಅವರ ಅಮೋಘ ಶತಕದಿಂದಾಗಿ ಹೈದರಾಬಾದ್‌ ತಂಡವು 3 ವಿಕೆಟಿಗೆ 209 ರನ್ನುಗಳ ಬೃಹತ್‌ ಮೊತ್ತ ಪೇರಿಸಿ ದರೆ ಕೆಕೆಆರ್‌ ತಂಡವು 7 ವಿಕೆಟಿಗೆ 161 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಹಿಂದಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದ ನಾಯಕ ಗೌತಮ್‌ ಗಂಭೀರ್‌ ಬೇಗನೇ ಔಟಾಗುತ್ತಲೇ ಕೆಕೆಆರ್‌ನ ಕುಸಿತ ಆರಂಭಗೊಂಡಿತು. ರಾಬಿನ್‌ ಉತ್ತಪ್ಪ ಮತ್ತು ಮನೀಷ್‌ ಪಾಂಡೆ ಬಿರುಸಿನ ಆಟವಾಡಿದರೂ ದೊಡ್ಡ ಜತೆಯಾಟ ಆಡಲು ವಿಫ‌ಲದರು. ಈ ನಡುವೆ ಮಳೆಯಿಂದ ಅರ್ಧತಾಸು ಸ್ಥಗಿತಗೊಂಡಿತ್ತು.

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹೈದರಾಬಾದ್‌ ತಂಡವು ಆರಂಭದಿಂದಲೇ ಭರ್ಜರಿ ಆಟಕ್ಕೆ ಇಳಿದಿತ್ತು. ಬೃಹತ್‌ ಮೊತ್ತ ಪೇರಿಸುವ ಉದ್ದೇಶ ಇಟ್ಟುಕೊಂಡು ಆಡಿದ ವಾರ್ನರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದರು. ಅಮೋಘ ಶತಕ ಸಿಡಿಸುವ ಮೂಲಕ ಪಂದ್ಯದ ಹೀರೋ ಎನಿಸಿಕೊಂಡರು.

ಕೆಕೆಆರ್‌ ದಾಳಿಯನ್ನು ಪುಡಿಗಟ್ಟಿದ ವಾರ್ನರ್‌ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ್ದರು. ಆಗ ಧವನ್‌ ಮೊತ್ತ ಇನ್ನೂ ಎರಡಂಕೆ ತಲುಪಿರಲಿಲ್ಲ. 43 ಎಸೆತಗಳಲ್ಲಿ ಶತಕ ಸಿಡಿಸಿದ ಅವರು ಒಟ್ಟಾರೆ 59 ಎಸೆತ ಎದುರಿಸಿ 10 ಬೌಂಡರಿ ಮತ್ತು 8 ಸಿಕ್ಸರ್‌ ನೆರವಿನಿಂದ 126 ರನ್‌ ಗಳಿಸಿದರು. ಮೊದಲ ವಿಕೆಟಿಗೆ ಧವನ್‌ ಜತೆ 139 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಅವರು ತಂಡ ಬೃಹತ್‌ ಮೊತ್ತ ಪೇರಿಸುವ ಸೂಚನೆಯಿತ್ತರು.

ಸ್ಕೋರ್‌ ಪಟ್ಟಿ
ಸನ್‌ರೈಸರ್ ಹೈದರಾಬಾದ್‌

ಡೇವಿಡ್‌ ವಾರ್ನರ್‌    ಸಿ ಗಂಭೀರ್‌ ಬಿ ವೋಕ್ಸ್‌    126
ಶಿಖರ್‌ ಧವನ್‌    ರನೌಟ್‌    29
ಕೇನ್‌ ವಿಲಿಯಮ್ಸನ್‌    ರನೌಟ್‌    40
ಯುವರಾಜ್‌ ಸಿಂಗ್‌    ಔಟಾಗದೆ    6
ಇತರ:        8
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ)    209
ವಿಕೆಟ್‌ ಪತನ: 1-130, 2-171, 3-209
ಬೌಲಿಂಗ್‌: ನಥನ್‌ ಕೌಲ್ಟರ್‌ ನೈಲ್‌    4-0-34-0
ಉಮೇಶ್‌ ಯಾದವ್‌        4-0-30-0
ಕ್ರಿಸ್‌ ವೋಕ್ಸ್‌        4-0-46-1
ಯೂಸುಫ್ ಪಠಾಣ್‌        1-0-17-0
ಸುನೀಲ್‌ ನಾರಾಯಣ್‌    3-0-37-0
ಕುಲದೀಪ್‌ ಯಾದವ್‌    4-0-43-0

ಕೋಲ್ಕತಾ ನೈಟ್‌ರೈಡರ್
ಸುನೀಲ್‌ ನಾರಾಯಣ್‌    ಸಿ ವಾರ್ನರ್‌ ಬಿ ಸಿರಾಜ್‌    1
ಗೌತಮ್‌ ಗಂಭೀರ್‌    ಸಿ ರಶೀದ್‌ ಬಿ ಕೌಲ್‌    11
ರಾಬಿನ್‌ ಉತ್ತಪ್ಪ    ಸಿ ವಾರ್ನರ್‌ ಬಿ ಸಿರಾಜ್‌    53
ಮನೀಷ್‌ ಪಾಂಡೆ    ಸಿ ಮತ್ತು ಬಿ ಕುಮಾರ್‌    39
ಯೂಸುಫ್ ಪಠಾಣ್‌    ಸಿ ಕೌಲ್‌ ಬಿ ರಶೀದ್‌    12
ಶೆಲ್ಡನ್‌ ಜ್ಯಾಕ್ಸನ್‌    ಸಿ ರಶೀದ್‌ ಬಿ ಕುಮಾರ್‌    16
ಗ್ರ್ಯಾಂಡ್‌ಹೋಮ್‌    ಸಿ ರಶೀದ್‌ ಬಿ ಕೌಲ್‌    18
ಕ್ರಿಸ್‌ ವೋಕ್ಸ್‌    ಔಟಾಗದೆ    6
ಇತರ:        5
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    161
ವಿಕೆಟ್‌ ಪತನ: 1-9, 2-12, 3-90. 4-109, 5-130, 6-154, 7-161
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌    4-0-29-2
ಮೊಹಮ್ಮದ್‌ ಸಿರಾಜ್‌        4-0-26-2
ಸಿದ್ಧಾರ್ಥ್ ಕೌಲ್‌        4-0-26-2
ಮೊಸಸ್‌ ಹೆನ್ರಿಕ್ಸ್‌        3-0-31-0
ರಶೀದ್‌ ಖಾನ್‌        4-0-30-1
ಬಿಪುಲ್‌ ಶರ್ಮ        1-0-10-0

ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.